7:29 PM Friday13 - February 2026
ಬ್ರೇಕಿಂಗ್ ನ್ಯೂಸ್
ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ಜಯಶ್ರಿ ಕೊರಳಿಗೆ ಎಸ್ಸೆಸ್ಸೆಲ್ಸಿ ವಿಜಯ ಮಾಲೆ: 44ನೇ ವಯಸ್ಸಿನಲ್ಲಿ ಮಂಗಳೂರು ವಿವಿ ಕಾಲೇಜು ಅಟೆಂಡರ್ ಪಾಸ್ !

09/08/2021, 21:16

ಅನುಷ್ ಪಂಡಿತ್ ಮಂಗಳೂರು
info.reporterkarnata@gmail.com

ಕಲಿಯಬೇಕು ಎನ್ನುವ ಛಲ ಇದ್ದರೆ ವಯಸ್ಸು ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ತಾಜ ನಿದರ್ಶನ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಟೆಂಪರರಿ ಅಟೆಂಡರ್ ಜಯಶ್ರೀ ಅವರು.

ಹೌದು, ಕಲಿಯಬೇಕು ಎನ್ನುವ ಮನಸ್ಸಿದ್ದರೆ ವಯಸ್ಸಿನ ಮಾತಿಲ್ಲ ಎನ್ನುವಂತೆ ತನ್ನ 44 ವಯಸ್ಸಿನ ಕೆಲಸದ ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಿರ್ಣರಾಗಿದ್ದಾರೆ. ಮೂಲತ ವೆಲೆನ್ಸಿಯ ಸೂಟರ್ ಪೇಟೆಯಲ್ಲಿ ತನ್ನ ಪತಿ ಪ್ರದೀಪ್ ಅವರೊಂದಿಗೆ  ವಾಸಿಸುತ್ತಿದ್ದಾರೆ. ಪತಿ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯಶ್ರೀ ಅವರು 5ನೇ ತರಗತಿ ವರೆಗೆ ಕಲಿತಿದ್ದಾರೆ.10ನೇ ತರಗತಿಗೆ ನೇರವಾಗಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಟ್ಯೂಶನ್ ಕ್ಲಾಸ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ಬೆಳೆದ ಇವರು ಮಂಗಳೂರಿನ ಪದಂಗಡಿಯ ಗಂಧಕಾಡ್ ಪರಿಸರದಲ್ಲಿ ದಿವಂಗತ ಸೀತಾರಾಮ ಹಾಗೂ ಜಾನಕಿ (75) ಅವರಿಗೆ 4 ಹೆಣ್ಣು ಹಾಗೂ1 ಗಂಡು ಮಕ್ಕಳು. ಮೂವರು ಅಕ್ಕಂದಿರ ನಂತರದವರೇ ಜಯಶ್ರೀ.

ಜಯಶ್ರೀ ಅವರೆ ಹೇಳುವ ಪ್ರಕಾರ ಯೂನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶೋಭಾ ಮೇಡಂ ಹಾಗೂ ಉದಯ ಕುಮಾರ್ ಇರ್ವತ್ತೂರು ಅವರೆ ಕಲಿಯಲು ದಾರಿ ತೋರಿಸಿದವರು. ಕಲಿಯುವ ವಯಸ್ಸಲ್ಲಿ ಕಲಿಯಲು ಮನಸಿದ್ದರೂ ಪ್ರೇರೇಪಣೆ ನೀಡುವರಾರಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನನಗೆ ಪರ್ಮನೆಂಟ್ ಆದರೆ ಸಂತೋಷ ಜೀವನಕ್ಕೆ ದಾರಿಯಾಗುತ್ತದೆ ಎನ್ನುವ ಆಶಯ. ಈಗಿನ ಮಕ್ಕಳಿಗೆ ನಾನು ಹೇಳುವುದೊಂದೇ ಅವಕಾಶ ಸಿಕ್ಕಾಗ ಕಲಿಯಿರಿ ಮತ್ತೆ ಪರಿತಪಿಸ ಬೇಡಿ. ಕಳೆದು ಹೋದ ಸಮಯ ಮತ್ತೆ ಬಾರದು

ಜಯಶ್ರೀ, ಅಟೆಂಡರ್, ಮಂಗಳೂರು ವಿವಿ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು