ಇತ್ತೀಚಿನ ಸುದ್ದಿ
ಗೋಹತ್ಯಾ ನಿಷೇಧ ಕಾಯ್ದೆ: ಸದನದಲ್ಲಿ ಹೋರಾಟ ನಡೆಸಲು ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ವಿಎಚ್ ಪಿ, ಹಿಂಜಾವೇ ಮನವಿ
09/07/2023, 17:44

ಸುರತ್ಕಲ್(reporterkarnataka.com): ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಸರಕಾರ ಅಧಿಕಾರದಲ್ಲಿದ್ದಾಗ ಗೋಸಂತತಿಯ ಉಳಿವಿಗಾಗಿ ಜಾರಿಗೆ ತಂದಿದ್ದ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆಯನ್ನು ದುರ್ಬಲ ಮಾಡದಂತೆ, ಹಿಂಪಡೆಯದಂತೆ ಕಾಂಗ್ರೆಸ್ ಸರಕಾರದ ಮೇಲೆ ಅಧಿವೇಶನದಲ್ಲಿ ಒತ್ತಡ ಹಾಕುವಂತೆ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಯ ಮುಖಂಡರು ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಮನವಿ ಮಾಡಿದ್ದಾರೆ.
ಮನವಿ ಪತ್ರವನ್ನು ಸ್ವೀಕರಿಸಿದ ಡಾ.ಭರತ್ ಶೆಟ್ಟಿ ಅವರು ಗೋಮಾತೆಯ ಉಳಿವಿಗೆ ಅತ್ಯಗತ್ಯವಾಗಿರುವ ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆಯ ಪರ ಅಧಿವೇಶನದಲ್ಲಿ ರಾಜ್ಯದ ಜನರ ಪರವಾಗಿ ಧ್ವನಿ ಎತ್ತುವುದಾಗಿ ಸಂಘಟನೆಯ ಮುಖಂಡರಿಗೆ ಭರವಸೆ ನೀಡಿದ್ದಾರೆ.