1:52 PM Thursday18 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಖಗೋಳ ಶಾಸ್ತ್ರಜ್ಞ ಪ್ರೊ. ಜಯಂತ್ ಆಚಾರ್ಯ ಇನ್ನಿಲ್ಲ

14/05/2021, 12:48

ಮಂಗಳೂರು(reporterkarnataka news):

ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ನಿವೃತ್ತ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜಯಂತ್ ಆಚಾರ್ಯ (67) ಹೃದಯಾಘಾತ ದಿಂದ ಮಂಗಳೂರಿನ ಕುಲಶೇಖರ ಸಮೀಪದ ಸರಿಪಳ್ಳದಲ್ಲಿರುವ ಮನೆಯಲ್ಲಿ ನಿಧನರಾದರು.    

ಪ್ರೊ.ಜಯಂತ್  ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನ ಅನೇಕರಿಗೆ ಖಗೋಲಶಾಸ್ತ್ರದ ಅಭಿರುಚಿ ಹುಟ್ಟಿಸಿದ್ದರು.

ಗ್ರಹಣ ಆಗಲೀ, ಧೂಮಕೇತು ಬರಲಿ ಆಕಾಶದ ವಿಸ್ಮಯಗಳತ್ತ ತಮ್ಮ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅದರ ಪರಿಚಯ ಮಾಡಿಸುತ್ತಿದ್ದವರು. ಅದಕ್ಕೆಂದೇ ನಗರದಿಂದ ತುಸುದೂರ ಸರಿಪಲ್ಲ ಎಂಬಲ್ಲಿ ಮನೆ ಮಾಡಿಕೊಂಡು ಆಸಕ್ತರಿಗೆ ಆಕಾಶದ ಪರಿಚಯ ಮಾಡಿಸುತ್ತಿದ್ದರು. ಮಂಗಳೂರು ಹವ್ಯಾಸಿ ಖಗೋಲವೀಕ್ಷಕರ ಸಂಘದ ಮೂಲಕ ಅನೇಕ ಚಟುವಟಿಕೆ ಮಾಡುತ್ತಾ ಕ್ರಿಯಾಶಿಲರಾಗಿದ್ದವರು. 

ಸಂಗೀತ, ಯಕ್ಷಗಾನ, ನಾಟಕ, ಚಾರಣ ಮೊದಲಾದ ಹಲವಾರು ಆಸಕ್ತಿಗಳನ್ನು ಹೊಂದಿದ್ದವರು.  ಕಿರಿಯರ ಜೊತೆ ಸದಾ ಸ್ನೇಹಭಾವದಿಂದ ಇರುತ್ತಿದ್ದ ಸರಳ ಸಜ್ಜನ. Sunday science school ನಂತಹ ಚಟುವಟಿಕೆಗಳ ಮೂಲಕ ಮಕ್ಕಳಿಗೆ ನಿಜವಾದ ಅರ್ಥದಲ್ಲಿ ವಿಜ್ಞಾನ ಕಲಿಕೆ ಎಂಬ ಪ್ರಯೋಗವನ್ನು ಹಲವಾರು ವರ್ಷ ನಡೆಸಿದವರು.

ಬಗಲಿಗೊಂದು ಚೀಲ, ಕೈಯಲ್ಲೊಂದು single fold ಛತ್ರಿ, ಚೌಕ ಫ್ರೇಮಿನ ಕನ್ನಡಕ, ಸದಾ ನಗುಮುಖದ ಶಾಂತ ವ್ಯಕ್ತಿತ್ವದ ಇವರು 

 ತಾಯಿ, ಪತ್ನಿ, ಎರಡು ಪುತ್ರಿಯರು, ಅಳಿಯ, ಸಹೋದರ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು