5:02 AM Friday6 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಕೆಂಜಾರು ಗೋಶಾಲೆಗೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ: ಗೋವುಗಳ ನೋವಿಗೆ ಮರುಗಿದ ಪದ್ಮರಾಜ್ ಆರ್.

30/03/2024, 20:48

ಮಂಗಳೂರು(reporterkarnataka.com):500ಕ್ಕೂ ಅಧಿಕ ಗೋವುಗಳು… ಆಳುದ್ದದ ಹಟ್ಟಿಯಲ್ಲಿ ಸಾವಕಾಶವಾಗಿ ನಿಲ್ಲಲು ಜಾಗವೇ ಇಲ್ಲ. ಇನ್ನು, ಮೇವು ಮೇಯಲು ಜಾಗವೆಲ್ಲಿ?, ಆರೋಗ್ಯಪೂರ್ಣವಾಗಿ ದಿನ ನಿರ್ವಹಣೆಯ ಮಾತೆಲ್ಲಿ?, ತಳಿ ಅಭಿವೃದ್ಧಿ ಮಾಡಲು ಕೇಂದ್ರವೆಲ್ಲಿ…?
ಇದು ಮಂಗಳೂರಿನ ಬಜಪೆ ಕೆಂಜಾರು ಕಪಿಲಾ ಪಾರ್ಕ್ ಗೋಶಾಲೆಯ ಕಥೆ – ವ್ಯಥೆ.


ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಶುಕ್ರವಾರ ಸಂಜೆ ಕಪಿಲಾ ಪಾರ್ಕ್ ಗೋಶಾಲೆಗೆ ಭೇಟಿ ನೀಡಿದರು. ನಿಲ್ಲಲು ಜಾಗವಿಲ್ಲದೇ ಒಂದರ ತಲೆ ಇನ್ನೊಂದು ಗೋವಿನ ಮೇಲೆ ಇರುವಂತೆ ಆಹಾರ ಮೇಯುತ್ತಿದ್ದ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಂಬಂಧಪಟ್ಟ ಅಧಿಕಾರಿ ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಒಟ್ಟು 36 ಸೆಂಟ್ಸ್ ಜಾಗದಲ್ಲಿ 500ಕ್ಕೂ ಅಧಿಕ ಗೋವುಗಳು ನಿಲ್ಲಲಾಗದೇ ಹೊರಗೋಡಿ ಬರಲು ತವಕಿಸುತ್ತಿದ್ದವು. ಹಟ್ಟಿಯ ಹೊರಗಡೆ ಎಳೆ ಕರುಗಳು ದಿಕ್ಕು ಕಾಣದೆ ನಿಂತಿದ್ದವು.
ಗೋಶಾಲೆಯ ಪ್ರಕಾಶ್ ಅವರು ಗೋಶಾಲೆಯ ದೈನವೀ ಪರಿಸ್ಥಿತಿಯನ್ನು ವಿವರಿಸಿದರು. ಹಿಂದೂ ಪ್ರತಿಪಾದಕರು ಎಂದು ಹೇಳಿಕೊಂಡವರು ಭರವಸೆ ನೀಡಿದ್ದು ಬಿಟ್ಟರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು