10:36 PM Tuesday1 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ತೊಕ್ಕೊಟ್ಟು: ಜನವರಿ 13ರಂದು ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕೃತಿ ಲೋಕಾರ್ಪಣೆ

09/01/2024, 12:25

ಮಂಗಳೂರು(reporterkarnataka.com): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಜನವರಿ 13ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಮಿನಿ ಹಾಲ್ ನಲ್ಲಿ ಸಂಕ್ರಾಂತಿ ಕಾವ್ಯಧಾರೆ ಸಾಹಿತ್ಯ ಗೋಷ್ಠಿ ಮತ್ತು ಕಡಲ‌ಹನಿ ಒಡಲ ಧ್ವನಿ ( ರತ್ನಾ ಭಟ್ ,ಹಾ .ಮ ಸತೀಶ, ಡಾ ಸುರೇಶ್ ನೆಗಳಗುಳಿ) ಗಜಲ್ ಸಂಕಲನದ ಲೋಕಾರ್ಪಣಾ ಸಮಾರಂಭ ಬೆಳಗ್ಗೆ ಗಂಟೆ 9ರಿಂದ ನಡೆಯಲಿದೆ.
ಈ ಸಮಾರಂಭದ ಉದ್ಘಾಟನೆ ಯನ್ನ ಕೊಟ್ರೇಶ ಉಪ್ಪಾರ ( ಕೇ.ಕ.ಸಾ.ವೇ ಸ್ಥಾಪಕಾಧ್ಯಕ್ಷರು ಬೆಂಗಳೂರು) ಇವರು ಮಾಡಲಿದ್ದಾರೆ. ವಾಸು ಸಮುದ್ರವಲ್ಲಿ ( ಕೇ.ಕ.ಸಾ.ವೇ ಮುಖ್ಯ ನಿರ್ವಾಹಕರು) ಅವರು ಆಶಯ ನುಡಿ ನುಡಿಯಲಿದ್ದಾರೆ.
ಇದೇ ವೇಳೆ ರತ್ನಾ ಭಟ್, ಹಾ.ಮ ಸತೀಶ ಮತ್ತು ಡಾ ಸುರೇಶ ನೆಗಳಗುಳಿ ಒಟ್ಟಾಗಿ ಸಂಕಲಿಸಿದ ಕಡಲ ಹನಿ ಒಡಲ ಧ್ವನಿ ಗಜಲ್ ಸಂಕಲನದ ಲೋಕಾರ್ಪಣೆಯನ್ನು ಮಹಮ್ಮದ್ ಬಡ್ಡೂರು( ಖ್ಯಾತ ಗಜಲ್ ಕವಿ, ನಟ, ಮಂಗಳೂರು) ಇವರು ಮಾಡಲಿದ್ದಾರೆ.
ಸಾಹಿತ್ಯ ಗೋಷ್ಠಿ ಅಧ್ಯಕ್ಷತೆಯನ್ನು ರತ್ನಾ ಕೆ. ಭಟ್ ತಲಂಜೇರಿ( ವಿಶ್ರಾಂತ ಮುಖ್ಯೋಪಾಧ್ಯಾಯಿನಿ, ಸಾಹಿತಿ, ಯಕ್ಷಗಾನ ಪಟು ಪುತ್ತೂರು) ವಹಿಸಲಿದ್ದಾರೆ.
ಗೋಷ್ಠಿ ಚಾಲನೆಯನ್ಮು ವೆಂಕಟ್ ಭಟ್ ಎಡನೀರು ( ಖ್ಯಾತ ವ್ಯಂಗ್ಯ ಚಿತ್ರಗಾರರು ಹಾಗೂ ನಗೆ ಚುಟುಕು ಕವಿಗಳು) ನಡೆಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಡಾ ಸುರೇಶ ನೆಗಳಗುಳಿ,( ದ.ಕ. ಜಿಲ್ಲಾ ವೇದಿಕೆ ಅಧ್ಯಕ್ಷರು ಮಂಗಳೂರು)ವಹಿಸಲಿದ್ದಾರೆ.
ಗಿರಿಜಾ ಎಂಟರ್ ಪ್ರೈಸಸ್ ನ ಲಯನ್ ಶ್ರೀನಾಥ್, ನವೀನ್ ನಾಯಕ್ ( ಉದ್ಯಮಿ ತೊಕ್ಕೊಟ್ಟು ಮಂಗಳೂರು)
ಕೊಳ್ಚಪ್ಪೆ ಗೋವಿಂದ ಭಟ್ ( ಸಾಹಿತಿ ಮಂಗಳೂರು)
ರೇಮಂಡ್ ಡಿ‌ಕುನ್ಹ ( ಪಿಂಗಾರ ಪತ್ರಿಕೆ ಮಂಗಳೂರು) ಪರಿಮಳಾ ಮಹೇಶ್ (ಉಪಾಧ್ಯಕ್ಷರು ಕೇ‌..ಕ.ಸಾ.ವೇ ದ.ಕ. ಸಮಿತಿ) ಮತ್ತು ಮನ್ಸೂರ್ ಮುಲ್ಕಿ (ಉಳ್ಳಾಲ ಎ‌ಎಸ್.ಐ) ಉಪಸ್ಥಿತರಿರುವರು. ಈ ಸಾಹಿತ್ಯ ಸಂಭ್ರಮಕ್ಕೆ ಸರ್ವ ಸಾಹಿತ್ಯಾಸಕ್ತರಿಗೆ ಸ್ವಾಗತ ಎಂದು ಅದ್ಯಕ್ಷ ಡಾ ಸುರೇಶ ನೆಗಳಗುಳಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು