12:49 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಫುಟ್ ಪಾತ್ ನುಂಗಿ ಹಾಕಿದ ಮೆಸ್ಕಾಂ ವಿದ್ಯುತ್ ಕಂಬಗಳು!: ಪಾದಚಾರಿಗಳ ಸುಗಮ ಸಂಚಾರಕ್ಕೆ ಬ್ರೇಕ್ !

08/11/2022, 14:16

ಅನುಷ್ ಪಂಡಿತ್ ಮಂಗಳೂರು

info.reporter Karnataka@gmail.com

ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡುವುದು, ವಾಹನ ನಿಲ್ಲಿಸುವುದು ತಪ್ಪು. ಆದರೆ ಫುಟ್ ಪಾತ್ ನಲ್ಲೇ ಮೆಸ್ಕಾಂನವರು ವಿದ್ಯುತ್ ಕಂಬ ನೆಟ್ಟರೆ ಹೇಗೆ? ಕಡಲನ ನಗರಿ ಮಂಗಳೂರಿನಲ್ಲಿ ಇಂತಹ ಅನೇಕ ತಾಜಾ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.


ಮೊದಲೇ ಇಕ್ಕಟ್ಟಾದ ಫುಟ್ ಪಾತ್ ನಲ್ಲಿ ಅಲ್ಲಿಲ್ಲಿ ಮೆಸ್ಕಾಂ ವತಿಯಿಂದ ವಿದ್ಯುತ್ ಕಂಬಗಳನ್ನು ನೆಡಲಾಗಿದೆ. ಪಾದಚಾರಿಗಳ ತಲೆಗೆ ಹೊಡೆಯುವ ರೀತಿಯಲ್ಲಿ ಕಂಬಗಳಿವೆ.ನಗರದ ಕೆ.ಎಸ್. ರಾವ್ ರೋಡಿನಿಂದ ರಾಮಭವನ ರಸ್ತೆಗೆ ಸಾಗುವ ಫುಟ್ ಪಾತ್ ನಲ್ಲಿ ಇಂತಹ ದೃಶ್ಯ ಕಾಣಸಿಗುತ್ತದೆ. ಬಣ್ಣದ ಫುಟ್ ಪಾತ್ ನಲ್ಲೇ ವಿದ್ಯುತ್ ಕಂಬಗಳನ್ನು ನೆಡಲಾಗಿದೆ.

ಸ್ಮಾರ್ಟ್ ಮಂಗಳೂರಿಗೆ ಇದು ಕಪ್ಪು ಚುಕ್ಕೆಯಾಗಿದೆ. ನಡೆದು ಕೊಂಡು ಹೋಗುವ ಫುಟ್ ಪಾತ್ ನ್ನು ಮೆಸ್ಕಾಂ ಕಂಬಕ್ಕೆ ಬಳಸಿದರೆ ಅಂಗಡಿ ಎದುರಿನ ತಗ್ಗು ಜಾಗದಲ್ಲಿ ವಾಹನ ನಿಲ್ಲಿಸೋದು ತಪ್ಪೇ ಎಂದು ಕೆಲವು ವಾಹನ ಮಾಲೀಕರು ಪ್ರಶ್ನಿಸುತ್ತಾರೆ.
ಇತ್ತ ಪೊಲೀಸ್ ಫುಟ್ ಭತ್ ನಲ್ಲಿ ನಿಲ್ಲಿಸಿದ ವಾಹನಗಳನ್ನು ಲಾಕ್ ಹಾಕಿ ಫೈನ್ ಹಾಕುವ ಪ್ರಕ್ರಿಯೆ ಮಾಡಿಕೊಂಡಿದ್ದಾರೆ. ಅನೇಕ ಶಾಪ್ ಗಳು ಪಾರ್ಕಿಂಗ್ ಜಾಗವನ್ನೇ ನುಂಗಿವೆ. ಬಹುತೇಕ ಅಂಗಡಿಗಳಿಗೆ ಪಾರ್ಕಿಂಗ್ ಇಲ್ಲ. ಪಾರ್ಕಿಂಗ್ ಸಮಸ್ಯೆಯ ಪಾಲಿಕೆ ತಲೆಕೆಡಿಸಿಕೊಂಡಂತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು