5:27 AM Tuesday16 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ಮಾಟೆಗುರಿಯ 19 ಕುಟುಂಬಗಳಿಗೆ 40 ವರ್ಷದ ಬಳಿಕ ಹಕ್ಕುಪತ್ರ ಭಾಗ್ಯ: ಶಾಸಕ ಡಾ. ಭರತ್ ಶೆಟ್ಟಿ ವಿತರಣೆ

24/02/2023, 23:51

ಸುರತ್ಕಲ್(reporterkarnataka.com): ಇಲ್ಲಿನ ಮಾಟೆಗುರಿಯಲ್ಲಿ ಸರಕಾರಿ ಡಿಸಿ ಮನ್ನಾ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಿದ್ದು, ಒಕ್ಕಲೇಳುವ ಭೀತಿಯಲ್ಲಿದ್ದ 19 ಕುಟುಂಬಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ತಮ್ಮ ಸುರತ್ಕಲ್ ಕಚೇರಿಯಲ್ಲಿ ಗುರುವಾರ ಹಕ್ಕು ಪತ್ರ ವಿತರಿಸುವ ಮೂಲಕ ಶುಭ ಹಾರೈಸಿದರು.

ಇದರಿಂದ ಕಳೆದ 40 ವರ್ಷಗಳಿಂದ ಸದಾ ಭೀತಿಯಲ್ಲಿಯೇ ಬದುಕು ಸವೆಸುತ್ತಿದ್ದ 19 ಕುಟುಂಬಗಳು ನಿಟ್ಟುಸಿರುಬಿಟ್ಟಿವೆ. ಕಾನೂನಾತ್ಮಕವಾಗಿ ಹೋರಾಟ ನಡೆಸಿ ,ತಿದ್ದುಪಡಿ ಮಾಡುವ ಮೂಲಕ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಂಡ ಶಾಸಕರಿಗೆ ಜನತೆ ಕೃತಜ್ಞತೆ ಸಲ್ಲಿಸಿದರು.
ಹಲವಾರು ಶಾಸಕರನ್ನು ಕಂಡಿದ್ದೇವೆ. ಈ ಕೆಲಸ ಆಗದು ಎಂದು ಕೈ ಬಿಟ್ಟವರೇ ಹೆಚ್ಚು. ಆದರೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಛಲ, ಮುತುವರ್ಜಿಯಿಂದ ನಮಗೆ ಸ್ವಂತ ಸೂರು ಸಿಕ್ಕುವಂತಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.


ಶಾಸಕರು ಮಾತನಾಡಿ, ಈ ಕುಟುಂಬಗಳಿಗೆ ಹಕ್ಕು ಪತ್ರ ಒದಗಿಸಿರುವುದು ನನ್ನ ಶ್ರೇಷ್ಟ ಕಾರ್ಯಗಳಲ್ಲಿ ಒಂದಾಗಿದೆ .ಇದರ ಹಿಂದೆ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರು,ಮನಪಾ ಸದಸ್ಯರನ್ನು ಶ್ಲಾಘಿಸಿದರು.
ಮನಪಾ ಸದಸ್ಯ ವರುಣ್ ಚೌಟ, ಪ್ರಮುಖರಾದ ರಮಾನಾಥ್ ಕುಲಾಲ್ , ರಮೇಶ್ ಕೋಡಿಕೆರೆ ಅಬೂಬಕರ್,ಉಪತಹಶೀಲ್ದಾರ್ ನವೀನ್ ,ಕಂದಾಯ ಆದಿಕಾರಿ ರವಿಪ್ರಸಾದ್ ಮಲ್ಯ, ಗ್ರಾಮ ಕರಣಿಕ ಉಮೇಶ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು