10:42 PM Saturday12 - July 2025
ಬ್ರೇಕಿಂಗ್ ನ್ಯೂಸ್
ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ… SCSP-TSP ಯೋಜನೆ | ಅಧಿಕಾರಿಗಳು ಮೈಮರೆತರೆ ಪ್ರಕರಣ ದಾಖಲು ಗ್ಯಾರಂಟಿ: ಸಚಿವ ಡಾ.… New Delhi | ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಚಿಕ್ಕಮಗಳೂರಿನ ವಂಶಿ ಮುಖ್ಯಮಂತ್ರಿ… Kodagu | ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ…

ಇತ್ತೀಚಿನ ಸುದ್ದಿ

ಕೆಂಜಾರು ಗೋಶಾಲೆಗೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ: ಗೋವುಗಳ ನೋವಿಗೆ ಮರುಗಿದ ಪದ್ಮರಾಜ್ ಆರ್.

30/03/2024, 20:48

ಮಂಗಳೂರು(reporterkarnataka.com):500ಕ್ಕೂ ಅಧಿಕ ಗೋವುಗಳು… ಆಳುದ್ದದ ಹಟ್ಟಿಯಲ್ಲಿ ಸಾವಕಾಶವಾಗಿ ನಿಲ್ಲಲು ಜಾಗವೇ ಇಲ್ಲ. ಇನ್ನು, ಮೇವು ಮೇಯಲು ಜಾಗವೆಲ್ಲಿ?, ಆರೋಗ್ಯಪೂರ್ಣವಾಗಿ ದಿನ ನಿರ್ವಹಣೆಯ ಮಾತೆಲ್ಲಿ?, ತಳಿ ಅಭಿವೃದ್ಧಿ ಮಾಡಲು ಕೇಂದ್ರವೆಲ್ಲಿ…?
ಇದು ಮಂಗಳೂರಿನ ಬಜಪೆ ಕೆಂಜಾರು ಕಪಿಲಾ ಪಾರ್ಕ್ ಗೋಶಾಲೆಯ ಕಥೆ – ವ್ಯಥೆ.


ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಶುಕ್ರವಾರ ಸಂಜೆ ಕಪಿಲಾ ಪಾರ್ಕ್ ಗೋಶಾಲೆಗೆ ಭೇಟಿ ನೀಡಿದರು. ನಿಲ್ಲಲು ಜಾಗವಿಲ್ಲದೇ ಒಂದರ ತಲೆ ಇನ್ನೊಂದು ಗೋವಿನ ಮೇಲೆ ಇರುವಂತೆ ಆಹಾರ ಮೇಯುತ್ತಿದ್ದ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟು 36 ಸೆಂಟ್ಸ್ ಜಾಗದಲ್ಲಿ 500ಕ್ಕೂ ಅಧಿಕ ಗೋವುಗಳು ನಿಲ್ಲಲಾಗದೇ ಹೊರಗೋಡಿ ಬರಲು ತವಕಿಸುತ್ತಿದ್ದವು. ಹಟ್ಟಿಯ ಹೊರಗಡೆ ಎಳೆ ಕರುಗಳು ದಿಕ್ಕು ಕಾಣದೆ ನಿಂತಿದ್ದವು.
ಗೋಶಾಲೆಯ ಪ್ರಕಾಶ್ ಅವರು ಗೋಶಾಲೆಯ ದೈನವೀ ಪರಿಸ್ಥಿತಿಯನ್ನು ವಿವರಿಸಿದರು. ಹಿಂದೂ ಪ್ರತಿಪಾದಕರು ಎಂದು ಹೇಳಿಕೊಂಡವರು ಭರವಸೆ ನೀಡಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು