ಇತ್ತೀಚಿನ ಸುದ್ದಿ
ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭ: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಟ್ರಾಫಿಕ್ ಜಾಮ್
20/05/2023, 12:43

ಬೆಂಗಳೂರು(reporterkarnataka.com): ಕಾಂಗ್ರೆಸ್ ಸರಕಾರದ ಪ್ರಮಾಣ ವಚನ ಸ್ವೀಕಾರದ ಹಿನ್ನೆಲೆಯಲ್ಲಿ ನಗರಕ್ಕೆ ನಾಯಕರು, ಸೆಲೆಬ್ರೆಟಿಗಳು ಹಾಗೂ ಕಾರ್ಯಕರ್ತರ ದಂಡೇ ಆಗಮಿಸುತ್ತಿದ್ದು, ಬೆಂಗಳೂರು ಅಕ್ಷರಶಃ ಟ್ರಾಫಿಕ್ ಜಾಮ್ ನಿಂದ ನಲುಗಿ ಹೋಗಿದೆ.
ದಿಲ್ಲಿಯಲ್ಲಿದ್ದ ರಾಜಕೀಯ ಚಟುವಟಿಕೆಗಳು ರಾಜಧಾನಿ ಬೆಂಗಳೂರಿಗೆ ಶಿಫ್ಟ್ ಆಗಿದೆ.
ನಗರ ಶಾಂಗ್ರಿಲಾ ಹೋಟೆಲ್ ಗೆ ನಾಯಕರ ದಂಡೇ ಆಗಮಿಸಿದೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಬಿಹಾರ ಮುಖ್ಯಮಂತ್ರಿ ನಿತಿನ್ ಕುಮಾರ್, ಖ್ಯಾತ ನಟ ಕಮಲ್ ಹಾಸನ್ ಮುಂತಾದವರು ಆಗಮಿಸಿದ್ದಾರೆ ಶಾಂಗ್ರಿಲಾ ಹೋಟೆಲ್ ಹೊರಗಡೆ ಭಾರಿ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಜಮಾಯಿಸಿದ್ದಾರೆ.
ಬೆಂಗಳೂರಿನ ಪ್ರಮುಖ ರಸ್ತೆ ಗಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರ ಪರಿಣಾಮ ಇಡೀ ಸಿಲಿಕಾನ್ ಸಿಟಿಯ ಮೇಲೆ ಬಿದ್ದಿದೆ. ಹೋಟೆಲ್ ಶಾಂಗ್ರಿಲಾ ಹಾಗೂ ಕಂಠೀರವ ಸ್ಟೇಡಿಯಂನತ್ತ ಹೋಗುವ ಎಲ್ಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಹೆಚ್ಚುವರಿ ಕಾರ್ಯರ್ಶಿ ಐಎನ್ ಎಸ್ ಪ್ರಸಾದ್ ಸಹಿತ ಹಿರಿಯ ಅಧಿಕಾರಿಗಳನ್ನು ತಮ್ಮ ನಿವಾಸಕ್ಕೆ ಕರೆಸಿ ರಾಜ್ಯದ ಹಣಕಾಸು ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿ ಯೋಜನೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಈ ಸಭೆ ಮಹತ್ವದ್ದಾಗಿದೆ.