5:55 AM Wednesday24 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಮತ್ತೆ ಖಾದರ್ ಖದರ್!: ಸ್ಪೀಕರ್ ಆದರೂ ಮರೆತಿಲ್ಲ ಸ್ವಕ್ಷೇತ್ರದ ಜನರ ದುಃಖ- ದುಮ್ಮಾನ; ಕಡಲ್ಕೊರೆತ, ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ

09/07/2023, 11:31

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅಜಾತಶತ್ರು ಯು.ಟಿ. ಖಾದರ್ ಪ್ರಸ್ತುತ ವಿಧಾನ ಸಭೆ ಸ್ಪೀಕರ್. ಸದನದ ಗುರಿಕಾರನಾಗಿ ಚೊಚ್ಚಲ ಅಧಿವೇಶನ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಹೆಗಲ ಮೇಲೆ ಅಷ್ಟೊಂದು ದೊಡ್ಡ ಜವಾಬ್ದಾರಿ ಇದ್ದರೂ ತನ್ನ ಸ್ವಕ್ಷೇತ್ರದ ಕಾಳಜಿ ಬಗ್ಗೆ ಎಳಷ್ಟು ಲೋಪ ಬಾರದಂತೆ ಎಚ್ಚರ ವಹಿಸಿದ್ದಾರೆ.

ಖಾದರ್ ಅವರ ಖದರ್ ಅಂತಹದ್ದೇ. ಬೀದಿ ಬದಿ ಕಡ್ಲೆಕಾಯಿ ಮಾರುವವರಿಂದ ಆರಂಭಗೊಂಡು ಕೋಟ್ ಧಾರಿಗಳ ವರೆಗೆ ಎಲ್ಲರನ್ನು ಪ್ರೀತಿ- ಗೌರವದಿಂದ ನೋಡಿಕೊಳ್ಳುವುದು ಅವರ ವಿಶೇಷತೆ. ಇದರ ಫಲ ಎಂಬಂತೆ ಖಾದರ್ ಅವರು ಎರಡು ದಶಕಗಳಿಂದ ತನ್ನ ಸ್ವಕ್ಷೇತ್ರ ಮಂಗಳೂರು(ಉಳ್ಳಾಲ)ಜನತೆಯ ವಿಶ್ವಾಸ ಕಳೆದುಕೊಂಡಿಲ್ಲ. ಖಾದರ್ ಅವರು ಸ್ಪೀಕರ್ ಆದಾಗ ಅವರ ಕ್ಷೇತ್ರದ ಹೆಚ್ಚಿನ ಜನರಿಗೆ ತುಂಬಾ ಭಯವಿತ್ತು. ಖಾದರ್ ಅವರನ್ನು ಮಂತ್ರಿಯಾಗಿ ನೋಡಲು ಬಯಸುತ್ತಿದ್ದ ಕ್ಷೇತ್ರದ ಜನತೆಗೆ ಸ್ಪೀಕರ್ ಆದರೆ ಎಲ್ಲಿ ಅವರು ತಮ್ಮ ಕೈತಪ್ಪಿ ಹೋಗುತ್ತಾರಾ?, ನಮ್ಮನ್ನು ಮರೆತು ಬಿಡುತ್ತಾರಾ? ಎಂಬ ಅನಾಥ ಪ್ರಜ್ಞೆಯ ಜತೆಗೆ ಪ್ರಶ್ನಾರ್ಥಕ ಭಯ ಜನರಲ್ಲಿ ಆವರಿಸಿತ್ತು. ಆದರೆ ಖಾದರ್ ಅವರು ಸ್ಪೀಕರ್ ಆದರೂ ಕ್ಷೇತ್ರದ ಜನತೆಯನ್ನು ಮರೆತಿಲ್ಲ. ಹಾಗೆ
ಕ್ಷೇತ್ರ ಕಾರ್ಯದಲ್ಲಿ ಲೋಪ ಎಸಗಿದ ಲಕ್ಷಣ ಕಾಣುತ್ತಿಲ್ಲ. ವಿಧಾನ ಸಭೆ ಅಧಿವೇಶನಕ್ಕೆ ಶನಿವಾರ ಮತ್ತು ಭಾನುವಾರ ಇರುವ ಸಣ್ಣ ಬ್ರೇಕನ್ನು ಬಳಸಿಕೊಂಡು ಅವರು ತನ್ನ ಸ್ಚಕ್ಷೇತ್ರ ಉಳ್ಳಾಲಕ್ಕೆ ಆಗಮಿಸಿದ್ದಾರೆ.


ಶನಿವಾರ ತುಂಬಿ ತುಳುಕುತ್ತಿದ್ದ ಮಂಗಳೂರಿನ ಸುರ್ಕ್ಯುಟ್ ಹೌಸ್ ನಲ್ಲಿ ಜನರ ಅಹವಾಲು ಆಲಿಸಿದ್ದಾರೆ. ನಂತರ ಉಳ್ಳಾಲ ಕಡಲ ಕಿನಾರೆಗೆ ಭೇಟಿ ನೀಡಿ ಕಡಲ್ಕೊರೆತ ಬಗ್ಗೆ ಪರಿಶೀಲಿಸಿದ್ದಾರೆ. ಗುಡ್ಡ ಕುಸಿತ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಮತ್ತೊಮ್ಮೆ ಆತ್ಮವಿಶ್ವಾಸ ಮೂಡಿಸಿದ್ದಾರೆ. ಕ್ಷೇತ್ರ ತುಂಬಾ ಸಾಮಾನ್ಯ ಶಾಸಕನ ತರಹ ಓಡಾಡಿದ್ದಾರೆ. ಕ್ಷೇತ್ರ ಮಾತ್ರವಲ್ಲ ನಾಡಿನುದ್ದಗಲದ ಪ್ರಜ್ಞಾವಂತರಿಗೂ ಇದು ಖುಷಿ ಕೊಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು