1:03 AM Friday12 - December 2025
ಬ್ರೇಕಿಂಗ್ ನ್ಯೂಸ್
ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ ಆರೆಸ್ಸೆಸ್ ಅಂದ್ರೆ ಉರಿಯುವ ಕಾಂಗ್ರೆಸ್ ನಾಯಕರಿಗೆ ಅವರ ಸರ್ಕಾರದಿಂದಲೇ ಉತ್ತರ: ಕೇಂದ್ರ ಸಚಿವ… ಮೈಸೂರು-ಕುಶಾಲನಗರ ಹೆದ್ದಾರಿ ಪ್ಯಾಕೇಜ್ 2 ಕಾಮಗಾರಿ ಆರಂಭ: 4126 ಕೋಟಿ ವೆಚ್ಚದಲ್ಲಿ ಅಗಲೀಕರಣ ಭೂ ಪರಿವರ್ತನೆ ನಿಯಮಗಳ ಸರಳೀಕರಣ: ವಿಧಾನ ಪರಿಷತ್ ನಲ್ಲಿ ಸಚಿವ ಕೃಷ್ಣ ಬೈರೇಗೌಡ

ಇತ್ತೀಚಿನ ಸುದ್ದಿ

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಸ್ಸಿ ವಿಶುವಲ್ ಕಮ್ಯುನಿಕೇಶನ್ ಶಿಕ್ಷಣ

18/09/2022, 23:34

ಮಂಗಳೂರು(reporterkarnataka.com):ನಗರದ ಸಂತ ಅಲೋಶಿಯಸ್ ಕಾಲೇಜು ಪತ್ರಿಕೋದ್ಯಮ ವಿಭಾಗದಲ್ಲಿ ಹೊಸತಾಗಿ  ಬಿಎಸ್ಸಿ ವಿಶುವಲ್ ಕಮ್ಯುನಿಕೇಶನ್ ಎಂಬ ಕೋರ್ಸ್ ನ್ನು ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ  ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದ  ಉದ್ಘಾಟನೆಯನ್ನು  ಕಾಲೇಜಿನ ಎಲ್ ಎಫ್ ರಸ್ಕಿನ್ಹಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪೋಲರಾಯ್ಡ್ ಕ್ಯಾಮರಾದಿಂದ ಭಾವಚಿತ್ರ ತೆಗೆಯೋ ಮುಖಾಂತರ ಜರುಗಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ವಿಶುವಲ್ ಕಮ್ಯೂನಿಕೇಶನ್ ನಲ್ಲಿ ಬಿ.ಎಸ್ಸಿ. ಪದವಿಯನ್ನು ಪರಿಚಯಿಸಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ಅತಿಥಿ, ರೀಲ್ ಟ್ರೈಬ್ ಡಿಜಿಟಲ್ ಸಂಸ್ಥೆಯ ಸ್ಥಾಪಕ  ಹೃಶಿಕೇಶ್ ಅನಿಲ್ ಕುಮಾರ್ ರವರು ವಿಶುವಲ್ ಕಮ್ಯೂನಿಕೇಶನ್ ವಿಭಾಗದ ಅಧಿಕೃತ ಯೂಟ್ಯೂಬ್ ವಾಹಿನಿ ಮತ್ತು ‘ ಕ್ಯಾಂಪಸ್ ಬಝ್’ ಎಂಬ ವಿದ್ಯಾರ್ಥಿ ಬ್ಲಾಗ್ ಗೆ ಚಾಲನೆ ನೀಡಿದರು.

ಅವರು ಮಾತನಾಡಿ ಮೊದಲ ವರ್ಷದ ಪದವಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ನಗರದ ಮೊಟ್ಟ ಮೊದಲ ವಿಶುವಲ್ ಕಮ್ಯೂನಿಕೇಶನ್ ಬ್ಯಾಚ್ ನ ಭಾಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಬಹುದು ಎಂದರು.

ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ತಯಾರಿಸಲಾದ ಮರಳು ಕಲೆಯ ಚಿತ್ರವೊಂದನ್ನೂ ಅನಾವರಣಗೊಳಿಸಲಾಯಿತು. 

ಈ ಕೋರ್ಸ್ ನ ಉದ್ದೇಶ ಕಲೆ, ಸೃಜನಶೀಲತೆ, ಮತ್ತು ತಂತ್ರಜ್ಞಾನದ ಸಂಗಮದೊಂದಿಗೆ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ದಾರಿದೀಪವಾಗುವುದಲ್ಲದೆ, ಆಧುನಿಕ ಮಾಧ್ಯಮ ಜಗತ್ತಿಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರಿಸುವುದಾಗಿದೆ. 

ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ವಂ. ಫಾ ಮೆಲ್ವಿನ್ ಜೆ ಪಿಂಟೋ ಎಸ್ ಜೆ, ಪ್ರಾಂಶುಪಾಲರಾದ ವಂ. ಡಾ ಪ್ರವೀಣ್ ಮಾರ್ಟಿಸ್, ಎಸ್ ಜೆ, ಕುಲಪತಿ ಡಾ ಆಲ್ವಿನ್ ಡಿಸಾ, ವಿಭಾಗ ಮುಖ್ಯಸ್ಥರಾದ ಡಾ ಶ್ವೇತಾ ಮಂಗಳತ್ ಮತ್ತು ಕೋರ್ಸ್ ಸಂಯೋಜಕರಾದ ಅಬ್ದುಲ್ ರಶೀದ್, ಕ್ಸೇವಿಯರ್ ವಿಜ್ಞಾನ ಬ್ಲಾಕ್ ನ ನಿರ್ದೇಶಕ ಡಾ ನಾರಾಯಣ ಭಟ್, AIMIT ಬೀರಿಯ ನಿರ್ದೇಶಕರಾದ ವಂ. ಡಾ ಮೆಲ್ವಿನ್ ಪಿಂಟೋ ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು