1:12 AM Monday22 - September 2025
ಬ್ರೇಕಿಂಗ್ ನ್ಯೂಸ್
ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್…

ಇತ್ತೀಚಿನ ಸುದ್ದಿ

ಕಾಫಿನಾಡಿಗೆ ಲಂಡನ್ ಅತಿಥಿ!: ಹಿಂದೂ ಧರ್ಮದ ಬಗ್ಗೆ ಅಧ್ಯಯನಕ್ಕೆ ಬಂದ ವಿದೇಶಿ ಪ್ರಜೆಗೆ ರಾಮ ಮಂದಿರದ ಮಂತ್ರಾಕ್ಷತೆ!

11/01/2024, 20:04

ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು

info.reporterkarnataka@gmail.com

ಭಾರತಕ್ಕೆ 9ನೇ ಬಾರಿ ಆಗಮಿಸಿರುವ, ಪ್ರಪಂಚದ 25 ಕ್ಕೂ ಹೆಚ್ಚು ದೇಶಗಳನ್ನ ಸೈಕಲ್ ನಲ್ಲೆ ಸುತ್ತಿರುವ ಇಂಗ್ಲೆಂಡ್ ಪ್ರಜೆಯಾದ ಹೆರಾಲ್ಡ್ ಕೊಪ್ಪ ತಾಲೂಕಿನ ಮೆಣಸಿನಹಾಡ್ಯ ಹತ್ತಿರ ಜಂಗಲ್ ಕ್ಯಾಂಪ್ ಹಾಕಿದ್ದಾರೆ.



ಮುಂಜಾನೆ 6ಕ್ಕೆ ಗಮನಿಸಿದ ಗ್ರಾಮಸ್ಥರು ಹೋಗಿ ಕಾಫಿ ನೀಡಿ, ಭಾರತದ ಮಲೆನಾಡಿನ ಸಂಸ್ಕೃತಿಯ ಬಗ್ಗೆ ಸಹೋದರರಾದ ವಾಸೇಗೌಡ ,, ಸಂಪತ್ ಕುಮಾರ್ ಅವರ ಭಾಷೆಯಲ್ಲಿಯೇ ವಿವರಿಸಿದರು. ನಿನ್ನೆಯಿಂದ ಊಟವನ್ನೆ ಮಾಡದ ಅವರಿಗೆ ಬೆಳಿಗ್ಗೆಯ ಉಪಹಾರ ನೀಡಿ, ಹಿಂದೂ ಧರ್ಮದ ಮತ್ತು ಭಗವದ್ಗೀತೆ ಬಗ್ಗೆ ಚಿಕ್ಕದಾಗಿ ಮಾಹಿತಿಯನ್ನು ವಾಸೇಗೌಡ ನೀಡಿದರು. ಹಾಗೆ ರಾಮ ಮಂತ್ರಾಕ್ಷತೆ ನೀಡಿ, ರಾಮ ಮಂದಿರದ ಬಗ್ಗೆ ಮಾಹಿತಿ ನೀಡಿದರು. ಕೈಯಲ್ಲಿ ಓಂ ಟ್ಯಾಟೂ ಹಾಕಿಕೊಂಡಿದ್ದ ಅವರು ಹಿಂದು ಧರ್ಮದ ಬಗ್ಗೆ ತಿಳಿಯಲು ಹೊರಟಿರುವುದು ಹೆಮ್ಮೆ ಅನ್ನಿಸುತ್ತಿದೆ‌.

ಇತ್ತೀಚಿನ ಸುದ್ದಿ

ಜಾಹೀರಾತು