6:30 AM Saturday25 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ದಲಿತ ಯುವಕನ ಮೇಲೆ ಶಾಸಕರ ಆಪ್ತನಿಂದ ಹಲ್ಲೆ ಆರೋಪ; ಉಪ ಅಧೀಕ್ಷಕರ ಕಚೇರಿಗೆ ಮುತ್ತಿಗೆ

03/11/2022, 19:36

ವಿ.ಜಿ. ವೃಚಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡ ಕುಟುಂಬದ ಯುವಕ ನಾಗರಾಜ್ ನಿರ್ಕಲಪ್ಪನವರ್ ಮೇಲೆ ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಆಪ್ತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಶಾಸಕರ ಆಪ್ತ ನೆಂದು ತನ್ನನ್ನ ತಾನೇ ಗುರುತಿಸಿಕೊಳ್ಳೊ ಮೂಲಕ ತಾಲೂಕು ಹಾಗೂ ನೆರೆ ಹೊರೆ ತಾಲೂಕಿನಾದ್ಯಂತ ನಿತ್ಯ ಸಾವಿರಾರು ಲೀಟರ್ ಮದ್ಯ ಬೈಕ್ ಗಳ ಮೂಲಕ ಸಾಗಿಸಿ ಮಾರಾಟದಲ್ಲಿ ತೊಡಗಿಕೊಂಡು ವೈನ್ ಲೋಕದ ಕಿಂಗ್ ಪಿನ್ ಎಂದೆ ಗುರುತಿಸಿ ಕೊಂಡಿರಿವ ಟಿ.ಜಿ.ಮಲ್ಲಿ ಕಾರ್ಜುನನ ನಿಜ ಬಣ್ಣ ಇಂದು ಬಯಲಾಗಿದೆ. ಈತ ಹಾಗೂ ಈತನ ಸಹೋದರ ನಾಗರಾಜ ಗೋಮುಖ ವ್ಯಾಘ್ರಗಳಾಗಿದ್ದಾರೆ ಎಂದು ಕೆಲ ದಲಿತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರು ಎಸ್ಸಿ ಎಸ್ಟಿ ಯುವಕರನ್ನು ತನ್ನ ವೈನ್ ನ್ನು ಅಕ್ರಮ ಸಾಗಾಣಿಕೆ ಮಾಡಲು ದುರುಪಯೋಗಪಡಿಸಿಕೊಂಡು ಅವರಿಗೆ ಬಿಡಿಗಾಸು ಕೊಟ್ಟು ತಾನು ಮಾತ್ರ ಆರ್ಗರ್ಭ ಶ್ರೀಮಂತನಾಗಲು ದಲಿತ ಯುವಕರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ ಎಂಬ ಗಂಭೀರ ಆರೋಪವಿದೆ. ತಾಲೂಕು ಹಾಗೂ ನೆರೆ ಹೊರೆತಾಲೂಕುನಾದ್ಯಂತ ವೈನ್ ಅಕ್ರಮ ವ್ಯಾಪಾರ ಮಾಡೋ ಮೂಲಕ ಗುರುತಿಸಿಕೊಂಡಿದ್ದ, ಅಕ್ರಮ ವ್ಯಾಪಾರಕ್ಕಾಗಿ ಶಾಸಕರ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಪಟ್ಟಣದ ಅಶ್ಟಮೇಧ ಗ್ರೂಪ್ಸ್ ಮಾಲೀಕನಾದ ಮಲ್ಲಿಕಾರ್ಜುನ್ ಗೌಡ, ಹಾಗೂ ಆತನ ಸಹೋದರ ನಾಗರಾಜ್ ಗೌಡ ತಮ್ಮ ಸಹಚರರೊಡಗೂಡಿ ಎಲ್ಲರೂ ಸೇರಿ ಅಮಾಯಕ ದಲಿತ ಯುವಕ ನಾಗರಾಜನ ನಿರ್ಕಲ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆಂದು ಆರೋಪ ಕೇಳಿಬಂದಿದೆ. ಸಂಬಂಧಿಸಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿರುವ ಹಾಗೂ ಕಚೇರಿ ಅತಿಕ್ರಮ ಪ್ರವೇಶ, ಹಲ್ಲೆ ಮತ್ತು ಎಸ್ಟಿ ಎಸ್ಸಿ ಕಾಯ್ದೆಯಡಿ ಜಾತಿ ನಿಂದನೆ ಆರೋಪದ ಪ್ರಖರಣ ದಾಖಲಾಗಿದೆ. ಹಲ್ಲೆಗೊಳಗಾದ ನಾಗರಾಜ ಚಿಕಿತ್ಸೆ ಪಡೆಯುತ್ತಿದ್ದಾನೆ, ಹಲ್ಲೆ ಮಾಡಿರುವ ಟಿ.ಜಿ.ಮಲ್ಲಿಕಾರ್ಜುನ ಗೌಡ್ರು ಹಾಗೂ ಸಹೋದರ ಶಿಕ್ಷಕ ಟಿ.ಜಿ.ನಾಗರಾಜ ಗೌಡ ಅನಾರೋಗ್ಯದ ನೆಪ ವಡ್ಡಿದ್ದಾರೆಂದು ಕೇಳಿ ಬಂದಿದೆ. ಇದೆಲ್ಲಾ ನಾಟಕವೆಂದು ಪ್ರಕರಣದಡಿ ಬಂಧನ ಭೀತಿಯ ಕಾರಣ ತಪ್ಪಿಸಿಕೊಳ್ಳೋ ನಾಟಕವಾಡುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ವೀರಶೈ ಸಮುದಾಯದ ಹೆಸರು ಹೇಳಿಕೊಂಡು ಶಾಸಕರ ಹತ್ತಿರ ಗುರುತಿಸಿಕೊಳ್ಳೋ ಟಿ.ಜಿ.ಮಲ್ಲಿಕಾರ್ಜುನ ಗೌಡ, ಸಮುದಾಯಕ್ಕೆ ಮಾಡಿರೋ ಸೇವೆ ಶೂನ್ಯ ಇಂತಹ ಪಾಖಂಡಿಯನ್ನ ಹತ್ತಿರ ಇಟ್ಟುಕೊಂಡಿರುವ ಹಿರಿಯ ಶಾಸಕರ ಪ್ರತಿಷ್ಠೆಗೆ ಧಕ್ಕೆಯಾಗೋದಂತು ಖಾಯಂ, ಅದರ ಪ್ರಭಾವ ಮುಂಬರುವ ಚುನಾವಣೆಯಲ್ಲಿ ಫಲಿತಾಂಶ ನೀಡಲಿದೆ ಎಂದು ಹಿರಿಯ ನಾಗರೀಕರು ಹಾಗೂ ವೀರಶೈವ ಸಮಾಜದ ಕೆಲ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ; ಕೂಡ್ಲಿಗಿ ಉಪ ಅಧೀಕ್ಷಕರ ಕಚೇರಿ ಮುಂಭಾಗದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಯುವಕರು ಕಚೇರಿಗೆ ಮುತ್ತಿಗೆ ಹಾಕಿ ಕಚೇರಿ ಮುಂದೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು