6:06 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಕಾಂಗ್ರೆಸ್ ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ: ಬಿಪಿನಚಂದ್ರ ಪಾಲ್ ನಕ್ರೆ

11/10/2023, 21:34

ಉಡುಪಿ(reporterkarnataka.com): ಕಾಶ್ಮೀರವಾಗಲಿ, ಪ್ಯಾಲೆಸ್ತೈನ್ ಆಗಲಿ ಅಥವಾ ಅಫಘಾನಿಸ್ತಾನವೇ ಆಗಲಿ ಕಾಂಗ್ರೆಸ್ ಯಾವತ್ತೂ ಮಾನವ ಹಕ್ಕು,ಸ್ವಾಯತ್ತತೆ ಮತ್ತು ಯಾವುದೇ ದೇಶವಾಸಿಗಳ ಗೌರವಯುತ ಬದುಕಿನ ಪ್ರತಿಪಾದನೆಯ ವಿಶ್ವಶಾಂತಿಯ ಪರವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕಾರ್ಕಳ ಶಾಸಕ, ಮಾಜಿ ಸಚಿವ ಸುನೀಲ್ ಕುಮಾರ್ ನೀಡಿದ ಹೇಳಿಕೆಯೊಂದಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದ.
ಇತಿಹಾಸ ಅರಿಯದವರಿಗೆ ವರ್ತಮಾನವು ಕೇವಲ ವಿಪ್ಲವವಾಗಿ ಕಾಣುತ್ತದೆ. ಪ್ಯಾಲೇಸ್ತೈನ್ ಮತ್ತು ಇಸ್ರೇಲ್ ಸಂಘರ್ಷ 60 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ. ಫ್ಯಾಲೇಸ್ತೈನಿನ ಸ್ವಾಯತ್ತತೆಯೊಂದಿಗಿನ ಇಸ್ರೇಲಿನ ಸೌಹಾರ್ದಯುತ ರಾಜತಾಂತ್ರಿಕ ಸಂಬಂಧಕ್ಕಾಗಿ, ಗಾಂಧೀಜಿ ಪ್ರತಿಪಾದಿಸಿದ ಅಹಿಂಸಾ ತತ್ವ ಸಿದ್ಧಾಂತದಡಿ ತನ್ನ ಬದುಕನ್ನೆ ಪಣವಿಟ್ಟು ಹೋರಾಡಿದ ಪಿಎಲ್ಒ ನಾಯಕ ದಿ. ಯಾಸರ್ ಅರಾಫತ್ ಹೋರಾಟದ ಐತಿಹಾಸಿಕತೆಯ ನೈಜ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಕಾರ್ಯಕಾರಿಣಿಯಲ್ಲಿ ಪ್ಯಾಲೇಸ್ತೈನಿಯನ್ನರ ಬದುಕಿನ ಕಷ್ಟಕಾಲದಲ್ಲಿ ನಾವಿದ್ದೇವೇ ಎಂದಿದೆ. ಅದರೊಂದಿಗೆ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿಯನ್ನು ಸ್ಪಷ್ಟ ಶಬ್ದಗಳಿಂದ ಖಂಡಿಸಿದೆ. ಅಷ್ಟಕ್ಕೂ ಅರಬ್ ರಾಷ್ಟ್ರಗಳ ಮುನಿಸಿನ ಪ್ರತಿರೋಧದ ಹೊರತಾಗಿಯೂ ಇಸ್ರೇಲಿನೊಂದಿಗೆ ಭಾರತ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿ ರಾಯಭಾರಿಗಳ ನೇಮಕಾತಿ ಮಾಡಿದ್ದೇ ಕಾಂಗ್ರೆಸ್ ಆಡಳಿತದಲ್ಲಿ. ಪ್ರಧಾನಿ ದಿ. ನರಸಿಂಹ ರಾವ್ ಅವಧಿಯಲ್ಲಿ ಎನ್ನುವುದು ಬಹುಶ ಬಿಜೆಪಿ ನಾಯಕರಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತಾವಧಿಯಲ್ಲಿ ದಿ. ಪ್ರಧಾನಿ ಜವಾಹರಲಾಲ್ ನೆಹರು ವಿಶ್ವ ರಾಜತಾಂತ್ರಿಕತೆಗೆ ಪರಿಚಯಿಸಿದ ಪಂಚಶೀಲ ತತ್ವ, ನಿರ್ಲಿಪ್ತ ಧೋರಣೆಯ ತಳಹದಿಯ ಮೇಲೆ ವಿಶ್ವದ ಶಾಂತಿ ಸೌಹಾರ್ದತೆಗೆ ನೀಡಿದ ಕೊಡುಗೆ ಅಪಾರ. ವಿಶ್ವದ ಎದುರು ಉಗ್ರವಾದದ ವಿರುದ್ಧ ಮಾತಾಡುತ್ತಲೆ ಮನೆಯಲ್ಲಿ ಧರ್ಮದ ಬೇರು ಅಗೆದು ರಾಜಕೀಯ ಮಾಡುವ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಉದಾರವಾದದ ಸೃಜನಶೀಲ ರಾಜನೀತಿ ಅರ್ಥ ಆಗಲು ಸಾಧ್ಯವಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು