ಇತ್ತೀಚಿನ ಸುದ್ದಿ
ಭೀಕರ ಬರಗಾಲ ಹೋಗಲಾಡಿಸಲು ದೇವರಲ್ಲಿ ಪ್ರಾರ್ಥಿಸಿ ಅನ್ನ ಸಂತರ್ಪಣೆ: ಮಸ್ಕಿ ಜನತೆಗೆ ನಾಗರತ್ನ ಅವನಿಕ ಕೊಡುಗೆ
07/11/2023, 19:51

ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿಯ ಸೃಷ್ಟಿ ಎಂಟರ್ಪ್ರೈಸ್ ಅವರ ಸತ್ಯ ಧ್ವನಿ ಪತ್ರಿಕೆ ಬಳಗದ ಗೌರವ ಸಂಪಾದಕರಾದ ಡಾ. ನಾಗರತ್ನ ಅವನಿಕ ಅವರು ಜನತೆ ಹಾಗೂ ತಮ್ಮ ಅಭಿಮಾನಿಗಳಿಗೆ ಅಂತರಗಂಗೆ ಟ್ರಸ್ಟ್ ಸೃಷ್ಟಿ ಎಂಟರ್ಪ್ರೈಸಸ್ ಹೆಸರಲ್ಲಿ ಅನ್ನಸಂತರ್ಪಣೆ ಮಾಡಿದರು.
ಮಳೆ ಕೈಕೊಟ್ಟಿರುವುದರಿಂದ ನಾಡಿನ ಸಾರ್ವಜನಿಕರು ಗುಳೇ ಹೋಗದನ್ನು ತಪ್ಪಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅವರಿಗೆ ಉದ್ಯೋಗ ಕೊಡಿಸಬೇಕು. ಹಿಂಗಾರು ಮಳೆ ಜೋಳ ಕಡಲೆ ಗೋಧಿ ಬೆಳೆಗಳಾದರು ಬರಲಿ ಎಂದು ಪ್ರಾರ್ಥಿಸಲಾಯಿತು.
ರೈತರು ಸಂಕಟದಲ್ಲಿದ್ದಾರೆ. ಜಾನುವಾರ ಸ್ಥಿತಿ ಗಂಭೀರವಾಗಿರುವುದರಿಂದ ಭಗವಂತನಲ್ಲಿ ಪ್ರಾರ್ಥನೆ, ಪೂಜೆ ಮಾಡಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ.
ಸತ್ಯ ಧ್ವನಿ ಪತ್ರಿಕಾ ಬಳಗ ಹಾಗೂ ಮಹಿಳಾ ಧ್ವನಿ ಪತ್ರಿಕಾ ಬಳಗ ಕಾರ್ಯಕರ್ತರು ಕಾರ್ಯಕ್ರಮ ಯಶಸ್ವಿಗೊಳಿಸಿದರು.