12:59 AM Tuesday4 - November 2025
ಬ್ರೇಕಿಂಗ್ ನ್ಯೂಸ್
ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ…

ಇತ್ತೀಚಿನ ಸುದ್ದಿ

ಪ್ರವಾಹದ ನಡುವೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆ: ಮಾನವೀಯತೆ ಮೆರೆದ ಅಥಣಿ ಪೊಲೀಸರು 

25/07/2021, 12:34

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com

ಖಾಕಿ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಅಪನಂಬಿಕೆ. ಆದ್ರೆ ಅಂತಹ ಖಾಕಿ ತೊಟ್ಟ ಪೊಲೀಸರು ಕೂಡ ಮಾನವೀಯತೆ ಮೆರೆದ, ತಾಯಿ ಹೃದಯ ಪ್ರದರ್ಶಿಸಿದ ಹಲವು ಘಟನೆಗಳಿವೆ. ಅಂಥದೊಂದು ನೈಜ ಘಟನೆಗೆ ಇಂದು ಅಥಣಿ ಸಾಕ್ಷಿಯಾಯಿತು.

ಅಥಣಿ ತಾಲೂಕಿನ ಹಲ್ಯಾಳ ಹಾಗೂ ದರೂರು ಮಧ್ಯೆ ಇರುವ ಕೃಷ್ಣಾ ನದಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಎತ್ತ ಕಣ್ಣು ಹಾಯಿಸಿದರೂ ಕೆಂಪು ಜಲರಾಶಿ. ಎಂಥಹ ಧೈರ್ಯವಂತನ ಎದೆಯಲ್ಲಿ ತಲ್ಲಣ ಉಂಟು ಮಾಡುವ ಸನ್ನಿವೇಶ. ಇಂತಹ ಭೀಕರ ಸನ್ನಿವೇಶದಲ್ಲಿ ಸೇತುವೆ ಮೇಲೆ ಸಿಕ್ಕಿಹಾಕಿಕೊಂಡ ಒಂಟಿ ಮಹಿಳೆಯೊಬ್ಬರನ್ನು ಅಥಣಿ ಪೊಲೀಸರು ಬಚಾವ್ ಮಾಡಿದ್ದಾರೆ.

ವಿಠ್ಠಲ್ ಹುಲಿಕಟ್ಟಿ ಅವರು ಮಾನವಿಯತೆ ಮೆರೆದ ತಾಯಿ ಹೃದಯದ ಅಧಿಕಾರಿ. ಇವರು ಅಥಣಿ  ಪಿಎಸ್ಐ ಕುಮಾರ್ ಹಾಡ್ಕರ್ ಅವರ ನೆರವಿನಿಂದ ಮಹಿಳೆಯನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೋಗಿದ್ದಾರೆ.

ಪ್ರವಾಹದ ಭೀತಿಯಿಂದ ತಮ್ಮ ಗ್ರಾಮಗಳಿಂದ ಸುರಕ್ಷಿತ ಸ್ಥಳಗಳಿಗೆ  ದರುರ್, ನದಿ ಇಂಗಳಗಾವ್ ,ಸಪ್ತ ಸಾಗರ ಗ್ರಾಮಸ್ಥರು ಈಗಾಗಲೇ ಗುಳೆ ಹೊರಟಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮಹಿಳೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರವಾಹದ ಭೀತಿ ಉಂಟಾದರೂ ತಾಲೂಕು ಆಡಳಿತ ಮಾತ್ರ ನಿರ್ಲಕ್ಷ್ಯವಹಿಸಿರುವುದು ಎದ್ದು ಕಾಣುತ್ತಿದೆ.

 ಇನ್ನಾದರೂ ಎಚ್ಚೆತ್ತುಕೊಂಡು ಜನರನ್ನು ಸುರಕ್ಷಿತ ಸ್ಥಳಗಳಿಗೆ ಆದಷ್ಟು ಬೇಗ ಸ್ಥಳಾಂತರ ಮಾಡುವ ಅಗತ್ಯವಿದೆ.

ಇತ್ತೀಚಿನ ಸುದ್ದಿ

ಜಾಹೀರಾತು