9:47 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಡೂಮ್ ಡೇ ಆರಾಧನೆ: ಕೆನ್ಯಾದಲ್ಲಿ ಮತ್ತೆ 12 ಮಂದಿ ಶವ ಪತ್ತೆ; ಮೃತರ ಸಂಖ್ಯೆ 400ಕ್ಕೇರಿಕೆ

19/07/2023, 14:26

ನೈರೋಬಿ(reporterkarnataka.com):
ಕೆನ್ಯಾದಲ್ಲಿ ಡೂಮ್‌ ಡೇ ಆರಾಧನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೇದಾರರು ಸೋಮವಾರ 12 ಮೃತದೇಹಗಳನ್ನು ಹೊರತೆಗೆದಿದ್ದು, ಇದರಿಂದ ಮೃತಪಟ್ಟವರ ಸಂಖ್ಯೆ 400 ದಾಟಿದೆ.
ಯೇಸು ಸ್ವಾಮಿಯನ್ನು ಸಂಧಿಸಲು ಸಾಯುವ ತನಕ ಉಪವಾಸ ವ್ರತಾಚರಣೆ ಇದಾಗಿದೆ. ಕರಾವಳಿ ಕೆನ್ಯಾದ ಮಲಿಂದಿ ಪಟ್ಟಣ ಬಳಿಯ ಶಕಹೋಲ ಅರಣ್ಯದಲ್ಲಿ ನೆಲೆಸಿರುವ ಪಂಥದೊಂದಿಗೆ ನಂಟು ಹೊಂದಿದ್ದ ಧಾರ್ಮಿಕ ನಾಯಕ ಪೌಲ್ ಮ್ಯಾಂಕಝಿ, ತನ್ನ ಅನುಯಾಯಿಗಳಿಗೆ ಈ ಆರಾಧನೆ ನಡೆಸುವಂತೆ ಉಪದೇಶಿಸಿದ್ದರು.
ಕಠೋರ ವ್ರತಾಚರಣೆಯಿಂದ ಹಲವರು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೌಲ್ ಮತ್ತು 36 ಶಂಕಿತರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಇನ್ನಷ್ಟೇ ಇವರೆಲ್ಲರ ವಿರುದ್ಧ ದೋಷಾರೋಪ ಹೊರಿಸಬೇಕಿದೆ.
‘ಮೃತಪಟ್ಟವರ ಸಂಖ್ಯೆ 403ಕ್ಕೇರಿದ್ದು, 95 ಜನರನ್ನು ರಕ್ಷಿಸಲಾಗಿದೆ’ ಎಂದು ಕರಾವಳಿ ಪ್ರಾದೇಶಿಕ ಆಯುಕ್ತ ರೋಡಾ ಒನ್ಯಾಂಚ ಹೇಳಿದ್ದಾರೆ.
ಮಲಿಂದಿ ಪಟ್ಟಣದಲ್ಲಿ ಬೀಡುಬಿಟ್ಟಿರುವ ಕೆನ್ಯಾ ರೆಡ್‌ ಕ್ರಾಸ್‌ ಅಧಿಕಾರಿಗಳಿಗೆ 613 ಜನರು ನಾಪತ್ತೆಯಾಗಿರುವ ವರದಿ ದಾಖಲಾಗಿದೆ. ಪತ್ತೆದಾರರು ಸಾಮೂಹಿಕ ಸಮಾಧಿಗಳನ್ನು ಈಗಲೂ ಹುಡುಕುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು