12:16 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪಾಂಡೇಶ್ವರ ಕರ್ನಾಟಕ ಶಿವ ಸೇವಾ ಸಮಿತಿಯಿಂದ ಡಾ ಸುರೇಶ ನೆಗಳಗುಳಿ, ಮಣಿಕಾಂತ್ ಕದ್ರಿ ಸಹಿತ ಸಾಧಕರಿಗೆ ಸನ್ಮಾನ

21/12/2023, 13:36

ಮಂಗಳೂರು(reporterkarnataka.com): ಪಾಂಡೇಶ್ವರದಲ್ಲಿರುವ ಕರ್ನಾಟಕ ಶಿವ ಸೇವಾ ಸಮಿತಿ ವತಿಯಿಂದ ನಡೆಸಿದ 95ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಮೂಲವ್ಯಾಧಿ ಕ್ಷಾರ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರಿಗೆ ಶಾಲು ಫಲಕ ಸಹಿತ ಸಾಧಕ ಸನ್ಮಾನ ಮಾಡಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ನೆಗಳಗುಳಿಯವರು ಮಾತನಾಡುತ್ತಾ, ಸಣ್ಣ ಇರುವೆಯಂತಹ ನನಗೆ ದೈವ ಸನ್ನಿಧಿಯಲ್ಲಿ ನೀಡಿದ ಈ ಪುರಸ್ಕಾರ ಮೊದಲು ಲಭಿಸಿದ ನೂರಾರು ಪ್ರಶಸ್ತಿಗಳಿಂದ ಹೆಚ್ವಿನ ತುಲಾಭಾರ ಹೊಂದಿದೆ. ವೈದ್ಯನಾದ ನಾನು ನನ್ನ ಸೇವೆಯನ್ನು ಮಾಡಲು ಸದಾ ಸಿದ್ಧನಿದ್ದೇನೆ. ಮಂಗಳಾ ಆಸ್ಪತ್ರೆಯಲ್ಲಿ ಕರೆಮಾಡಿ ಸಂಪರ್ಕ ಮಾಡಲು ಈ ಮೂಲಕ ಕರೆ ನೀಡುತ್ತಿದ್ದು ತ್ಯಾಗೇ ನೈಕೇ ಅಮೃತತ್ವ ಮಾನುಷು; ಎಂಬ ಉಕ್ತಿ ಸದಾ ಯಶಸ್ಕರ ಎನ್ನುತ್ತಾ ಇದೇ ಕಾರ್ಯಕ್ರಮದ ವಿಷಯವಾದ ಸ್ವರಚಿತ ಮುಕ್ತಕ ಮಾಲೆಯ ವಾಚನ ಮಾಡಿದರು.
ಕಾಂತಪ್ಪ ಬಂಗೇರ ಬಿ‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್,ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶಿತ್ ಪಿರೇರಾ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ನಟ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪಿಂಗಾರ ಮುಖ್ಯಸ್ಥ ರೇಮಂಡ್ ಡಿಕುನ್ಹ , ಚಲನ ಚಿತ್ರ ನಟ ರಾಜಗುಳಿಗ ಕ್ಷೇತ್ರ ಬಂದಲೆಯ ಧರ್ಮದರ್ಶಿ ಸತೀಶ್ ಬಂದಲೆ, ಮೂಡುಬಿದಿರೆಯ ಗಣೇಶ್ ಪ್ರಸಾದ್,ಹಿಂದುಳಿದ ವರ್ಗ ಅಧ್ಯಕ್ಷ ಸದಾಶಿವ ಕುಲಾಲ್ ,ದೈಹಿಕ ಶಿಕ್ಷಕ ಭಾಸ್ಕರ್ ಪಾಲಡ್ಕ, ಮರಿಪಿಲಿ ಪ್ರಶಸ್ತಿ ವಿಜೇತ ಮಾ. ಶಶಾಂಕ್ ಸಹಿತ ಇತರ ಹಲವು ಕಲಾವಿದರನ್ನು ಶಾಲು ಹಾರ ಸಹಿತ ಸನ್ಮಾನಿಲಾಯಿತು.
ಅಧ್ಯಕ್ಷರು ಮಾತನಾಡುತ್ತಾ ಶಿವ ಕ್ಷೇತ್ರದ ಸ್ಥಾಪನೆಯಾದ ಪರಿ ಹಾಗೂ ಶತಮಾನದತ್ತ ದಾಪು ಕಾಲು ಹಾಕುವ ವಿಚಾರ ತಿಳಿಸಿದರು.
ಅಧ್ಯಕ್ಷ ಯಾದವ ಅತ್ತಾವರ, ಅಮರನಾಥ ಪಾಂಡೇಶ್ವರ ಮತ್ತಿತರ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ವಾರ್ಷಿಕೋತ್ಸವು ಗಣ ಹೋಮ,ಸತ್ಯನಾರಾಯಣ ಪೂಜೆ,ಕ್ಷೇತ್ರ ಪಾಲ ಗುಳಿಗ ದೈವ ಸೇವೆ,ಭಜನೆ ಸಹಿತವಾಗಿ ಮುಂಜಾನೆಯಿಂದ ರಾತ್ರಿ ಪರ್ಯಂತ ಅದ್ದೂರಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮೈತಿದಿ ತುಳು ಸಾಂಸಾರಿಕ ನಾಟಕ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು