11:32 PM Wednesday13 - May 2026
ಬ್ರೇಕಿಂಗ್ ನ್ಯೂಸ್
ತರೀಕೆರೆ | ರೆವೆನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ: ರೈತನಿಂದ 30 ಸಾವಿರ ಲಂಚ… ಸ್ಯಾಂಡಲ್‌ವುಡ್‌ಗೆ ಬಿಗ್ ಶಾಕ್: ಹೃದಯಘಾತಕ್ಕೆ ನಟ ದಿಲೀಪ್ ರಾಜ್ ಬಲಿ ಪ್ರಧಾನಿ ಮೋದಿ ಕರೆ ಬೆನ್ನಲ್ಲೆ, ಅಡುಗೆ ಎಣ್ಣೆ ದರದಲ್ಲಿ ಭಾರಿ ಇಳಿಕೆ: ಅಕ್ಕಿ… ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್: ಬೈಕ್ ಸವಾರರ ನಿರ್ಲಕ್ಷ್ಯದ ಸವಾರಿ; ಅಪಾಯದಿಂದ ಪಾರು. ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 ಮೆಟ್ರೋ ಕೋಚ್ ಗಳ ಖರೀದಿಗೆ ಐಸಿಎಫ್… ಚಿಕ್ಕಮಗಳೂರು | ಬ್ರೇಕ್ ಫೇಲ್: ಬಸ್ ನಿಲ್ದಾಣದ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಸರಕಾರಿ… ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ: ಕಾಂಗ್ರೆಸ್​​ನ ರಾಜೇಗೌಡರಿಗೆ ಮತ್ತೆ ದಕ್ಕಿದ ಶಾಸಕ… ದೇಶದ ಜನತೆಗೆ ಮೋದಿ ಮಿತವ್ಯಯದ ಕರೆ: ವಾಗ್ದಾಳಿ ನಡೆಸಿದ ರಾಹುಲ್‌ಗೆ ಬಿಜೆಪಿ ತಿರುಗೇಟು ಶೃಂಗೇರಿ ಕ್ಷೇತ್ರ ಮರು ಎಣಿಕೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ: ಮತ್ತೆ ರಾಜೇಗೌಡ… ಪತಿಯೊಂದಿಗೆ ಜಗಳವಾಡಿ 8ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ: ಸಾಮಾಜಿಕ ಜಾಲತಾಣಗಳಲ್ಲಿ ದೃಶ್ಯ…

ಇತ್ತೀಚಿನ ಸುದ್ದಿ

ರಾಸಾಯನಿಕ ಯುಕ್ತ ಸೌಂದರ್ಯ ವರ್ಧಕಗಳಿಂದ ದೂರವಿರಿ : ಡಾ. ರಾಜೇಶ್ ಆಳ್ವ

21/09/2022, 12:47

ಮಂಗಳೂರು(reporterkarnataka.com) : ಇಂದಿನ ಮಹಿಳೆಯರಲ್ಲಿ ಅತಿ ಹೆಚ್ಚು ಅಸ್ವಸ್ಥತೆಗಳಿಗೆ ಮೂಲಕ ಕಾರಣ ಪೋಷಣೆಗಳ ಮಾಹಿತಿ ಕೊರತೆ ಮತ್ತು ರಾಸಾಯನಿಕ ಯುಕ್ತ ಸೌಂದರ್ಯ ವರ್ಧಕಗಳ ಬಳಕೆಯಾಗಿದೆ. ಆದುದರಿಂದ ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳ ಬಳಕೆ ಮತ್ತು ಶರೀರಕ್ಕೆ ಬೇಕಾದ ಪೋಷಕಾಂಶಗಳ ಬಗ್ಗೆ  ಅರಿತುಕೊಳ್ಳುವಲ್ಲಿ ಮತ್ತು ಮಾಹಿತಿ ನೀಡುವಲ್ಲಿ ಬ್ಯೂಟಿ ಪಾರ್ಲರ್ ಗಳು ಕಾರ್ಯಪ್ರವೃತ್ತರಾಗುವುದು ಉಚಿತ ಎಂದು ಮಾರ್ಕ್ ಆಟ್ ಡೈರೆಕ್ಟ್ ನಿರ್ದೇಶಕ ಡಾ. ರಾಜೇಶ್ ಆಳ್ವ ಅಭಿಪ್ರಾಯಪಟ್ಟರು. 

ಅವರು ಕರ್ನಾಟಕ ಐಕ್ಯ ಪಾರ್ಲರ್ ಅಸೋಸಿಯೇಷನ್ ನೇತೃತ್ವದಲ್ಲಿ ಮತ್ತು ನೆಟ್ಸರ್ಫ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಉಚಿತ ಮೇಕಪ್ ನೋಡಿ ಕಲಿ ತರಬೇತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆಟ್ಸರ್ಫ್ ಪುಣೆ ಸಂಸ್ಥೆಯ ತರಬೇತುದಾರರಾದ ಬಾಲಚಂದ್ರ ಕಿರಣ್ ಲಾತ್ಕಾರ್ ನೆರವೇರಿಸಿದರು. ಕರ್ನಾಟಕ ಐಕ್ಯ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಪೌಲಿನ್ ಕ್ರಾಸ್ತಾ  ಅವರು ಅಧ್ಯಕ್ಷತೆ ವಹಿಸಿದರು.

ನಂತರ ನಡೆದ ತರಬೇತಿ ಶಿಬಿರದಲ್ಲಿ ಖ್ಯಾತ ಸೆಲೆಬ್ರಿಟಿ ಆರ್ಟಿಸ್ಟ್ ಪಂಕಜ ಬೆಂಗಳೂರು ಮೇಕಪ್ ನೋಡಿ ಕಲಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅದೇ ರೀತಿ ಶಾರದಾ ಜಲ್ಲಿ ಮತ್ತು ನೈಲ್ ಆರ್ಟ್ ಇವುಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಗೀತಾ ದಿನೇಶ್, ವನಿತಾ ರಾವ್, ಸೌಮ್ಯ ಶ್ರೀ, ಲೊತಿಸಿಲ ದಂತಿಸ್,  ಮುಂತಾದವರು ನಡೆಸಿಕೊಟ್ಟರು. ನೆಟ್ಸರ್ಫ್ ಸೌತ್ ಇಂಡಿಯಾ ಅಸ್ಮಿತಾ ಕೋ ಆರ್ಡಿನೇಟರ್ ರಮೊಲಅವರು ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಪರಿಹಾರ ಈ ಬಗ್ಗೆ ಮಾಹಿತಿ ನೀಡಿದರು. ಲತಾ ಹರೀಶ್ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿ, ಪ್ರಮೀಳಾ ಪ್ರಸಾದ್ ಇವರು ಸ್ವಾಗತಿಸಿ. ಮಂಜುಳಾ ನಾಯಕ್ ಧನ್ಯವಾದವಿತ್ತರು.

ಇತ್ತೀಚಿನ ಸುದ್ದಿ

ಜಾಹೀರಾತು