1:20 AM Sunday20 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಉಂದು ನಾಟಕ..ಬಲೆ ಬುಲಿಪಾಲೆ ಸೀಸನ್ 3 ಉದ್ಘಾಟನೆ: ಸಾಧಕಿ ಮಹಿಳೆಯರಿಂದ ಚಾಲನೆ; ಪ್ರಥಮ ಬಹುಮಾನ 2 ಲಕ್ಷ

20/06/2023, 18:46

ಮಂಗಳೂರು(reporterkarnataka.com): ಕರಾವಳಿ ಕರ್ನಾಟಕದ ನಾಡಿಮಿಡಿತ ನಮ್ಮ ಟಿವಿಯ ಜನಪ್ರಿಯ ಕಾರ್ಯಕ್ರಮ ಉಂದು ನಾಟಕ…ಬಲೆ ಬುಲಿಪಾಲೆ ಸ್ಪರ್ಧೆಯ ಮೂರನೇ ಆವೃತ್ತಿಯನ್ನು ಸಾಧಕ ಮಹಿಳೆಯರಾದ ಹರೇಕಳದ ನಫೀಸಾ ಹಾಗೂ ಅವರ ಮಗಳು ನಜ್ರೀನ ಇತ್ತೀಚೆಗೆ ಉದ್ಘಾಟಿಸಿದರು.


ಉಂದು ನಾಟಕ ಬಲೆ ಬುಲೆಪಾಲೆಯ 2 ಆವೃತ್ತಿಗಳು ಈಗಾಗಲೇ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಹಲವಾರು ಕಲಾವಿದರು ಮುನ್ನಡೆಗೆ ಬರುವಂತೆ ಮಾಡಿದೆ. ಮಾತ್ರವಲ್ಲದೆ ಈ ಕಾರ್ಯಕ್ರಮದ ಮೂಲಕ ಹಲವಾರು ಕಲಾವಿದರಿಗೆ ಸಿನಿಮಾಗಳಲ್ಲಿ ಅವಕಾಶಗಳು ದೊರಕಿವೆ. ಇತ್ತೀಚೆಗೆ ಇದರ ಮೂರನೇ ಆವೃತ್ತಿಯ ಚಿತ್ರೀಕರಣ ಆರಂಭಗೊಂಡಿದ್ದು, ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.
ಬಡತನದ ಬೇಗೆಯಲ್ಲಿ ಬೆಂದರೂ ಸಾಧಿಸುವ ಛಲ ದೊಂದಿಗೆ ಹೈನುಗಾರಿಕೆಯನ್ನು ಆರಂಭಿಸಿ, ಇದೀಗ ಸುಮಾರು 75 ಗೋವುಗಳನ್ನು ಸ್ವತಹ ತಾವೇ ಸಾಕುವ ಮೂಲಕ ಯಶಸ್ಸನ್ನು ಕಂಡಿರುವ, ಮಾತ್ರವಲ್ಲದೆ ಹೈನುಗಾರಿಕೆಯಿಂದ ಬರುವ ಲಾಭಾಂಶದ ಬಹುಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ ಮಾದರಿಯಾಗಿರುವ ಹರೇಕಳದ ನಫೀಸಾ ಮತ್ತು ಆಕೆಯ ಮಗಳು ನಜ್ರೀನಾ ಉಂದು ನಾಟಕ ಬಲಿಬುಲಿಪಾಲೆ ಮೂರನೇ ಆವೃತ್ತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಿತ್ತಲೆ ಹಣ್ಣು ಮಾರಿ ಬಂದ ದುಡ್ಡಿನಲ್ಲಿ ಶಾಲೆ ನಿರ್ಮಿಸಿ ಸಹಸ್ರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲ್ಪಿಸಿಕೊಟ್ಟು ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಹಾಜಬ್ಬರಿಂದಾಗಿ ರಾಜ್ಯಾದ್ಯಂತ ಸುದ್ದಿಯಾಗಿರುವ
ಹರೇಕಳ ಎಂಬ ಊರು ಇದೀಗ ಮತ್ತೊಮ್ಮೆ ಈ ಸಾಧಕ ಮಹಿಳೆಯರಿಂದ ಸುದ್ದಿಯಾಗುತ್ತಿದೆ. ಬಡತನದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯೆಗೆ ಸಹಾಯ, ಬಡ ರೋಗಿಗಳ ಚಿಕಿತ್ಸೆಗೆ ಹಣ, ಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಗಳ ಮದುವೆಗೆ ಆರ್ಥಿಕ ನೆರವು, ಹೀಗೆ ಹಲವಾರು ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿರುವ ನಫೀಸಾ ಹಾಗೂ ಅವರ ಮಗಳು ನಜ್ರೀನಾ ಇತರರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ನಜ್ರೀನಾ ಇಂಜಿನಿಯರಿಂಗ್ ಪದವೀಧರೆಯಾಗಿದ್ದರು ಹಸು ಕರುಗಳ ಮೇಲೆ ವಿಶೇಷ ಅಕ್ಕರೆಯನ್ನು ಹೊಂದಿದ್ದು ,ಅವುಗಳ ಆರೈಕೆಗಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದು ವಿಶೇಷ.ಉಂದು ನಾಟಕ ಬಲೆ ಬಲಿಪಾಲೆಯ ತೀರ್ಪುಗಾರರಾಗಿರುವ ತುಳುರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ದಿಗ್ಗಜ ನಿರ್ದೇಶಕರಾಗಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹಾಗೂ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಉದ್ಘಾಟನಾ ಸಮಾರಂಭದಲ್ಲಿ ತಾರಾ ಮೆರುಗು ನೀಡಿದರು.
ಉಂದು ನಾಟಕ ಬಲೆ ಬುಲೆಪಾಲೆಯ ಮೂರನೇ ಆವೃತ್ತಿಯ ಸ್ಪರ್ಧೆಯ ಪ್ರಥಮ ಸ್ಥಾನಿಗೆ ರೂಪಾಯಿ ಎರಡು ಲಕ್ಷ ಹಾಗೂ ದ್ವಿತೀಯ ಸ್ಥಾನಿಗೆ ರುಪಾಯಿ ಒಂದು ಲಕ್ಷ ನಗದು ಬಹುಮಾನ ದೊರೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು