1:10 AM Thursday18 - June 2026
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ… ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3…

ಇತ್ತೀಚಿನ ಸುದ್ದಿ

ಮತ್ತೆ ಖಾದರ್ ಖದರ್!: ಸ್ಪೀಕರ್ ಆದರೂ ಮರೆತಿಲ್ಲ ಸ್ವಕ್ಷೇತ್ರದ ಜನರ ದುಃಖ- ದುಮ್ಮಾನ; ಕಡಲ್ಕೊರೆತ, ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ

09/07/2023, 11:31

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಅಜಾತಶತ್ರು ಯು.ಟಿ. ಖಾದರ್ ಪ್ರಸ್ತುತ ವಿಧಾನ ಸಭೆ ಸ್ಪೀಕರ್. ಸದನದ ಗುರಿಕಾರನಾಗಿ ಚೊಚ್ಚಲ ಅಧಿವೇಶನ ನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ ಹೆಗಲ ಮೇಲೆ ಅಷ್ಟೊಂದು ದೊಡ್ಡ ಜವಾಬ್ದಾರಿ ಇದ್ದರೂ ತನ್ನ ಸ್ವಕ್ಷೇತ್ರದ ಕಾಳಜಿ ಬಗ್ಗೆ ಎಳಷ್ಟು ಲೋಪ ಬಾರದಂತೆ ಎಚ್ಚರ ವಹಿಸಿದ್ದಾರೆ.

ಖಾದರ್ ಅವರ ಖದರ್ ಅಂತಹದ್ದೇ. ಬೀದಿ ಬದಿ ಕಡ್ಲೆಕಾಯಿ ಮಾರುವವರಿಂದ ಆರಂಭಗೊಂಡು ಕೋಟ್ ಧಾರಿಗಳ ವರೆಗೆ ಎಲ್ಲರನ್ನು ಪ್ರೀತಿ- ಗೌರವದಿಂದ ನೋಡಿಕೊಳ್ಳುವುದು ಅವರ ವಿಶೇಷತೆ. ಇದರ ಫಲ ಎಂಬಂತೆ ಖಾದರ್ ಅವರು ಎರಡು ದಶಕಗಳಿಂದ ತನ್ನ ಸ್ವಕ್ಷೇತ್ರ ಮಂಗಳೂರು(ಉಳ್ಳಾಲ)ಜನತೆಯ ವಿಶ್ವಾಸ ಕಳೆದುಕೊಂಡಿಲ್ಲ. ಖಾದರ್ ಅವರು ಸ್ಪೀಕರ್ ಆದಾಗ ಅವರ ಕ್ಷೇತ್ರದ ಹೆಚ್ಚಿನ ಜನರಿಗೆ ತುಂಬಾ ಭಯವಿತ್ತು. ಖಾದರ್ ಅವರನ್ನು ಮಂತ್ರಿಯಾಗಿ ನೋಡಲು ಬಯಸುತ್ತಿದ್ದ ಕ್ಷೇತ್ರದ ಜನತೆಗೆ ಸ್ಪೀಕರ್ ಆದರೆ ಎಲ್ಲಿ ಅವರು ತಮ್ಮ ಕೈತಪ್ಪಿ ಹೋಗುತ್ತಾರಾ?, ನಮ್ಮನ್ನು ಮರೆತು ಬಿಡುತ್ತಾರಾ? ಎಂಬ ಅನಾಥ ಪ್ರಜ್ಞೆಯ ಜತೆಗೆ ಪ್ರಶ್ನಾರ್ಥಕ ಭಯ ಜನರಲ್ಲಿ ಆವರಿಸಿತ್ತು. ಆದರೆ ಖಾದರ್ ಅವರು ಸ್ಪೀಕರ್ ಆದರೂ ಕ್ಷೇತ್ರದ ಜನತೆಯನ್ನು ಮರೆತಿಲ್ಲ. ಹಾಗೆ
ಕ್ಷೇತ್ರ ಕಾರ್ಯದಲ್ಲಿ ಲೋಪ ಎಸಗಿದ ಲಕ್ಷಣ ಕಾಣುತ್ತಿಲ್ಲ. ವಿಧಾನ ಸಭೆ ಅಧಿವೇಶನಕ್ಕೆ ಶನಿವಾರ ಮತ್ತು ಭಾನುವಾರ ಇರುವ ಸಣ್ಣ ಬ್ರೇಕನ್ನು ಬಳಸಿಕೊಂಡು ಅವರು ತನ್ನ ಸ್ಚಕ್ಷೇತ್ರ ಉಳ್ಳಾಲಕ್ಕೆ ಆಗಮಿಸಿದ್ದಾರೆ.


ಶನಿವಾರ ತುಂಬಿ ತುಳುಕುತ್ತಿದ್ದ ಮಂಗಳೂರಿನ ಸುರ್ಕ್ಯುಟ್ ಹೌಸ್ ನಲ್ಲಿ ಜನರ ಅಹವಾಲು ಆಲಿಸಿದ್ದಾರೆ. ನಂತರ ಉಳ್ಳಾಲ ಕಡಲ ಕಿನಾರೆಗೆ ಭೇಟಿ ನೀಡಿ ಕಡಲ್ಕೊರೆತ ಬಗ್ಗೆ ಪರಿಶೀಲಿಸಿದ್ದಾರೆ. ಗುಡ್ಡ ಕುಸಿತ ಸ್ಥಳಗಳಿಗೆ ಭೇಟಿ ನೀಡಿ ಜನರಲ್ಲಿ ಮತ್ತೊಮ್ಮೆ ಆತ್ಮವಿಶ್ವಾಸ ಮೂಡಿಸಿದ್ದಾರೆ. ಕ್ಷೇತ್ರ ತುಂಬಾ ಸಾಮಾನ್ಯ ಶಾಸಕನ ತರಹ ಓಡಾಡಿದ್ದಾರೆ. ಕ್ಷೇತ್ರ ಮಾತ್ರವಲ್ಲ ನಾಡಿನುದ್ದಗಲದ ಪ್ರಜ್ಞಾವಂತರಿಗೂ ಇದು ಖುಷಿ ಕೊಟ್ಟಿದೆ.

ಇತ್ತೀಚಿನ ಸುದ್ದಿ

ಜಾಹೀರಾತು