ಇತ್ತೀಚಿನ ಸುದ್ದಿ
ಪೂರ್ಣಚಂದ್ರ ತೇಜಸ್ವಿ ಬದುಕು- ಬರಹ ರಾಜ್ಯಮಟ್ಟದ ಲೇಖನ ಸ್ಪರ್ಧೆ: ಭರತ್ ಕುತ್ತೆತ್ತೂರು ಪ್ರಥಮ
10/01/2023, 23:09

ಮಂಗಳೂರು(reporterkarnataka.com): ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು- ಬರಹ ಕುರಿತು ನಡೆದ ರಾಜ್ಯಮಟ್ಟದ ಲೇಖನ ಸ್ಪರ್ಧೆಯಲ್ಲಿ ಸುರತ್ಕಲ್ ಸಮೀಪದ ಭರತ್ ಕುತ್ತೆತ್ತೂರು ಪ್ರಥಮ ಬಹುಮಾನ ಪಡೆದಿದ್ದಾರೆ.
ವಿಜೇತರ ವಿವರ : ಭರತ್ ಕುತ್ತೆತ್ತೂರು, ರಂಜನಿ ಆಡಿಗ, ರಾಮ ದೇವಾಡಿಗ ಬೈಂದೂರು ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2023 ಜನವರಿ 29 ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರದೊಂದಿಗೆ ಅಭಿನಂದಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಅವ್ವ ಪುಸ್ತಕಾಲಯವು ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಸಾಹಿತ್ಯ ಸ್ಪರ್ಧೆಗಳ ಫಲಿತಾಂಶ ಕೂಡ ಪ್ರಕಟವಾಗಿದೆ.
ಅವ್ವ ವಿಷಯಾಧಾರಿತ ಸ್ವರಚಿತ ಕವನ ವಾಚನದ 10 ಅತ್ಯುತ್ತಮ ಕವಿತೆಗಳನ್ನು ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಕವಿಗಳ ಹೆಸರಿನ ಪಟ್ಟಿ ಈ ಕೆಳಗಿನಂತಿದೆ.
ನಾರಾಯಣಸ್ವಾಮಿ ವಿ ಮಾಸ್ತಿ, ಯಶಸ್ವಿನಿ ಶ್ರೀಧರಮೂರ್ತಿ , ಆಶಾ ಸಚಿನ್, ವಿಕ್ರಮ ಬಿ ಕೆ, ಎಸ್ ಎಂ ಗೋಪಿ, ತೇಜ ಎಸ್ ಬಿ, ದೀಕ್ಷಿತ್ ನಾಯರ್ ಮಂಡ್ಯ, ನಂಜನಗೂಡು ಚಂದನ್ ಕುಮಾರ್, ಪೂಜಾ ಎಂ.ಪಿ, ಹೇಮಂತ್ ಶೃಂಗನಾಡು.