8:03 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಹೇಮಾವತಿ ನದಿಗೆ ಕಾಫಿ ಪಲ್ಪರ್ ನೀರು: ಜನ, ಜಾನುವಾರು, ಜಲಚರಗಳಿಗೆ ಕಂಟಕ; ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ

29/01/2023, 21:46

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka agnail.com

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಜಿ ಅಗ್ರಹಾರ ಸಮೀಪ ಹೇಮಾವತಿ ನದಿಗೆ ಕಾಫಿ ಪಲ್ಪರ್ ನೀರು ಬಿಟ್ಟಿದ್ದು ಹೇಮವತಿ ನದಿ ಕಲುಷಿತವಾಗಿದ್ದು ಜನ ಜಾನುವಾರುಗಳಿಗೆ ಹಾಗೂ ಜಲಚರಗಳಿಗೆ ಮಾರಕವಾಗಿದೆ. ಅಧಿಕಾರಿ ಸಿಬ್ಬಂದಿಗಳಲ್ಲಿ ವಿನಂತಿ ಜೀ ಅಗ್ರಹಾರ ಭಾಗದಿಂದ ಕೆಳಗೆ ಸಿಗಳ್ಳಿ ಚಕ್ಕುಡಿಗೆ ಅಚ್ಚರಡಿ ಭಾಗವಾಗಿ ಹರಿಯುತ್ತಿರುವ ಹೇಮಾವತಿ ನದಿ ನೀರು ಯಾರೂ ಅನಾಗರಿಕರು ರಾತ್ರಿ ಸಮಯದಲ್ಲಿ ರೋಬೆಸ್ಟ್ ಕಾಫಿ ಪಲ್ಪರ್ ಮಾಡಿ ಅದರ ಕಲುಷಿತ ನೀರನ್ನು ಹೇಮಾವತಿ ನದಿಗೆ ಹರಿಬಿಡುತ್ತಿದ್ದಾರೆ.


ಈ ನೀರನ್ನು ಕುಡಿದ ಅನೇಕ ಜಲಚರ ಪ್ರಾಣಿಗಳು, ಸಾವಿರಾರು ಜಾನುವಾರುಗಳು ಅಷ್ಟೇ ಯಾಕೆ ಮನುಷ್ಯರು ಸಹ ಈ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾಗುವ ಮುಂಚೆ ತಹಸೀಲ್ದಾರರು ಇತ್ತ ಗಮನಹರಿಸಿ ಯಾರು ಇಂತ ಅನಾಗರಿಕೆ ಕೆಲಸ ಮಾಡುತ್ತೀದ್ದನೋ ಅಂಥವರಿಗೆ ಶಿಕ್ಷೆ ಕೊಡಿಸಬೇಕು. ಹೇಮಾವತಿ ನದಿಯ ದಡದ ಮೇಲೆ ನಡೆದುಕೊಂಡು ಹೋದರು ಈ ಪಲ್ಪರ್ ಘಾಟು ಬರುತ್ತಿದೆ. ನೀರು ಪೂರ್ತಿ ಕಪ್ಪು ಬಣ್ಣದಿಂದ ಕೂಡಿರುತ್ತದೆ ದಯವಿಟ್ಟು ಅಧಿಕಾರಿಗಳು ಇವತ್ತೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕೂಡಲೆ ಕ್ರಮ ಜರುಗಿಸಿ ಇಲ್ಲವಾದಲ್ಲಿ ಲಕ್ಷಾಂತರ ಜಲಚರ ಜೀವಿಗಳು ಸರ್ವ ನಾಶವಾಗುತ್ತವೆ

ಇತ್ತೀಚಿನ ಸುದ್ದಿ

ಜಾಹೀರಾತು