1:46 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಮಂಗಳೂರು ಧರ್ಮಪ್ರಾಂತ್ಯದ ಮೆಗಾ ಬೈಬಲ್ ಸಮಾವೇಶಕ್ಕೆ ಚಾಲನೆ: 7 ದೀಪ ಬೆಳಗಿಸಿ ವಿಶೇಷ ಬಲಿಪೂಜೆ

22/02/2024, 21:38

ಮಂಗಳೂರು(reporterkarnataka.com):ಮಂಗಳೂರು ಧರ್ಮಪ್ರಾಂತ್ಯದ ಸೇವಾ ಕಮ್ಯುನಿಯನ್ ಮತ್ತು ಬೈಬಲ್ ಆಯೋಗ 50 ನೇ ವರ್ಷದ ಕ್ಯಾಥೋಲಿಕ್ ವರ್ಚಸ್ಸಿನ ನವೀಕರಣದ ಅಂಗವಾಗಿ ನಗರದ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್‍ನಲ್ಲಿ ಗುರುವಾರ ಮೆಗಾ ಬೈಬಲ್ ಮೆಗಾ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

ಈ ಸಮಾವೇಶ ಫೆ. 25ರ ವರೆಗೆ ನಡೆಲಿದೆ. ಕೇರಳದ ಡಿವೈನ್ ರಿಟ್ರೀಟ್ ಸೆಂಟರ್‍ ನಿಂದ ಫಾ.ಜೋಸೆಫ್ ಎಡಟ್ಟು ಅವರು ಸಮಾವೇಶದ ನೇತೃತ್ವ ವಹಿಸಿದ್ದರು. ಮಂಗಳೂರಿನ ಬಿಷಪ್ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಬೆಳ್ತಂಗಡಿ ಬಿಷಪ್ ಡಾ.ಲಾರೆನ್ಸ್ ಮುಕ್ಕುಜಿ, ಫಾ.ಕ್ಲಿಫರ್ಡ್ ಫರ್ನಾಂಡೀಸ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಬೈಬಲ್ ಆಯೋಗದ ಡಯೋಸಿಸನ್ ನಿರ್ದೇಶಕ ಫಾ. ವಿನ್ಸೆಂಟ್ ಸಿಕ್ವೇರಾ, ಕಾರ್ಯಕ್ರಮದ ಸಂಯೋಜಕ ಕೆವನ್ ಡಿಸೋಜ ಮತ್ತು ಎಂಡಿಎಸ್‍ಸಿ ಕಾರ್ಯದರ್ಶಿ ಬ್ಲಾಸಮ್ ರೇಗೊ, ತಂಡದ ಸದಸ್ಯರು ಕರ್ನಾಟಕ ಪ್ರಾದೇಶಿಕ ಸೇವಾ ಕಮ್ಯುನಿಯನï (ಕೆಆರ್‍ಎಸ್‍ಸಿ) ಮತ್ತು ರಾಷ್ಟ್ರೀಯ ಮಧ್ಯಸ್ಥಿಕೆ ಜಲ ಉದ್ಘಾಟನಾ ಮೆರವಣಿಗೆಯಲ್ಲಿ ಸೇರಿಕೊಂಡರು.
ಸಮಾರಂಭವು ಭವ್ಯವಾದ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಫಾ.ವಿನ್ಸೆಂಟ್ ಸಿಕ್ವೇರಾ ಅವರು ದೇವರ ವಾಕ್ಯದ ಮಹತ್ವವನ್ನು ಸಂಕೇತಿಸುವ ದೈತ್ಯ ಬೈಬಲ್
ಅನ್ನು ಹಿಡಿದುಕೊಂಡರು. ಬೈಬಲ್ ಅನ್ನು ಬಲಿಪೀಠದ ಮೇಲೆ ಗೌರವಯುತವಾಗಿ ಇರಿಸಲಾಯಿತು ಮತ್ತು ಬಿಷಪ್ ಡಾ.ಪೀಟರ್ ಪಾವ್ಲ್ ಅದನ್ನು ಧೂಪದ್ರವ್ಯದಿಂದ ಪೂಜಿಸಿದರು. ಬಿಷಪ್ ಡಾ.ಲಾರೆನ್ಸ್ ಬೈಬಲ್ ಗೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು.
ಎಮ್‍ಡಿಎಸ್‍ಸಿ, ಕೆಆರ್‍ಎಸ್‍ಸಿ ಮತ್ತು ಎನ್‍ಐಎನ್‍ನ ಪದಾಧಿಕಾರಿಗಳೊಂದಿಗೆ ರೆ.ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಪವಿತ್ರಾತ್ಮದ ಏಳು ಉಡುಗೊರೆಗಳನ್ನು ಪ್ರತಿನಿಧಿಸುವ ಏಳು ದೀಪಗಳನ್ನು ಬೆಳಗಿಸಿದರು. ಈ ಬಳಿಕ ವಿಶೇಷ ಬಲಿಪೂಜೆ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು