5:38 AM Wednesday8 - July 2026
ಬ್ರೇಕಿಂಗ್ ನ್ಯೂಸ್
ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ರಿಲೇಶನ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾದ 18ನೇ ಗ್ಲೋಬಲ್‌ ಕಾನ್‌ಕ್ಲೇವ್‌: ಲೋಗೋ ಅನಾವರಣ

31/05/2024, 20:49

ಮಂಗಳೂರು(reporterkarnataka.com): ಪಬ್ಲಿಕ್‌ ರಿಲೇಶನ್ಸ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಆರ್‌ಸಿಐ)ದ 18ನೇ ಗ್ಲೋಬಲ್‌ ಕಾನ್‌ಕ್ಲೇವ್‌, ಮಂಗಳೂರು ಚಾಪ್ಟರ್‌ ಸಹಯೋಗಲ್ಲಿ ನಗರದ ಹೊಟೇಲ್‌ ಮೋತಿ ಮಹಲ್‌ನಲ್ಲಿ ನ. 8ರಿಂದ 10 ವರೆಗೆ ನಡೆಯಲಿದ್ದು, ಈ ಸಮಾವೇಶದ ಲೋಗೋ ಅನಾವರಣ ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಕಾರ್ಡೋಲೈಟ್‌ ಸಂಸ್ಥೆಯ ಮುಖ್ಯಸ್ಥ, ಮಾಜಿ ಮೇಯರ್‌ ದಿವಾಕರ ಕದ್ರಿ ಅವರು ಲೋಗೋ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾವೇಶಕ್ಕೆ ಶುಭ ಹಾರೈಸಿದರು.
ಪಿಆರ್‌ಸಿಐ ಸ್ಥಾಪಕಾಧ್ಯಕ್ಷ ಎಂ.ಬಿ.ಜಯರಾಮ್‌ ಅವರು ಮಾತನಾಡಿ, ಈ ವರ್ಷದ ಸಮ್ಮೇಳನದ ಧ್ಯೇಯವಾಕ್ಯ ‘ರಿಕನೆಕ್ಟ್’. ಇದು ಉದ್ಯಮದಲ್ಲಿನ ಸಂಪರ್ಕಗಳನ್ನು ಮರು ನಿರ್ಮಾಣ ಮತ್ತು ಬಲಪಡಿಸುವ ಯೋಜನೆಯನ್ನು ಪ್ರತಿಬಿಂಬಿಸುತ್ತದೆ.
ಸಮಾವೇಶದಲ್ಲಿ ‘ಚಾಣಕ್ಯ’ ಮತ್ತು ‘ಕೌಟಿಲ್ಯ’ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪಿಆರ್‌, ಮಾಧ್ಯಮ ಮತ್ತು ಕಾರ್ಪೊರೇಟ್‌ ಸಂವಹನ ಮೊದಲಾದ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಲಾಗುತ್ತದೆ. ಪಿ.ಆರ್‌. ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಆಗುವ
ಬದಲಾವಣೆಗಳ ಮೇಲೆ ನಿರ್ದಿಷ್ಟ ಒತ್ತು ನೀಡುವ ಮೂಲಕ, ಬದಲಾಗುತ್ತಿರುವ ಉದ್ಯಮದ ಸವಾಲುಗಳ
ಕುರಿತು ಒಳನೋಟವುಳ್ಳ ಚರ್ಚೆಗಳು ಹಾಗೂ ಸಂವಾದಾತ್ಮಕ ವಿಚಾರಗೋಷ್ಠಿಗಳು ಸಮಾವೇಶದಲ್ಲಿರಲಿದೆ ಎಂದರು.
ಪಿಆರ್‌ ವೃತ್ತಿಪರರು,ಸಂವಹನಕಾರರು ಮತ್ತು ಸಂಬಂಧಿತ ಉದ್ಯಮಗಳಿಗೆ ಪ್ರಧಾನ ರಾಷ್ಟ್ರೀಯ ಸಂಸ್ಥೆಯಾಗಿ ಪಿಆರ್‌ಸಿಐ ಕೆಲಸ ಮಾಡುತ್ತಿದೆ. 2004ರಲ್ಲಿ ಇದು ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ
ಪ್ರಧಾನ ಕಚೇರಿ ಹೊಂದಿದ್ದು, ದೇಶದ 59 ನಗರಗಳಲ್ಲಿ ವ್ಯಾಪಿಸಿದೆ. ಯುಎಇ ಮತ್ತು ಶ್ರೀಲಂಕಾದಲ್ಲಿ ಘಟಕಗಳನ್ನು ಹೊಂದುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮತ್ತು ಸಮಾವೇಶದ ಚೇರ್ಮನ್‌ ಡಾ. ರಾಘವೇಂದ್ರ ಹೊಳ್ಳ,ರಾಜ್ಯ ಮುಖ್ಯಸ್ಥ ಪಶುಪತಿ ಶರ್ಮ, ಮಂಗಳೂರು ಘಟಕದ ಅಧ್ಯಕ್ಷ ಕೆನ್ಯೂಟ್‌ ಪಿಂಟೋ,ಕಾರ್ಯದರ್ಶಿ ಉದಯ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು