1:09 PM Friday26 - June 2026
ಬ್ರೇಕಿಂಗ್ ನ್ಯೂಸ್
ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ದಲಿತ ಯುವಕನ ಮೇಲೆ ಶಾಸಕರ ಆಪ್ತನಿಂದ ಹಲ್ಲೆ ಆರೋಪ; ಉಪ ಅಧೀಕ್ಷಕರ ಕಚೇರಿಗೆ ಮುತ್ತಿಗೆ

03/11/2022, 19:36

ವಿ.ಜಿ. ವೃಚಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬದ ಯುವಕ ನಾಗರಾಜ್ ನಿರ್ಕಲಪ್ಪನವರ್ ಮೇಲೆ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಆಪ್ತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಶಾಸಕರ ಆಪ್ತ ನೆಂದು ತನ್ನನ್ನ ತಾನೇ ಗುರುತಿಸಿಕೊಳ್ಳೊ ಮೂಲಕ ತಾಲೂಕು ಹಾಗೂ ನೆರೆ ಹೊರೆ ತಾಲೂಕಿನಾದ್ಯಂತ ನಿತ್ಯ ಸಾವಿರಾರು ಲೀಟರ್ ಮದ್ಯ ಬೈಕ್ ಗಳ ಮೂಲಕ ಸಾಗಿಸಿ ಮಾರಾಟದಲ್ಲಿ ತೊಡಗಿಕೊಂಡು ವೈನ್ ಲೋಕದ ಕಿಂಗ್ ಪಿನ್ ಎಂದೆ ಗುರುತಿಸಿ ಕೊಂಡಿರಿವ ಟಿ.ಜಿ.ಮಲ್ಲಿ ಕಾರ್ಜುನನ ನಿಜ ಬಣ್ಣ ಇಂದು ಬಯಲಾಗಿದೆ. ಈತ ಹಾಗೂ ಈತನ ಸಹೋದರ ನಾಗರಾಜ ಗೋಮುಖ ವ್ಯಾಘ್ರಗಳಾಗಿದ್ದಾರೆ ಎಂದು ಕೆಲ ದಲಿತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರು ಎಸ್ಸಿ ಎಸ್ಟಿ ಯುವಕರನ್ನು ತನ್ನ ವೈನ್ ನ್ನು ಅಕ್ರಮ ಸಾಗಾಣಿಕೆ ಮಾಡಲು ದುರುಪಯೋಗಪಡಿಸಿಕೊಂಡು ಅವರಿಗೆ ಬಿಡಿಗಾಸು ಕೊಟ್ಟು ತಾನು ಮಾತ್ರ ಆರ್ಗರ್ಭ ಶ್ರೀಮಂತನಾಗಲು ದಲಿತ ಯುವಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಎಂಬ ಗಂಭೀರ ಆರೋಪವಿದೆ. ತಾಲೂಕು ಹಾಗೂ ನೆರೆ ಹೊರೆತಾಲೂಕುನಾದ್ಯಂತ ವೈನ್ ಅಕ್ರಮ ವ್ಯಾಪಾರ ಮಾಡೋ ಮೂಲಕ ಗುರುತಿಸಿಕೊಂಡಿದ್ದ, ಅಕ್ರಮ ವ್ಯಾಪಾರಕ್ಕಾಗಿ ಶಾಸಕರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಪಟ್ಟಣದ ಅಶ್ಟಮೇಧ ಗ್ರೂಪ್ಸ್ ಮಾಲೀಕನಾದ ಮಲ್ಲಿಕಾರ್ಜುನ್ ಗೌಡ, ಹಾಗೂ ಆತನ ಸಹೋದರ ನಾಗರಾಜ್ ಗೌಡ ತಮ್ಮ ಸಹಚರರೊಡಗೂಡಿ ಎಲ್ಲರೂ ಸೇರಿ ಅಮಾಯಕ ದಲಿತ ಯುವಕ ನಾಗರಾಜನ ನಿರ್ಕಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ಆರೋಪ ಕೇಳಿಬಂದಿದೆ. ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರುವ ಹಾಗೂ ಕಚೇರಿ ಅತಿಕ್ರಮ ಪ್ರವೇಶ, ಹಲ್ಲೆ ಮತ್ತು ಎಸ್ಟಿ ಎಸ್ಸಿ ಕಾಯ್ದೆಯಡಿ ಜಾತಿ ನಿಂದನೆ ಆರೋಪದ ಪ್ರಖರಣ ದಾಖಲಾಗಿದೆ. ಹಲ್ಲೆಗೊಳಗಾದ ನಾಗರಾಜ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ಮಾಡಿರುವ ಟಿ.ಜಿ.ಮಲ್ಲಿಕಾರ್ಜುನ ಗೌಡ್ರು ಹಾಗೂ ಸಹೋದರ ಶಿಕ್ಷಕ ಟಿ.ಜಿ.ನಾಗರಾಜ ಗೌಡ ಅನಾರೋಗ್ಯದ ನೆಪ ವಡ್ಡಿದ್ದಾರೆಂದು ಕೇಳಿ ಬಂದಿದೆ. ಇದೆಲ್ಲಾ ನಾಟಕವೆಂದು ಪ್ರಕರಣದಡಿ ಬಂಧನ ಭೀತಿಯ ಕಾರಣ ತಪ್ಪಿಸಿಕೊಳ್ಳೋ ನಾಟಕವಾಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ವೀರಶೈ ಸಮುದಾಯದ ಹೆಸರು ಹೇಳಿಕೊಂಡು ಶಾಸಕರ ಹತ್ತಿರ ಗುರುತಿಸಿಕೊಳ್ಳೋ ಟಿ.ಜಿ.ಮಲ್ಲಿಕಾರ್ಜುನ ಗೌಡ, ಸಮುದಾಯಕ್ಕೆ ಮಾಡಿರೋ ಸೇವೆ ಶೂನ್ಯ ಇಂತಹ ಪಾಖಂಡಿಯನ್ನ ಹತ್ತಿರ ಇಟ್ಟುಕೊಂಡಿರುವ ಹಿರಿಯ ಶಾಸಕರ ಪ್ರತಿಷ್ಠೆಗೆ ಧಕ್ಕೆಯಾಗೋದಂತು ಖಾಯಂ, ಅದರ ಪ್ರಭಾವ ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ನೀಡಲಿದೆ ಎಂದು ಹಿರಿಯ ನಾಗರೀಕರು ಹಾಗೂ ವೀರಶೈವ ಸಮಾಜದ ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ; ಕೂಡ್ಲಿಗಿ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಯುವಕರು ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು