5:08 AM Tuesday11 - November 2025
ಬ್ರೇಕಿಂಗ್ ನ್ಯೂಸ್
ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಗ್ರ್ಯಾಚುಟಿ ಸಮಸ್ಯೆ ಇತ್ಯರ್ಥ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್… ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಇತ್ತೀಚಿನ ಸುದ್ದಿ

ಕುಸಿತದ ಭೀತಿಯಲ್ಲಿ ಮುಂಡ್ಕೂರು ಪಡಿತ್ತಾರ್ ಸೇತುವೆ: ಕಿತ್ತು ಹೋದ ಸಿಮೆಂಟ್, ತುಕ್ಕು ಹಿಡಿದ ಕಬ್ಬಿಣ!!

01/09/2023, 11:32

ಕಾರ್ಕಳ(reporterkarnataka.com): ಇಲ್ಲಿನ ಮುಂಡ್ಕೂರು ಗ್ರಾಮದ ಪಡಿತ್ತಾರ್ ಎಂಬಲ್ಲಿ ಸೇತುವೆ ಕಾಂಕ್ರೀಟ್ ಕಿತ್ತು ಹೋಗಿದ್ದು ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು ಕುಸಿಯುವ ಹಂತದಲ್ಲಿದೆ.
ಪಡಿತ್ತಾರು ಸೇತುವೆ ಮೇಲಿನಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬೆಳ್ಮಣ್, ಕಿನ್ನಿಗೋಳಿ, ಮೂಡಬಿದ್ರೆ ಸಂಪರ್ಕಿಸಲು ಹತ್ತಿರದ ಹೆದ್ದಾರಿಯಾಗಿದೆ.. ಬಜಪೆ ವಿಮಾನ ನಿಲ್ದಾಣ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಾವಿರಾರು ಭಕ್ತರು ಪ್ರವಾಸಿಗರು, ಪ್ರಯಾಣಿಕರು ಇದೇ ರಸ್ತೆಯಲ್ಲಿ ಸಾಗುತ್ತಾರೆ.
ಬೆಳ್ಮಣ್, ನಂದಳಿಕೆ ಸೇರಿದಂತೆ ಕಲ್ಲುಕೋರೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಜಲ್ಲಿ ಸಾಗಾಣಿಕೆ ಟಿಪ್ಪರ್ ಗಳು ಈ ರಸ್ತೆಯಲ್ಲೆ ಸಂಚರಿಸುತ್ತವೆ.
ಅಪಾಯ ಕಟ್ಟಿಟ್ಟ ಬುತ್ತಿ: ಈ ಸೇತುವೆ ಕೆಳಭಾಗದಲ್ಲಿ ಭಾಗದಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿದ್ದು ಕಾಂಕ್ರೀಟ್ ಕಿತ್ತು ಹೋಗಿದೆ. ಹೆಚ್ಚಿನ ಭಾರ ಹೊರುವ ಟಿಪ್ಪರ್ ಗಳು ನಿತ್ಯ ರಸ್ತೆಯಲ್ಲಿ ಸಾಗುವಾಗ ಯಾವುದೇ ಕ್ಷಣದಲ್ಲಿ ಕುಸಿತವಾಗಬಹುದು.
ತೇಪೆ ಕಾರ್ಯ: ಈ ಸೇತುವೆ ಹಳೆಯ ಸೇತುವೆಯಾಗಿದ್ದು ಅನೇಕ ವರ್ಷಗಳಿಂದ ಕಾಂಕ್ರೀಟ್ ಹಾಕಿ ತೇಪೆ ಕಾರ್ಯ ನಡೆಯುತ್ತಲಿದೆ.. ಆದರೆ ಜನ ವಾಹನಗಳ ಸಂಚಾರದಿಂದಲೆ ಮತ್ತೆ ಕಾಂಕ್ರೀಟ್ ಕಿತ್ತು ಹೋಗುತ್ತಿದೆ.ಆದರೆ ಹೊಸ ಸೇತುವೆ ನಿರ್ಮಾಣ ವಾದರೆ ಮಾತ್ರ ಅಪಘಾತ ಮುಕ್ತವಾಗಬಹುದು ಎನ್ನುವುದು ಸ್ಥಳೀಯರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಕಾಂಕ್ರೀಟ್ ಹಾಕಿ ತೇಪೆ ಕಾರ್ಯ ನಡೆಸಲಾಗಿದೆ.
ಹೊಸ ಸೇತುವೆ ನಿರ್ಮಾಣ ಮಾಡಲು ಇಲಾಖೆ ಯೊಡನೆ ಮಾತುಕತೆ ನಡೆಸಲಾಗುತ್ತಿದೆ‌ ಎಂದು
ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಮಿಥುನ್ ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು