10:13 AM Wednesday26 - November 2025
ಬ್ರೇಕಿಂಗ್ ನ್ಯೂಸ್
ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್…

ಇತ್ತೀಚಿನ ಸುದ್ದಿ

ಜೆಪ್ಪು ಮಾರ್ಕೆಟ್ -ಬೋಳಾರ ಮಾರಿಗುಡಿ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್: ಪಾದಚಾರಿಗಳ ಗೋಳು ಕೇಳುವವರಿಲ್ಲ: ಸ್ಥಳೀಯ ಕಾರ್ಪೋರೇಟರ್ ಏನು ಮಾಡುತ್ತಿದ್ದಾರೆ?

20/04/2024, 15:58

ಮಂಗಳೂರು(reporterkarnataka.com): ನಗರದ ಯಾವುದೇ ಮೂಲೆಗೆ ಹೋಗಿ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುವುದು ಸಾಮಾನ್ಯವಾಗಿ ಹೋಗಿದೆ. ಯಾರಿಗೆ ಏನೇ ತೊಂದರೆಯಾಗಲಿ, ತನ್ನ ವಾಹನ ಪಾರ್ಕಿಂಗ್ ಆದ್ರೆ ಸಾಕು ಎನ್ನುವ ಮನಸ್ಥಿತಿಯೇ ಇದಕ್ಕೆ ಕಾರಣ. ಇಂತಹ ಸಮಸ್ಯೆ ಜೆಪ್ಪು ಮಾರ್ಕೆಟ್- ಬೋಳಾರ ಮಾರಿಗುಡಿ ರಸ್ತೆಯಲ್ಲೂ ಜೀವಂತವಾಗಿದೆ.
ಜೆಪ್ಪು ಮಾರ್ಕೆಟ್ ನಿಂದ ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ದೇವಸ್ಥಾನದ ರಥ ಬೀದಿ ರಸ್ತೆ ವರೆಗೆ ವಾಹನಗಳನ್ನು ರಸ್ತೆಯಲ್ಲಿ ಮತ್ತು ಪಾದಚಾರಿಗಳು ನಡೆದಾಡುವ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಿಯಾಗಿದೆ. ಇದರಿಂದ ಪಾದಚಾರಿಗಳು
ಸಂಕಷ್ಟ ಎದುರಿಸುವಂತಾಗಿದೆ.
ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಮಂಗಳಾದೇವಿ ಮತ್ತು ಶ್ರೀ ಕ್ಷೇತ್ರ ಬೋಳಾರ ಮಾರಿಗುಡಿ ತೆರಳುವ ಬಸ್ಸುಗಳು ಸಂಚರಿಸುವ ಈ ರಸ್ತೆಯು ಜನನಿಬಿಡ ಪ್ರದೇಶವಾಗಿದೆ. ಎಳೆಯ ಮಕ್ಕಳು, ವಯೋ ವೃದ್ಧರು ಈ ಭಾಗದಲ್ಲಿ ತೆರಳುವುದು ಕಷ್ಟಕರವಾಗಿದೆ. ಘನ ವಾಹನಗಳು ಸಂಚರಿಸುವಾಗ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ದ್ವಿಚಕ್ರ ವಾಹನಗಳಿಂದ ಪಾದಚಾರಿಗಳಿಗೆ ನಡೆದಾಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜೆಪ್ಪು ಮಾರ್ಕೆಟ್,ಮಹಾಲಸಾ ಕಂಪ್ಯೂಟರ್ ಕೇಂದ್ರ, ಪ್ರಧಾನ ಮಂತ್ರಿ ಜನೌಷಧಿ,ಬ್ಯಾಂಕುಗಳಿಗೆ ನಿತ್ಯ ದೈನಂದಿನ ತಮ್ಮ ವ್ಯವಹಾರಗಳಿಗೆ ತೆರಳುವವರಿಗೆ ಈ ಭಾಗದಲ್ಲಿ ನಡೆದಾಡುವುದು ದುಸ್ತರ ಎನಿಸಿದೆ.
ಆಯಾಯ ಕಟ್ಟಡಗಳಲ್ಲಿ ಪಾರ್ಕಿಂಗ್ ಮಾಡದೇ ಜನರು ನಡೆದಾಡುವ ಜಾಗದಲ್ಲಿ ಮತ್ತು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ಸಂಬಂಧ ಪಟ್ಟವರು ದಂಡ ವಿಧಿಸುವ ಅಗತ್ಯತೆ ಇದೆ. ಪ್ರಮುಖವಾಗಿ ಈ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಪಾದಚಾರಿಗಳಿಗೆ ಪ್ರಾಣಕ್ಕೆ ಸಂಕಷ್ಟ ಎದುರಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು