1:43 AM Thursday18 - September 2025
ಬ್ರೇಕಿಂಗ್ ನ್ಯೂಸ್
ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ

ಇತ್ತೀಚಿನ ಸುದ್ದಿ

ಗೃಹಲಕ್ಷ್ಮೀ ಯೋಜನೆಗೆ ನಾಳೆ ಚಾಲನೆ: ಮಂಗಳೂರಿನ 33 ಸ್ಥಳಗಳಲ್ಲಿ ನೇರ ಪ್ರಸಾರ ವ್ಯವಸ್ಥೆ

29/08/2023, 18:45

ಮಂಗಳೂರು(reporterkarnataka.com): ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದ್ದು, ಆ.30ರಂದು ಮೈಸೂರಿನಿಂದ ಚಾಲನೆ ನೀಡಲಾಗುವುದು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಏಕಕಾಲದಲ್ಲಿ ಭಾಗವಹಿಸಲು ಅನುವಾಗುವಂತೆ ನಗರದ 33 ಸ್ಥಳಗಳಲ್ಲಿ ಟಿ.ವಿ./ಎಲ್.ಇ.ಡಿ. ಪರದೆ ಮೂಲಕ ಆ.30ರಂದು ಮಧ್ಯಾಹ್ನ 12 ಗಂಟೆಗೆ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ.

ನೇರ ಪ್ರಸಾರದ ಸ್ಥಳ:

ಸುರತ್ಕಲ್‍ನ ತಡಂಬೈಲ್ ಕುಲಾಲ್ ಭವನ ಹಾಲ್, ಕಾಟಿಪಳ್ಳದ 3ನೇ ಬ್ಲಾಕ್‍ನ ನಾರಾಯಣ ಗುರು ಮಂದಿರ, ಕಾಟಿಪಳ್ಳ ಕೃಷ್ಞಾಪುರದಲ್ಲಿರುವ ದೂಮಾವತಿ ದೈವಸ್ಥಾನದ ಹಾಲ್, ಸುರತ್ಕಲ್‍ನ ಸೇಕ್ರೇಡ್ ಹಾರ್ಟ್ ಚರ್ಚ್ ಹಾಲ್, ಕುಳಾಯಿಯ ಮಹಿಳಾ ಮಂಡಲ(ರಿ), ಮೀನಕಳಿಯಲ್ಲಿರುವ ಇಂದಿರಾ ಮಾಧವ ವಿದ್ಯಾರ್ಥಿ ಭವನ, ಕೂಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣ, ಮರಕಡದಲ್ಲಿರುವ ಕೆ.ಎಚ್.ಬಿ. ಬಾಲಭವನ, ಕಾವೂರು ಮುಖ್ಯ ರಸ್ತೆಯ ವ್ಯವಸಾಯ ಸಹಕಾರಿ ಸೌಧ, ಕೋಡಿಕಲ್‍ನ ಕುದ್ಮುಲ್ ರಂಗರಾವ್ ಸಮುದಾಯ ಭವನ, ವಾಮಂಜೂರುನಲ್ಲಿರುವ ತಿರುವೈಲ್ ವಾರ್ಡು ಕಚೇರಿ, ಶಕ್ತಿನಗರದ ಮದರ್ ಆಫ್ ಗಾಡ್ ಚರ್ಚ್ ಕಮ್ಯುನಿಟಿ ಹಾಲ್, ಚಿಲಿಂಬಿಯಲ್ಲಿರುವ ಆದರ್ಶ ನಗರ ಸಮುದಾಯ ಭವನ, ಕೊಟ್ಟಾರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣ, ಉರ್ವ ಹೊಸ ಮಾರುಕಟ್ಟೆ ಸಭಾಂಗಣ, ಬಳ್ಳಾಲ್‍ಬಾಗ್‍ನ ಅಂಬೇಡ್ಕರ್ ಭವನ, ಬಿಜೈ ಚರ್ಚ್‍ನ ಮಿನಿ ಹಾಲ್, ಮಲ್ಲಿಕಟ್ಟದ ಲಯನ್ಸ್ ಕ್ಲಬ್, ಮರೋಳಿಯ ಬಜ್ಜೋಡಿ ಚರ್ಚ್ ಹಾಲ್, ಕುಲಶೇಖರ ಚರ್ಚ್‍ನ ಮಿನಿ ಹಾಲ್, ಬಲ್ಮಠದ ಶಾಂತಿ ನಿಲಯ ಚರ್ಚ್ ಹಾಲ್, ಜೆಪ್ಪುವಿನಲ್ಲಿರುವ ಇನ್‍ಫೆಂಟ್ ಮೇರಿ ಹಾಲ್, ಟೆಂಪಲ್ ಸ್ಕ್ವೇರ್ ಜಿ.ಎಚ್.ಎಸ್. ರಸ್ತೆಯಲ್ಲಿರುವ ಬಾಲಮ್ ಭಟ್ ಹಾಲ್, ಕುದ್ರೋಳಿಯ ಮೈದಿನ್ ಪಳ್ಳಿ ಮದರಸಾ ಹಾಲ್, ಪುರಭವನದ ಕುದ್ಮುಲ್ ರಂಗರಾವ್ ಹಾಲ್, ಅತ್ತಾವರದ ಚಕ್ರಪಾಣಿ ದೇವಸ್ಥಾನದ ಹಾಲ್, ಕಂಕನಾಡಿ ಗರೋಡಿ ದೇವಸ್ಥಾನದ ಹಾಲ್, ಕಣ್ಣೂರುನಲ್ಲಿರುವ ಗಣೇಶೋತ್ಸವ ಮಂಟಪ, ಬಜಾಲ್‍ನ ಚರ್ಚ್ ಹಾಲ್, ಮಹಾಕಾಳಿಪಡ್ಪುವಿನ ಸಂಕಪ್ಪ ಮೆಮೋರಿಯಲ್ ಹಾಲ್, ಎಮ್ಮೆಕೆರೆಯ ಕೋರ್ದಬ್ಬು ದೈವಸ್ಥಾನ ಸಭಾಂಗಣ, ಹೊಯಿಗೆ ಬಜಾರ್ನ ಬೋಳಾರ ಮೊಗವೀರ ಮಹಿಳಾ ಸಂಘ ಸಭಾಂಗಣ ಹಾಗೂ ತೋಟ ಬೆಂಗ್ರೆಯಲ್ಲಿರುವ ಬೆಂಗ್ರೆ ವಿದ್ಯಾರ್ಥಿ ಸಂಘ ಯುವಕ ಮಂಡಲದಲ್ಲಿ ನೇರಪ್ರಸಾರದ ವ್ಯವಸ್ಥೆ ಮಾಡಲಾಗುವುದು.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡುವ ಸಂದೇಶ ಬರುವುದರಿಂದ ನೋಂದಾಯಿತ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿಕೊಂಡಿರುವ ಮೊಬೈಲ್ ಫೋನ್‍ಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು