8:32 PM Thursday13 - August 2026
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ

ಇತ್ತೀಚಿನ ಸುದ್ದಿ

ಚಳ್ಳಕೆರೆ: ಬರಗಾಲದಲ್ಲಿ 2 ಲಕ್ಷ ಸಾಲ ಮಾಡಿ ಬೆಳೆದ ಕರ್ಬುಜ ಹಣ್ಣಿನ ಬೆಳೆ ಸಂಪೂರ್ಣ ನಾಶ; ರೈತ ಕಂಗಾಲು

21/12/2023, 20:59

ಮುರುಡೇ ಗೌಡ ಚಳ್ಳಕೆರೆ ಚಿತ್ರದುರ್ಗ

info.reporterarnataka@gmail.com

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ರೈತನೊಬ್ಬ ಕರ್ಬುಜ ಹಣ್ಣಿನ ಬೆಳೆ ಬರಗಾಲದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದು, ರೈತ ಕಂಗಾಲಾಗಿದ್ದಾರೆ.

ಕಿರಣ್ ಗೌಡ ಎಂಬ ರೈತ ತನ್ನ ಮೂರೂವರೆ ಎಕರೆ ಜಮೀನಿನಲ್ಲಿ ಕರ್ಬುಜ ಹಣ್ಣನ್ನು ಬೆಳೆದಿದ್ದಾರೆ. ಆದರೆ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ, ಕರ್ಬುಜ ಹಣ್ಣುಗಳು ಹೊಸ ಬಗೆಯ ರೋಗಕ್ಕೆ ತುತ್ತಾಗಿ ಹಣ್ಣುಗಳು ಡ್ಯಾಮೇಜ್ ಆಗಿ ಹೋಗುತ್ತಿದ್ದು. ಇದರಿಂದ ಒಂದು ಹಣ್ಣನ್ನು ಸಹ ಮಾರಾಟ ಮಾಡದೆ ಕರ್ಬುಜ ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾರೆ.
ಅನಂತಪುರದ ಶ್ರಾವಣಿ ಅಂಗಡಿಯಲ್ಲಿ, ಪಟಜಮ್ ತಳಿಯ ನಿರ್ಮಲಾ 24-24 ಬೀಜವನ್ನು ತಂದು ಬಿತ್ತನೆ ಮಾಡಿದ್ದಾರೆ. ಬೆಳೆಯು ಸಹ ಉತ್ತಮ ರೀತಿಯಲ್ಲಿ ಬಂದಿದ್ದು, ಫಸಲಿಗೆ ಬಂದಂತಹ ಸಮಯದಲ್ಲಿ ಹಣ್ಣುಗಳು ಸಂಪೂರ್ಣವಾಗಿ ಹೊಸ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದು. ಇದರಿಂದ ರೈತನ ಕೈ ಸೇರಬೇಕಿದ್ದ 25 ರಿಂದ 30 ಟನ್ ಹಣ್ಣು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ.
ಬರಗಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿ ಕರ್ಬುಜ ಹಣ್ಣನ್ನು ಬೆಳೆಯಲು ಮುಂದಾಗಿದ್ದೇನೆ. ಆದರೆ ಫಸಲಿಗೆ ಬಂದ ಹಣ್ಣುಗಳು ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿ ಆಗಿ ಹೋಗುತ್ತಿವೆ. ಇದರಿಂದ ಅಂಗಡಿಯಿಂದ ತಂದ ಬೀಜದ ಫಾಲ್ಟ್ ಅಥವಾ ಹೊಸ ತಳಿಯ ರೋಗ ಬಂದಿದೆಯಾ ಎಂಬುದು ತಿಳಿಯುತ್ತಿಲ್ಲ. ಬೆಳೆಯು ಸಂಪೂರ್ಣವಾಗಿ ನಷ್ಟವಾಗಿದ್ದು, ಇದರಿಂದ ಬೆಳೆಯನ್ನು ನಾಶಪಡಿಸಲು ಮುಂದಾಗಿದ್ದೇನೆ ಎಂದು ರೈತ ಕಿರಣ್ ಗೌಡ ಹೇಳುತ್ತಾರೆ.
ಇದರಿಂದ ಸಂಬಂಧ ಪಟ್ಟ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ರೈತರ ಜಮೀನಿಗೆ ಬಂದು ಸಂಶೋಧನೆ ನಡೆಸಿ ರೈತರ ಕೈ ಸೇರಬೇಕಿದ್ದ ಬೆಳೆಗೆ ಏನು ತೊಂದರೆ ಆಗಿದೆ ಎಂಬುದನ್ನು ತಿಳಿಸಿ.ಇಲಾಖೆ ವತಿಯಿಂದ ಪರಿಹಾರ ಕೊಡಬೇಕು ಎಂದು ಯುವ ರೈತ ಕಿರಣ್ ಗೌಡ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು