5:46 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಜಯಶ್ರಿ ಕೊರಳಿಗೆ ಎಸ್ಸೆಸ್ಸೆಲ್ಸಿ ವಿಜಯ ಮಾಲೆ: 44ನೇ ವಯಸ್ಸಿನಲ್ಲಿ ಮಂಗಳೂರು ವಿವಿ ಕಾಲೇಜು ಅಟೆಂಡರ್ ಪಾಸ್ !

09/08/2021, 21:16

ಅನುಷ್ ಪಂಡಿತ್ ಮಂಗಳೂರು
info.reporterkarnata@gmail.com

ಕಲಿಯಬೇಕು ಎನ್ನುವ ಛಲ ಇದ್ದರೆ ವಯಸ್ಸು ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ತಾಜ ನಿದರ್ಶನ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಟೆಂಪರರಿ ಅಟೆಂಡರ್ ಜಯಶ್ರೀ ಅವರು.

ಹೌದು, ಕಲಿಯಬೇಕು ಎನ್ನುವ ಮನಸ್ಸಿದ್ದರೆ ವಯಸ್ಸಿನ ಮಾತಿಲ್ಲ ಎನ್ನುವಂತೆ ತನ್ನ 44 ವಯಸ್ಸಿನ ಕೆಲಸದ ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಿರ್ಣರಾಗಿದ್ದಾರೆ. ಮೂಲತ ವೆಲೆನ್ಸಿಯ ಸೂಟರ್ ಪೇಟೆಯಲ್ಲಿ ತನ್ನ ಪತಿ ಪ್ರದೀಪ್ ಅವರೊಂದಿಗೆ  ವಾಸಿಸುತ್ತಿದ್ದಾರೆ. ಪತಿ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯಶ್ರೀ ಅವರು 5ನೇ ತರಗತಿ ವರೆಗೆ ಕಲಿತಿದ್ದಾರೆ.10ನೇ ತರಗತಿಗೆ ನೇರವಾಗಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಟ್ಯೂಶನ್ ಕ್ಲಾಸ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ಬೆಳೆದ ಇವರು ಮಂಗಳೂರಿನ ಪದಂಗಡಿಯ ಗಂಧಕಾಡ್ ಪರಿಸರದಲ್ಲಿ ದಿವಂಗತ ಸೀತಾರಾಮ ಹಾಗೂ ಜಾನಕಿ (75) ಅವರಿಗೆ 4 ಹೆಣ್ಣು ಹಾಗೂ1 ಗಂಡು ಮಕ್ಕಳು. ಮೂವರು ಅಕ್ಕಂದಿರ ನಂತರದವರೇ ಜಯಶ್ರೀ.

ಜಯಶ್ರೀ ಅವರೆ ಹೇಳುವ ಪ್ರಕಾರ ಯೂನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶೋಭಾ ಮೇಡಂ ಹಾಗೂ ಉದಯ ಕುಮಾರ್ ಇರ್ವತ್ತೂರು ಅವರೆ ಕಲಿಯಲು ದಾರಿ ತೋರಿಸಿದವರು. ಕಲಿಯುವ ವಯಸ್ಸಲ್ಲಿ ಕಲಿಯಲು ಮನಸಿದ್ದರೂ ಪ್ರೇರೇಪಣೆ ನೀಡುವರಾರಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನನಗೆ ಪರ್ಮನೆಂಟ್ ಆದರೆ ಸಂತೋಷ ಜೀವನಕ್ಕೆ ದಾರಿಯಾಗುತ್ತದೆ ಎನ್ನುವ ಆಶಯ. ಈಗಿನ ಮಕ್ಕಳಿಗೆ ನಾನು ಹೇಳುವುದೊಂದೇ ಅವಕಾಶ ಸಿಕ್ಕಾಗ ಕಲಿಯಿರಿ ಮತ್ತೆ ಪರಿತಪಿಸ ಬೇಡಿ. ಕಳೆದು ಹೋದ ಸಮಯ ಮತ್ತೆ ಬಾರದು

ಜಯಶ್ರೀ, ಅಟೆಂಡರ್, ಮಂಗಳೂರು ವಿವಿ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು