6:05 AM Tuesday29 - July 2025
ಬ್ರೇಕಿಂಗ್ ನ್ಯೂಸ್
Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಇನ್ನರ್ ವೀಲ್ ಜಿಲ್ಲೆ 318 ರ District Rally ‘ಸ್ವರ್ಣ ಪರ್ಬ’

02/10/2023, 21:05

ಮಂಗಳೂರು(reporterkarnataka.com): ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ ರ್ಯಾಲಿ ‘ ಸ್ವರ್ಣ ಪರ್ಬ’ ‘ ಭಾನುವಾರ ನಗರದ ಟಿ. ವಿ. ರಮಣ ಪೈ ಹಾಲಿನಲ್ಲಿ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಅವರ ನೇತೃತ್ವದಲ್ಲಿ ನಡೆಯಿತು.
ಇನ್ನರ್ ವೀಲ್ ಮಂಗಳೂರು ಉತ್ತರದ ಚಾರ್ಟರ್ ಸದಸ್ಯೆ
ಉಷಾ ರವಿರಾಜ್ ಅವರು ಇನ್ನರ್ ವೀಲ್ ಪ್ರಾರ್ಥನೆ ಮಾಡಿದರು. ಕ್ಲಬ್ ನ ಅಧ್ಯಕ್ಷೆ ಗೀತಾ ಬಿ. ರೈ ಅವರು ಸ್ವಾಗತಿಸಿದರು. ರ್ಯಾಲಿ ಚೇರ್ಮನ್ ಚಿತ್ರಾ ವಿ. ರಾವ್ ಅವರು ರ್ಯಾಲಿ ಸ್ವರ್ಣ ಪರ್ಬದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ಹಾಡಿನ ಮೂಲಕ ವಿವರಿಸಿದರು. ಕಾರ್ಯದರ್ಶಿ ಶಬರಿ ಕಡಿದಾಲ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ಕಳುಹಿಸಿದವರ ವಿವರ ನೀಡಿದರು. ಚೇರ್ಮನ್ ಪೂರ್ಣಿಮಾ ರವಿ ಅವರು 2023-24ನೇ ಸಾಲಿನಲ್ಲಿ ಜಿಲ್ಲೆ 318 ರಲ್ಲಿ ನಡೆದ ಪ್ರಾಜೆಕ್ಟ್, ಅದರ ಪ್ರಯೋಜನ ಪಡೆದವರ ಹಾಗೂ ವಿನಿಯೋಗ ಮಾಡಿದ ಹಣದ ವಿವರಗಳನ್ನು ತಿಳಿಸಿ, ಕಾರ್ಯ ಕ್ರಮದ ಬಗ್ಗೆ ಮೆಚ್ಚುಗೆ ಮಾತನ್ನು ವ್ಯಕ್ತಪಡಿಸಿದರು. ಇತರ ಕ್ಲಬ್ ಗಳಿಂದ ಬಂದ ಮಾಜಿ ಜಿಲ್ಲಾ ಚೇರ್ ಮೆನ್ ರವರನ್ನು ಗೌರವಿಸಲಾಯಿತು.
ಉಪ ಚೇರ್ಮನ್ ವೈಶಾಲಿ ಕುಡ್ವ ವಂದಿಸಿದರು. ಜಿಲ್ಲಾ ಖಜಾಂಚಿ ರಜನಿ ಭಟ್ ಹಾಗೂ ಜಿಲ್ಲಾ ಎಡಿಟರ್ ಉಮಾ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಡೆಸಿಕೊಟ್ಟ ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು