6:04 AM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ಯಾವ ಅ್ಯಂಗಲ್ ನಲ್ಲಿ ನೋಡಿದ್ರೂ ಇದು ಜನ ಓಡಾಟದ ರಸ್ತೆ ಹಾಗೆ ಕಾಣಿಸುತ್ತದೆಯೇ?: ಕಾರ್ಪೊರೇಟರ್ ಸಾಹೇಬ್ರೇ ಎಲ್ಲಿದ್ದೀರಿ? 

01/08/2021, 19:43

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಇದೊಂದು ರಸ್ತೆ ಅಂತ ಯಾವ ಆ್ಯಂಗಲ್ ನಲ್ಲಿ ನೋಡಿದ್ರೂ ಗೊತ್ತಾಗುವುದಿಲ್ಲ. ಆದರೆ ಇದು ರಸ್ತೆಯೇ ಹೌದು. ದಿನಕ್ಕೆ ಸಾವಿರಾರು ಮಂದಿ ಈ ದಾರಿಯಾಗಿ ತಮ್ಮ ದೈನಂದಿನ ಕೆಲಸಕ್ಕಾಗಿ ತೆರಳುತ್ತಾರೆ. ದ್ವಿಚಕ್ರ ವಾಹನಗಳ ಸವಾರರು ಕೂಡ ಕುಸ್ತಿ ಮಾಡಿ ಸಂಚಾರ ನಡೆಸುತ್ತಾರೆ.


ಹಾಗೆಂತ ಇದೇನು ಪಶ್ಚಿಮಘಟ್ಟ ತಪ್ಪಲಿನ ಯಾವುದೇ ಬುಡಗಟ್ಟು ಜನಾಂಗದ ಕಾಲೋನಿ ಸೇರುವ ರಸ್ತೆಯಲ್ಲ. ಬದಲಿಗೆ ಮರೋಳಿಯ ಇತಿಹಾಸ ಪ್ರಸಿದ್ಧ ಸೂರ್ಯನಾರಾಯಣ ದೇವಾಲಯವನ್ನು ಸಂಪರ್ಕಿಸುವ ಒಂದು ಶಾರ್ಟ್ ಕಟ್ ರಸ್ತೆ.

ಪಾಳು ಬಿದ್ದ ಊರಿಗೆ ಹೋಗುವ ಮಾರ್ಗ ತರಹ ಇರುವ ಈ ರಸ್ತೆ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರುತ್ತದೆ. ಮರೋಳಿ ವಾರ್ಡ್ ಗೆ ಬರುತ್ತದೆ.

ಮಂಗಳೂರಿನ ಶಕ್ತಿಕೇಂದ್ರ ಎಂದು ಪರಿಗಣಿಸಲಾದ ಪಾಲಿಕೆಯಲ್ಲಿ
ಈ ರಸ್ತೆಯ ಜವಾಬ್ದಾರಿ ಹೊರುವ ಕಾರ್ಪೊರೇಟರೊಬ್ಬರಿದ್ದಾರೆ. ಆದರೆ ಅವರ ಮುಖನ್ನು ಸರಿಯಾಗಿ ನೋಡಿದ ನೆನಪು ಇಲ್ಲಿನ ನಿವಾಸಿಗಳಿಗಿಲ್ಲ. ಚುನಾವಣೆಯಲ್ಲಿ ಗೆದ್ದ ವೇಳೆ ಮಾಧ್ಯಮಗಳಲ್ಲಿ ಬಂದ ಫೋಟೋ ನೋಡಿದ ನೆನಪು ಮಾತ್ರ.
ಮರೋಳಿ ಸೂರ್ಯನಾರಾಯಣ ಸನ್ನಿಧಿಗೆ ದಿನ ನಿತ್ಯ ನೂರಾರು ಜನರು ಬರುತ್ತಾರೆ. ದೇಗುಲವನ್ನು ಸಂಪರ್ಕಿಸುವ ರಸ್ತೆ ಇದಾಗಿದೆ. ಅಲ್ಲದೆ ನಂತೂರು ಹೈವೇ ಯಿಂದ ಮರೋಳಿ ಅಮೃತ ನಗರವಾಗಿ ಮರೋಳಿ ದೇವಸ್ಥಾನಕ್ಕೆ ತೆರಳಲು  ಬಲು ಸಮೀಪದ ದಾರಿಯೂ ಇದಾಗಿದೆ. ನಾಗುರಿಯ ಮೂಲಕವೂ ತೆರಳಲು ಆಗುತ್ತದೆ. ಆದರೆ ಸುಮಾರು 200 ಮೀಟರ್ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. 200 ಮೀಟರ್ ರಸ್ತೆ ಕಾಂಗ್ರೆಟೀಕರಣ.ಈ ಪರಿಸರದಲ್ಲಿ ಸುಮಾರು 50 ಕ್ಕಿಂತಲೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಇವರೆಲ್ಲ ಕಾರ್ಪೋರೇಷನ್ ಗೆ ತೆರಿಗೆ ಕಟ್ಟುತ್ತಾರೆ. 

ಇಲ್ಲಿ ರಾತ್ರಿಯಾದ ಬಳಿಕ ನಡೆದುಕೊಂಡು ಅಥವಾ ದ್ವಿಚಕ್ರ ವಾಹನಗಳಲ್ಲಿ ಹೋಗುವುದು ಅಪಾಯಕಾರಿಯಾಗಿದೆ. ರಸ್ತೆ ಎಂದು ಕರೆಯಲ್ಪಡುವ ದಾರಿಯ ಅಕ್ಕಪಕ್ಕ ಗಿಡಗಂಟಿಗಳು ಬೆಳೆದು ನಿಂತಿವೆ. ಚಿರತೆ ಅಡಗಿ ಕುಳಿತಿದ್ದರೆ ಮೈಗೆ ಹಾರುವ ವರೆಗೆ ಗೊತ್ತಾಗುವ ಛಾನ್ಸೇ ಇಲ್ಲ. ಮುಂಚೆ ಈ ರಸ್ತೆಯಲ್ಲಿ ಕಾರು, ಬೈಕ್, ಸ್ಕೂಟರ್, ಟೆಂಪೊ ಸರಾಗವಾಗಿ ಹೋಗುತ್ತಿತ್ತು. ಆದರೆ ಈಗ ರಸ್ತೆ ಸಂಪೂರ್ಣ ಜರ್ಜರಿತವಾಗಿ


ಹೊಂಡಡಗುಂಡಿಗಳಿಂದ ಕೂಡಿದೆ. ಹಾಕಿದ ಡಾಮರು ಕಿತ್ತುಹೋಗಿ ಎಷ್ಟೋ ವರ್ಷಗಳು ಕಳೆದಿರುವ ಕಥೆಯನ್ನು ಅಲಲ್ಲಿ ಎದ್ದು ಕಾಣುವ ಜಲ್ಲಿಕಲ್ಲು ಹೇಳುತ್ತಿದೆ. ಒಟ್ಟಿನಲ್ಲಿ ಜನರು ಸಂಕಟ ಅನುಭವಿಸುತ್ತಿದ್ದಾರೆ. ಕಾರ್ಪೊರೇಟರ್ ಅವರೇ ಎಲ್ಲಿ ಅಡಗಿದ್ದರೂ ಒಮ್ಮೆ ಮುಖ ತೋರಿಸಿ ನಿಮ್ಮ ವಾರ್ಡ್ ನ ಜನರನ್ನು ಪಾವನ ಮಾಡಿ.

ಇತ್ತೀಚಿನ ಸುದ್ದಿ

ಜಾಹೀರಾತು