9:07 PM Saturday14 - February 2026
ಬ್ರೇಕಿಂಗ್ ನ್ಯೂಸ್
ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ…

ಇತ್ತೀಚಿನ ಸುದ್ದಿ

ಥೇಟ್ ಮಹಾತ್ಮ ಗಾಂಧೀಜಿಯಂತೆ ಇವರ ವೇಷ!: ರಾಷ್ಟ್ರಪಿತ ಪುತ್ಥಳಿಯಂತೆ ತಾಸುಗಟ್ಟಲೆ ಕದಲದೆ ನಿಲ್ಲುತ್ತಾರೆ!!

25/11/2023, 19:33

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಮನುಷ್ಯ ತನ್ನ ಜೀವನೋಪಾಯ ಹಾಗೂ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುತ್ತಾನೆ ನೀವೇ ನೋಡಿ.
ಇಲ್ಲೊಬ್ಬ ವ್ಯಕ್ತಿ ತನ್ನ ಹೊಟ್ಟೆಪಾಡಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೆ ನಾಚಿಸುವಂತಹ ವೇಷದಾರಿಯಾಗಿ ನಿಂತಿದ್ದಾನೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಿಢೀರ್ ಪ್ರತ್ಯಕ್ಷವಾದ ಈ ಮಹಾತ್ಮ ನೋಡುವುದಕ್ಕೆ ಥೇಟ್ ಮಹಾತ್ಮ ಗಾಂಧಿಯಂತೆಯೇ ಕಾಣುತ್ತಿದ್ದಾನೆ. ಇವನು ನಿಂತಿರುವ ಭಂಗಿ ಯಾವುದೇ ಮಹಾತ್ಮ ಗಾಂಧೀಜಿಯವರ ಚಿತ್ರ ಹಾಗೂ ಪುತ್ತಳಿಗಿಂತ ಕಮ್ಮಿ ಇಲ್ಲ. ತಲೆಯಿಂದ ಉಂಗುಷ್ಟದವರೆಗೂ ಒಂದು ರೀತಿ ಸಿಲ್ವರ್ ಬಣ್ಣ ಹಚ್ಚಿಕೊಂಡು ಕಣ್ಣಿಗೆ ಕನ್ನಡಕ ಕೈಯಲ್ಲಿ ಕೋಲು ಹಿಡಿದು ಕೊಂಡು ನಿಂತಿರುವ ದೃಶ್ಯ ಗಾಂಧೀಜಿ ಅವರ ಪುತ್ಥಳಿ ಯಂತೆ ಭಾಸವಾಗುತ್ತಿದೆ.


ಸುಡು ಬಿಸಿಲಿನಲ್ಲಿಯೇ ಯಾವುದೇ ಚಲನವಲನವಿಲ್ಲದೆ, ಕಣ್ಣು ಸಹ ಮಿಟುಕಿಸದೆ, ಮಾತನ್ನು ಸಹ ಆಡದೇ ನಿರ್ಜೀವ ಶಿಲೆಯಂತೆಯೇ ನಿಂತಿರುವ ಈತನ ಭಂಗಿ ನಿಜಕ್ಕೂ ಮೆಚ್ಚುವಂಥದ್ದೆ ಆಗಿದೆ.
ದೇವಾಲಯಕ್ಕೆ ಬರುವ ಭಕ್ತರು ಇದನ್ನು ನೋಡಿ ಇದೊಂದು ಪುತ್ತಳಿಯೇ ಇರಬೇಕು ಎಂದು ಭಾವಿಸಿದರೆ ಮತ್ತೆ ಕೆಲವರು ಆತನ ಮೈ ಕೈ ಹಾಗೂ ಕೋಲನ್ನು ಮುಟ್ಟಿ ಇದು ಪುತ್ಥಳಿಯೋ ಅಥವಾ ಮನುಷ್ಯನೋ ಎಂದು ಖಾತರಿಪಡಿಸಿಕೊಳ್ಳುತ್ತಿದ್ದರು.
ಕೆಲವು ಭಕ್ತರು ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದರೆ ಮತ್ತೆ ಕೆಲವರು ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟು ತಮ್ಮ ಕೈಲಾದ ಹಣ ಸಹಾಯ ಮಾಡುತ್ತಿದ್ದರು.
ಒಟ್ಟಾರೆ ಯಾರೇ ಮುಟ್ಟಿದರು ಏನೇ ಮಾತನಾಡಿದರು ತಾನು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಜೀವ ವಸ್ತುವಿನಂತೆ ನಿಂತುಕೊಂಡೇ ಎಲ್ಲಾ ಸಾರ್ವಜನಿಕರ ಗಮನ ಸೆಳೆದ ಮಹಾತ್ಮ ಗಾಂಧಿ ವೇಷದಾರಿ.

ಇತ್ತೀಚಿನ ಸುದ್ದಿ

ಜಾಹೀರಾತು