ಇತ್ತೀಚಿನ ಸುದ್ದಿ
ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ನಿಂದ 14ನೇ ವರ್ಷದ ಗಣೇಶೋತ್ಸವ ವೈಭವ
28/09/2023, 10:53

ಬಂಟ್ವಾಳ(reporterkarnataka.com): ಗಣೇಶೋತ್ಸವ ಸಮಿತಿ, ಗುಡ್ಡ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಇದರ ವತಿಯಿಂದ ಏರ್ಪಡಿಸಲಾದ 14ನೇ ವರ್ಷದ ಶೀ ಗಣೇಶೋತ್ಸವ ವೈಭವದಿಂದ ನಡೆಯಿತು.
ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡಿದರು. ನಿವೃತ್ತ ಯೋಧ ಕ್ಯಾಪ್ಟನ್ ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್, ನ್ಯಾಯವಾದಿ ಉಮೇಶ್ ಏನಾಜೆ, ಮುಖ್ಯ ಶಿಕ್ಷಕ ಬಾಬು ಪೂಜಾರಿ ಕೊಪ್ಪಲ, ನೇರಳಕಟ್ಟೆ ಸೊಸೈಟಿ ಕಾರ್ಯನಿರ್ಹಣಾಧಿಕಾರಿ ಯಶೋದಾ ನೇರಳಕಟ್ಟೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮೋನಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಶಿವಕುಮಾರ ಜೋಗಿಬೆಟ್ಟು, ಸೇವಾ ಟ್ರಸ್ಟ್ ಅಧ್ಯಕ್ಷ ಮಾಧವ ಕುಲಾಲ್,ಹರೀಶ್ ರೈ ಪಾನೂರು, ಸುಧಾಕರ್ ಪಾನೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜಾರಾಮ ಕಾಡೂರು ಸ್ವಾಗತಿಸಿದರು. ದಿವಾಕರ ಶಾಂತಿಲ ವಂದಿಸಿದರು. ಯತಿರಾಜ ನಿರೂಪಿಸಿದರು.
ನಾಸಿಕ್ ಬ್ಯಾಂಡ್ ತಂಡ, ಪೆರಾಜೆಯ ಕುಣಿತ ಭಜನೆ ತಂಡವನ್ನು ಅಭಿನಂದಿಸಲಾಯಿತು. ಜೋಡುಕಲ್ಲು ಕಲಾವಿದರಿಂದ ತುಂಗಭದ್ರ ನಾಟಕ ಪ್ರದರ್ಶನಗೊಂಡಿತು.