7:35 AM Wednesday1 - April 2026
ಬ್ರೇಕಿಂಗ್ ನ್ಯೂಸ್
ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ ಯತ್ನಾಳ್‌ ಬಂದರೆ ಸ್ವಾಗತ: ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿದ ಮಾಜಿ ಸಿಎಂ ಯಡಿಯೂರಪ್ಪ… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ಬಾಗಲಕೋಟೆ ಉಪ ಚುನಾವಣೆ: ಆಲಮಟ್ಟಿ ಬಳಿ ರಾತೋರಾತ್ರಿ ಸಿಎಂ ಭೇಟಿಯಾದ ಮುಸ್ಲಿಂ​ ಮುಖಂಡರು;… ಉಪ ಚುನಾವಣೆ | ಸಿಎಂ ಸಭೆಯಲ್ಲಿ ಭಾಗಿಯಾಗಿದ್ದ ಸರಕಾರಿ ಶಿಕ್ಷಕ ಕಬ್ಬಿನ ಗದ್ದೆಯೊಳಗೆ… ರಂಗೇರಿದ ಉಪ ಚುನಾವಣಾ ಕಣ: ಅಖಾಡಕ್ಕಿಳಿದ ಸಿಎಂ ಸಿದ್ದರಾಮಯ್ಯ, ವಿಜಯೇಂದ್ರ; ಕೈ, ಕಮಲ… ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4…

ಇತ್ತೀಚಿನ ಸುದ್ದಿ

ಕಾಂತಾವರ: ಡಾ.ಶ್ರೀ ಶಿವರಾತ್ರೇಶ್ವರ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿ ಮಹೋತ್ಸವ

09/09/2022, 13:16

ಕಾಂತಾವರ(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾದ ವತಿಯಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರೂವಾರಿಯಾದ ಸೂತ್ತೂರು ಬ್ರಹ್ನಮಠದ ಲಿಂಗೈಕ್ಯ ಡಾ.ಶ್ರೀ ಶಿವರಾತ್ರೇಶ್ವರ ರಾಜೇಂದ್ರ ಮಹಾಸ್ವಾಮಿಗಳವರ 107ನೆಯ ಜಯಂತಿ ಮಹೋತ್ಸವ ಆಚರಿಸಲಾಯಿತು. 

ದಕ್ಷಿಣ ಕನ್ನಡ ಜಿಲ್ಲೆಯ “ಕದಳಿ ಮಹಿಳಾ ವೇದಿಕೆ”ಯ ಅಧ್ಯಕ್ಷರಾದ ಸುರೇಖಾ ಯಾಳವಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 12ನೆಯ ಶತಮಾನದ ಬಸವಾದಿ ಶರಣರ “ಅನುಭವ ಮಂಟಪ”ವು ವರ್ಗ ಭೇದ, ವರ್ಣಭೇದಗಳನ್ನು ತೊಡೆದು ಸಮಾನತೆಯ ಬೀಜ ಬಿತ್ತಿತ್ತು. ಪ್ರಸ್ತುತ ಸಮಾಜದ ಸಂಘರ್ಷಗಳು ನಾಡಿನ ಸಂಸ್ಕೃತಿಯನ್ನು ಹಾಳುಗೆಡಹುತ್ತೀವೆ. ಸಮಾಜದ ಉನ್ನತಿಗೆ ಪೂರಕವಾದ ಬಸವ ತತ್ವಗಳನ್ನು ಪ್ರಚಾರಗೊಳಿಸಿ ಸಮಾಜದಲ್ಲಿ ಸಹಬಾಳ್ವೆಯ ಜೀವನಕ್ಕೆ ಸಂಘಗಳು ಕಾರ್ಯನಿರ್ವಹಿಸಬೇಕೆಂದರು. 

ಮಾಸ್ಟರ್ ಆಫ್ ಪಬ್ಲಿಕ್ ಹೆಲ್ತನ ಇಸ್ಮತ್ ಜಹಾನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಎಲ್ಲ ಧರ್ಮ ಮಂತ್ರ ಒಂದೇ ಸಮಾನತೆ. ಜನರ ಜೀವನಶೈಲಿ ನೈಸರ್ಗಿಕವಾಗಿಲ್ಲದ ಕಾರಣ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ನಮ್ಮ  ಸ್ವಾಸ್ಥ್ಯವನ್ನು ಕಾಪಾಡಿಕೂಳ್ಳುವುರೊಂದಿಗೆ ಸಮಾಜದ ಹಿತ ಕಾಪಾಡಬೇಕೆಂದರು. 


ಉಪನ್ಯಾಸ ನೀಡಲು ಬಂದಿದ್ದ ಸುಜೀರು ಶಾಲೆಯ ಮುಖ್ಯ ಶಿಕ್ಷಕಿ ಸಂಸ್ಥಾಪಕರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸುತ್ತಾ ಈಗಿನ ಯುವ ಪೀಳಿಗೆ ಶರಣ ತತ್ವಗಳನ್ನು ಅನುಸರಿಸಬೇಕು. ಅವಿಭಕ್ತ ಕೂಡು ಕುಟುಂಬದಲ್ಲಿ ಭದ್ರತೆಯಿಂದ ಸಮಾಜಮುಖಿ ಜೀವನ ನಡೆಸಬೇಕಂದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ವಚನ ಚಿಂತನೆ, ಗಾದೆಮಾತು, ಒಗಟು, ಒಡಪು, ರಸಪ್ರಸ್ನೆ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು ಸಾಂಗವಾಗಿ ನೆರವೇರಿದವು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮವು ಮಂಗಲಗೊಂಡು ಸಂಪನ್ನಗೊಂಡಿತ್ತು,

ಇತ್ತೀಚಿನ ಸುದ್ದಿ

ಜಾಹೀರಾತು