8:08 AM Wednesday24 - December 2025
ಬ್ರೇಕಿಂಗ್ ನ್ಯೂಸ್
ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಇತ್ತೀಚಿನ ಸುದ್ದಿ

ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

23/07/2021, 22:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳಗಾವಿಯ ನದಿಗಳೆಲ್ಲ ಉಕ್ಕಿಹರಿಯುತ್ತಿವೆ. ಹಳ್ಳ ಕೊಳ್ಳ ತುಂಬಿದ್ದು, ಒಂಟಮುರಿ‌ ಘಾಟಿ ಬಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಜಲಾವೃತಗೊಂಡಿದೆ.

ಪ್ರವಾಹದಿಂದ ಜನರು ದಿಕ್ಕೆಟ್ಟು ಹೋಗಿದ್ದಾರೆ. ನದಿ ಮತ್ತು ರಸ್ತೆಯ ವ್ಯತ್ಯಾಸ ಕಾಣುತ್ತಿಲ್ಲ. ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರು ನದಿಯಲ್ಲಿ ಪ್ರವಾಹ ಇಳಿಯಲು ಕಾಯುತ್ತಿದ್ದಾರೆ.

ಪ್ರಯಾಣಿಕರಿಗೆ ದಿಕ್ಕು ತೋಚದಂತೆ  ರಸ್ತೆ ಮೇಲೆ ನೀರು ಹರಿದು ಬಂದು ಇದು ನದಿನಾ ಅಥವಾ ರಸ್ತೆ ನಾ ಅಂತಾ ತಿಳಿಯದೇ ತಮ್ಮ ತಮ್ಮ ಸಣ್ಣ ವಾಹಾನಗಳು ರಸ್ತೆ ಬದಿಗೆ ನೀಲಿಸಿ ನೀರಿನ ರಭಸ ಕಡಿಮೇ ಆಗುವ ನೀರಿಕ್ಷೆಯಲ್ಲಿ‌ ಕಾದುಕೊಳ್ಳಿತ್ತಿದ್ದಾರೆ,

ಇನ್ನೂ ಲಾರಿ ಚಾಲಕರು ಭಾರ ಹೆಚ್ಚಿರುವುದರಿಂದ ನೀರಿನ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಇಲ್ಲಿ ನೀರು ಹರಿದು‌ ಹೋಗಲು ಸರಾಗ ಮಾರ್ಗ ಇಲ್ಲದ ಕಾರಣ ರಸ್ತೆ ಮೇಲೆ ನೀರು ನುಗ್ಗಿ ಪ್ರತಿ ವರ್ಷ ವು ಮಳೆಗಾಲದಲ್ಲಿ‌ ಇಂಥಹ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು‌ ವಾಹನ ಶುಲ್ಕ ಭರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆಗುವ ಸಂಭವಗಳ ಬಗ್ಗೆ ‌ಗಮನ ಹರಿಸುವುದಿಲ್ಲ. ಕೇವಲ ಹಣ ಮಾಡಲು ಮಾತ್ರ ಈ ಹೆದ್ದಾರಿ ಸೀಮಿತವಾಗಿದೆ ಅಂತಾ ಹೇಳಿದರು‌ ತಪ್ಪೆನಿಲ್ಲ. ಇನ್ನಾದರೂ ಎಚ್ಚತ್ತುಕೊಂಡು‌ ಇಂತಹ ಸಮಸ್ಯೆಗಳನ್ನು ಆಲಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು