2:00 AM Tuesday23 - September 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ, ಕುಶಾಲನಗರ ಮತ್ತು ಹುದಿಕೇರಿ ಆಸ್ಪತ್ರೆ ಮೇಲ್ದರ್ಜೆಗೆ: ಆರೋಗ್ಯ ಸಚಿವ… ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ: ಮಹಿಳಾ ದಸರಾ ಉದ್ಘಾಟಿಸಿ… ಪೊನ್ನಂಪೇಟೆ ಕೋಣಗೇರಿಯಲ್ಲಿ ಸೈನಿಕ ಪತಿಯಿಂದಲೇ ಪತ್ನಿಗೆ ಗುಂಡು: ಮೈಸೂರಿಗೆ ರವಾನೆ ಗೋಣಿಕೊಪ್ಪಲು ಬಿಟ್ಟಂಗಾಲ ಮುಖ್ಯರಸ್ತೆಯಲ್ಲಿ ಖಾಸಗಿ ಬಸ್ – ಜೀಪು ಅಪಘಾತ: ಅದೃಷ್ಟವಶಾತ್ ಎಲ್ಲರೂ… Kodagu | ಐತಿಹಾಸಿಕ ಮಡಿಕೇರಿ ದಸರಾಕ್ಕೆ ಚಾಲನೆ: 4 ಶಕ್ತಿ ದೇವತೆಗಳಿಗೆ ವಿಶೇಷ… ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ

ಇತ್ತೀಚಿನ ಸುದ್ದಿ

ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆ: ಬೆಂಗಳೂರಿನ ಗೆಳತಿಯರಿಂದ ಕರಾವಳಿಯಲ್ಲಿ ಬೈಕ್ ರೈಡ್!

12/10/2022, 23:29

ಉಡುಪಿ(reporter Karnataka.com): ಶಾಂತಿಗಾಗಿ, ಸೌಹಾರ್ದತೆಗಾಗಿ, ಪರಿಸರಕ್ಕಾಗಿ ಆಗಾಗ ಬೈಕ್ ಯಾತ್ರೆ ನಡೆಸುವುದನ್ನು ನಾವು ಕೇಳಿದ್ದೇವೆ. ಆದರೆ ಬೆಂಗಳೂರಿನ ಇಬ್ಬರು ಮಹಿಳೆಯರು ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆಗಾಗಿ ಕರಾವಳಿಯಲ್ಲಿ ಬೈಕ್ ಸಂಚಾರ ಆರಂಭಿಸಿದ್ದಾರೆ.
ಸ್ವಾತಿ ಮತ್ತು ಅನಿತಾ ಅವರು ಈ ಅಪರೂಪದ ಗೆಳತಿಯರು. ಅನಿತಾ ಅವರು ತನ್ನ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸಮುದ್ರದಲ್ಲಿರುವ ಜೀವವೈವಿಧ್ಯಗಳ ರಕ್ಷಣೆಗೆ ಮುಂದಾಗಿದ್ದಾರೆ. ಅನಿತಾ ಎಂಬ ಗೃಹಿಣಿ, ಪರಿಸರ ಜಾಗೃತಿಗಾಗಿ ಗೆಳತಿಯೊಂದಿಗೆ ಕೈಜೋಡಿಸಿದ್ದಾರೆ. ಈ ಗೆಳತಿಯರು ಈಗಾಗಲೇ ಫೆಬ್ರವರಿಯಲ್ಲಿ “ಮಹಿಳೆಯರ ಭಯಮುಕ್ತ ಕರ್ನಾಟಕ” ಎಂಬ ಅಭಿಯಾನವನ್ನು ನಡೆಸಿ, ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಸಂಚರಿಸಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಇದೀಗ ಬೆಂಗಳೂರಿನಿಂದ 1300 ಕಿ.ಮೀ. ಬೈಕಿನಲ್ಲಿ ಬಂದು, ಆ.9ರಿಂದ ಮಂಗಳೂರಿನಿಂದ ಆರಂಭಿಸಿ ಕರಾವಳಿಯ 3 ಜಿಲ್ಲೆಗಳಲ್ಲಿ ಬೈಕ್ ಮೇಲೆ ಸಂಚರಿಸುತಿದ್ದಾರೆ. ಸಮುದ್ರ ಜೀವವೈವಿಧ್ಯಗಳ ಬಗ್ಗೆ ಸ್ಥಳೀಯ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ತಾವೇ ಬೀಚುಗಳಲ್ಲಿ ಕಸ ಹೆಚ್ಚಿ, ಸ್ವಚ್ಛತೆ ನಡೆಸಿ ಮಾದರಿಯಾಗುತ್ತಿದ್ದಾರೆ.
ಮಂಗಳವಾರ ಇಲ್ಲಿನ ಹೂಡೆ ಬೀಚ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅವರೊಂದಿಗೆ ಸ್ಥಳೀಯರು, ಸಂಘಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದು, ಅವರು ಅಭಿಯಾನ ಪರಿಣಾಮ ಬೀರುತ್ತಿದೆ ಎಂಬುದನ್ನು ತೋರಿಸುವಂತಿತ್ತು.

ಈಗಾಗಲೇ ಮಂಗಳೂರಿನ ಸೋಮೇಶ್ವರ, ಬೆಂಗ್ರೆ, ಪಣಂಬೂರು ಬೀಚುಗಳಲ್ಲಿ ಸಂಚರಿಸಿ ಅಲ್ಲಿನ ಜನರೊಂದಿಗೆ ವಿಚಾರವಿನಿಮಯ ನಡೆಸಿ ಸಮುದ್ರ ಜೀವಿಗಳ ರಕ್ಷಣೆಗೆ ಪರಿಸರವನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಒಟ್ಟು 29 ಬೀಚುಗಳನ್ನು ಅಲ್ಲಿನ ಜನರನ್ನು ಸಂದರ್ಶಿಸುವ ಗುರಿ ಈ ಸ್ವಾತಿ – ಅನಿತಾ ಜೋಡಿಯದ್ದು.
ಜೀವವೈವಿಧ್ಯ ರಕ್ಷಣೆ ಹವ್ಯಾಸವಾಗಬೇಕು

ಸಮುದ್ರ ಜೀವಿಗಳ ರಕ್ಷಣೆಗೆ ಮುಖ್ಯವಾಗಿ ಪ್ಲಾಸ್ಟಿಕ್ ಸಮುದ್ರ ಸೇರದಂತೆ ಸ್ಥಳೀಯರಿಗೆ ಮತ್ತು ಬೀಚುಗಳಲ್ಲಿ ಸಿಗುವ ಪ್ರವಾಸಿಗರಿಗೆ ಮಾಹಿತಿ ನೀಡುತಿದ್ದೇವೆ. ಸ್ಥಳಿಯ ಕಾಲೇಜು ವಿದ್ಯಾರ್ಥಿಗಳ ಮತ್ತು ಪರಿಸರಾಸಕ್ತ ಮನಸ್ಸುಗಳನ್ನು ಒಂದೆಡೆ ಸೇರಿಸಿ ಬೀಚುಗಳನ್ನು ಕಸಮುಕ್ತ ಮಾಡುವ ಪ್ರಯತ್ನ ಮಾಡುತಿದ್ದೇವೆ. ಮುಂದೆ ಇದು ಎಲ್ಲರ ಹವ್ಯಾಸವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.
— ಸ್ವಾತಿ – ಅನಿತಾ ಬೆಂಗಳೂರು .

ಇತ್ತೀಚಿನ ಸುದ್ದಿ

ಜಾಹೀರಾತು