6:10 PM Monday13 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

ಕಡಲನಗರಿಯಲ್ಲಿ ಅರ್ಧಂಬರ್ಧ ಕಾಮಗಾರಿ!: ಜನರಿಗೆ ತಪ್ಪದ ಕಿರಿಕಿರಿ!!: ಅಭಿವೃದ್ಧಿ ಹೆಸರಿನಲ್ಲಿ ನಿತ್ಯ ನರಕ!

25/09/2022, 19:13

ಅನುಷ್ ಪಂಡಿತ್ ಮಂಗಳೂರು /ಗಣೇಶ್ ಅದ್ಯಪಾಡಿ

info.reporterkarnataka@gmail.com

ಸ್ಮಾರ್ಟ್ ಸಿಟಿ ಆಗುವ ಕನಸು ಕಾಣುತ್ತಿರುವ ಮಂಗಳೂರು ಮಹಾನಗರ ಇನ್ನೂ ಹಲವಾರು ಮೂಲ ಸೌಕರ್ಯಗಳ ಸಮರ್ಪಕ ನಿರ್ವಹಣೆಯಲ್ಲಿ ಹಿಂದೆ ಉಳಿದಿದೆ ಎಂದರೆ ತಪ್ಪಾಗಲಾರದು.

ಹೌದು, ನಗರದ ಮುಖ್ಯ ಸಮಸ್ಯೆಯಾದ ಚರಂಡಿಗಳ ನಿರ್ಮಾಣ ಹಾಗೂ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದೆ ಇರುವುದರಿಂದ ಹಲವಾರು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.


ವೇದವ್ಯಾಸ ಕಾಮತರು ಶಾಸಕರಾದ ಮೇಲೆ ಹಲವಾರು ಅನುದಾನಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸಿಕ್ಕಿದರೂ ಕೂಡ ಕಾಮಗಾರಿಗಳು ಸಮಯಕ್ಕೆ ಮುಕ್ತಾಯಗೊಳ್ಳದೆ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ನಗರದ ಹಲವು ಭಾಗಗಳಲ್ಲಿ ಒಳಚರಂಡಿ ದುರಸ್ತಿಗಾಗಿ ರಸ್ತೆಯನ್ನು ಅಗೆದು ಹಾಗೆಯೆ ಬಿಡಲಾಗಿದೆ. ಜ್ಯೋತಿ ಬಲ್ಮಠದ ಸುತ್ತಾ ಈ ರೀತಿಯ ಸಮಸ್ಯೆಗಳನ್ನು ಕಾಣಬಹುದು.

ಅದೇ ರೀತಿ ಹಲವು ಕಡೆ ಫುಟ್ ಪಾತ್ ಚರಂಡಿ ಸ್ಲ್ಯಾಬ್‌ಗಳು ಕಳಚಿ ಹೋಗಿದ್ದರೂ ಇನ್ನೂ ರಿಪೇರಿ ನಡೆದಿಲ್ಲ. ಕಲೆಕ್ಟರ್‌ಸ್ ಗೇಟ್ ಹಾಗೂ ಬಲ್ಲಾಳ್ ಭಾಗ್‌ನ ಮಣ್ಣಗುಡ್ಡೆ ರಸ್ತೆಯಲ್ಲಿ ಈ ಸಮಸ್ಯೆಯನ್ನು ಕಾಣಬಹುದು. ಅದೇ ರೀತಿ ನಗರದ ಮುಖ್ಯ ಭಾಗದ ಹಲವಾರು ರಸ್ತೆಗಳ ರಿಪೇರಿ ಕೂಡ ಸಮರ್ಪಕವಾಗಿ ಮಾಡಲಿಲ್ಲ..

ಮಂಗಳೂರು ಮಹಾನಗರ ಪಾಲಿಕೆ ಸಮೀಪದಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಇ-ಟಾಯ್ಲೆಟ್ ಸ್ಥಾಪಿಸಲಾಗಿತ್ತು ಆದರೆ ಇದೀಗ ಸಮರ್ಪಕ ನಿರ್ವಹಣೆ ಇರದೆ ಮೂಲೆಗೆ ಸೇರಿಬಿಟ್ಟಿದೆ. ಇದರ ಬಗ್ಗೆಯೂ ಮಾರ್ವಲೆಸ್ ಮಂಗಳೂರು, ಗ್ರೀನ್ ಮಂಗಳೂರು ಅಭಿಯಾನಗಳನ್ನು ಆರಂಭಿಸಿದ ಮಾನನೀಯ ಶಾಸಕರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು