8:38 AM Friday14 - November 2025
ಬ್ರೇಕಿಂಗ್ ನ್ಯೂಸ್
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ…

ಇತ್ತೀಚಿನ ಸುದ್ದಿ

ಮಾಟೆಗುರಿಯ 19 ಕುಟುಂಬಗಳಿಗೆ 40 ವರ್ಷದ ಬಳಿಕ ಹಕ್ಕುಪತ್ರ ಭಾಗ್ಯ: ಶಾಸಕ ಡಾ. ಭರತ್ ಶೆಟ್ಟಿ ವಿತರಣೆ

24/02/2023, 23:51

ಸುರತ್ಕಲ್(reporterkarnataka.com): ಇಲ್ಲಿನ ಮಾಟೆಗುರಿಯಲ್ಲಿ ಸರಕಾರಿ ಡಿಸಿ ಮನ್ನಾ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದು, ಒಕ್ಕಲೇಳುವ ಭೀತಿಯಲ್ಲಿದ್ದ 19 ಕುಟುಂಬಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ತಮ್ಮ ಸುರತ್ಕಲ್ ಕಚೇರಿಯಲ್ಲಿ ಗುರುವಾರ ಹಕ್ಕು ಪತ್ರ ವಿತರಿಸುವ ಮೂಲಕ ಶುಭ ಹಾರೈಸಿದರು.

ಇದರಿಂದ ಕಳೆದ 40 ವರ್ಷಗಳಿಂದ ಸದಾ ಭೀತಿಯಲ್ಲಿಯೇ ಬದುಕು ಸವೆಸುತ್ತಿದ್ದ 19 ಕುಟುಂಬಗಳು ನಿಟ್ಟುಸಿರುಬಿಟ್ಟಿವೆ. ಕಾನೂನಾತ್ಮಕವಾಗಿ ಹೋರಾಟ ನಡೆಸಿ ,ತಿದ್ದುಪಡಿ ಮಾಡುವ ಮೂಲಕ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಂಡ ಶಾಸಕರಿಗೆ ಜನತೆ ಕೃತಜ್ಞತೆ ಸಲ್ಲಿಸಿದರು.
ಹಲವಾರು ಶಾಸಕರನ್ನು ಕಂಡಿದ್ದೇವೆ. ಈ ಕೆಲಸ ಆಗದು ಎಂದು ಕೈ ಬಿಟ್ಟವರೇ ಹೆಚ್ಚು. ಆದರೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಛಲ, ಮುತುವರ್ಜಿಯಿಂದ ನಮಗೆ ಸ್ವಂತ ಸೂರು ಸಿಕ್ಕುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.


ಶಾಸಕರು ಮಾತನಾಡಿ, ಈ ಕುಟುಂಬಗಳಿಗೆ ಹಕ್ಕು ಪತ್ರ ಒದಗಿಸಿರುವುದು ನನ್ನ ಶ್ರೇಷ್ಟ ಕಾರ್ಯಗಳಲ್ಲಿ ಒಂದಾಗಿದೆ .ಇದರ ಹಿಂದೆ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರು,ಮನಪಾ ಸದಸ್ಯರನ್ನು ಶ್ಲಾಘಿಸಿದರು.
ಮನಪಾ ಸದಸ್ಯ ವರುಣ್ ಚೌಟ, ಪ್ರಮುಖರಾದ ರಮಾನಾಥ್ ಕುಲಾಲ್ , ರಮೇಶ್ ಕೋಡಿಕೆರೆ ಅಬೂಬಕರ್,ಉಪತಹಶೀಲ್ದಾರ್ ನವೀನ್ ,ಕಂದಾಯ ಆದಿಕಾರಿ ರವಿಪ್ರಸಾದ್ ಮಲ್ಯ, ಗ್ರಾಮ ಕರಣಿಕ ಉಮೇಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು