11:56 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಸಮಾಜದ ಸತ್ಕಾರ್ಯದಲ್ಲಿ ಭಾಗಿಯಾಗಿ ಭಗವಂತನ ಸೇವೆ ಮಾಡುವುದು ನಮ್ಮಗಳ ಕರ್ತವ್ಯ: ಆದಿಚುಂಚನಗಿರಿ ಸ್ವಾಮೀಜಿ

26/02/2023, 14:09

ಮಂಡ್ಯ(reporterkarnataka.com): ಸಮಾಜದ ಮನುಷ್ಯ ಸಮಾಜದ ಕಾಯಕದಲ್ಲಿ ಬದುಕಿನ ಆತ್ಮ ಶುದ್ಧಿಯೊಂದಿಗೆ ಭಗವಂತನ ಮಾಡುವುದು ಸೇವೆ ಮಾಡುವುದು ನಮ್ಮಗಳ ಕರ್ತವ್ಯವೆಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಂದನಾಥ ಮಹಾಸ್ವಾಮೀಜಿಗಳು ಹೇಳಿದರು.

ಅವರು ನಾಗಮಂಗಲ ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಶ್ರೀ ನಾಚಾರಮ್ಮ ಬೃಂದಾವನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಾಲಗ್ರಹಾರದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಶ್ರೀ ನಾಚರಮ್ಮ ಬೃಂದಾವನ ನೂತನ ದೇವಸ್ಥಾನ ಇತಿಹಾಸ ಹೊಂದಿರುವ ಗ್ರಾಮದ ದೇವರು ಹಾಗೂ ಹಿರಿಯರು ತೋರಿಸಿದ ಹಾದಿಯು ನಮ್ಮಗಳಿಗೆ ಇಂದು ಸ್ಪೂರ್ತಿದಾಯಕವಾಗಿ ಸಮಾಜದ ಬೆಳಕಿಗೆ ನೆಲೆಯಾಗಿ ನಿಂತಿರುವುದು ಹಾಗೂ ಗ್ರಾಮದ ಇತಿಹಾಸದ ಪ್ರೇರಣಶಕ್ತಿಗಳು ಸಾಕ್ಷಿ ಬೂತವಾಗಿವೆ.
ನಮಗೆ ಸ್ಪೂರ್ತಿಯ ಅ ಲೆಯಾಗಿ ಯಾಗಿ ಹಿರಿಯರ ಆದರ್ಶದ ಬದುಕಿನಲ್ಲಿ ಆತ್ಮ ಶುದ್ಧಿಯೊಂದಿಗೆ ಬದುಕುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ದೇವರ ಕೈಕಾರ್ಯಗಳೊಂದಿಗೆ ಕಳಸ ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆ ಮಾಡಿದರು. ಗ್ರಾಮಸ್ಥರು ಪೂರ್ಣ ಕುಂಭ ಕಳಸದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಪೂಜ್ಯರು ನಾಚರಮ್ಮ ಬೃಂದಾವನ ದೇವಾಲಯ ಹಾಗೂ ಗ್ರಾಮದೇವತೆ ಪಾಲುಕೇರಮ್ಮ ಮತ್ತು ರಾಮದೇವರಿಗೆ ಪೂಜೆ ಸಲ್ಲಿಸಿದರು.
ಸಮಾರಂಭದಲ್ಲಿ ಗ್ರಾಮದ ಅನೇಕ ಮುಖಂಡರು ಭಕ್ತರು ಗ್ರಾಮಸ್ಥರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು