9:07 AM Sunday5 - May 2024
ಬ್ರೇಕಿಂಗ್ ನ್ಯೂಸ್
ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ…

ಇತ್ತೀಚಿನ ಸುದ್ದಿ

ಯಜಮಾನನ ಆಕಸ್ಮಿಕ ಸಾವಿನಿಂದ ಆಧಾರಸ್ತಂಭ ಕಳೆದುಕೊಂಡ ಈ ಬಡ ಕುಟುಂಬಕ್ಕೆ ಸಹಾಯ ಮಾಡುವಿರಾ?

03/09/2022, 16:25

ಮಂಗಳೂರು(reporterkarnataka.com)

ಬದುಕು ಒಂದು ಜಟಕಾ ಬಂಡಿ ನಿಲ್ಲದಂತೆ ಸಾಗಿದೆ…ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ ಎಂಬ ಹಾಡಿದೆ. ಆದರೆ ಈ ವಿಧಿಯಾಟ ಕೆಲವೊಮ್ಮೆ

ಕ್ರೂರವಾಗಿದ್ದರೆ ಬದುಕು ಸಾಗಿಸುವುದೇ ಕಷ್ಟ ಎಂಬ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೊಂದು ಉದಾಹರಣೆ ನಗರದ ದೇರೆಬೈಲ್ ಕೊಂಚಾಡಿ ಸಮೀಪದ ಬೋರುಗುಡ್ಡೆ ನಿವಾಸಿಯಾದ ಸುಜಾತಾ ಅವರ ಕುಟುಂಬದಲ್ಲಿ ಇತ್ತೀಚೆಗೆ ಘಟಿಸಿದ ಆಕಸ್ಮಿಕ ಘಟನೆ.

ರಿಪೋರ್ಟರ್ ಕರ್ನಾಟಕ ಮೀಡಿಯಾ ನೆಟ್ ವರ್ಕ್(reporterkarnataka.com)ನ ಸಹ ಸಂಸ್ಥೆಯಾದ ಕಿನ್ನರಿ ಕಿಂಡರ್‌ಗಾರ್ಟನ್ ನಲ್ಲಿ ಶಿಕ್ಷಕಿಯ ಸಹಾಯಕಿಯಾಗಿ ದುಡಿಯುತ್ತಿದ್ದ ಸುಜಾತಾ ಅವರ ಪತಿ, 44ರ ಹರೆಯದ ತುಕರಾಮ ಅವರು ಅಧಿಕ ರಕ್ತದೊತ್ತಡದಿಂದ ಬ್ರೈನ್ ಎಮರೇಜ್ ಅಗಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ. ಟೈಲರಿಂಗ್ ವೃತ್ತಿ ಮಾಡುತ್ತಿದ್ದ ತುಕರಾಮ ಅವರಿಗೆ ಬಿಪಿ ಕಾಯಿಲೆ ಬಿಟ್ಟರೆ ಆರೋಗ್ಯವಾಗಿಯೇ ಇದ್ದರು. ಆಗಸ್ಟ್ 20ರಂದು ರಾತ್ರಿವರೆಗೂ ಆರೋಗ್ಯದಿಂದಲೇ ಇದ್ದ ಅವರು ಆಗಸ್ಟ್ 21ರಂದು ಬೆಳಗ್ಗೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾದರು. ಇದರಿಂದ ಮೆದುಳಿನಲ್ಲಿ ಅಧಿಕ ಪ್ರಮಾಣದಲ್ಲಿ ರಕ್ತ ಸ್ರಾವ ಉಂಟಾಗಿತ್ತು. ತಕ್ಷಣ ಅವರನ್ನು ಸಮೀಪದ ಎ.ಜೆ. ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 21ರಂದು ಬೆಳಗ್ಗೆ ಕೊನೆಯುಸಿರೆಳೆದರು. 
ತುಕರಾಮ ಅವರ ಕುಟುಂಬ ಇಂದು ಅನಾಥವಾಗಿದೆ. ಪತ್ನಿ ಸುಜಾತಾ ಮತ್ತು 10ನೇ ತರಗತಿಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ವಯಸ್ಸಿನ ಪುತ್ರ ಇದ್ದಾನೆ. ಇರಲು ಸ್ವಂತ ಮನೆಯಿಲ್ಲ, ಸುಜಾತಾ ಅವರಿಗೆ ಅಣ್ಣ ತಮ್ಮಂದಿರಿಲ್ಲ. ಅನಾರೋಗ್ಯಪೀಡಿತ ತಾಯಿ ಇದ್ದಾರೆ. ಬಡ ಕುಟುಂಬದ ಇವರಿಗೆ ಜೀವನ ಸಾಗಿಸುವುದು, ಮಗನಿಗೆ ಶಿಕ್ಷಣ ಕೊಡುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಿಪೋರ್ಟರ್ ಕರ್ನಾಟಕ ಸಾರ್ವಜನಿಕರ ನೆರವು ಯಾಚಿಸುತ್ತಿದೆ. ಆ ಮೂಲಕ ಸುಜಾತಾ ಅವರ ಕುಟುಂಬಕ್ಕೆ ನೆರವು ನೀಡುವ ಗುರಿಯನ್ನು ಹೊಂದಿದೆ. ಹಾಗೆ ಈ ಬಡ ಕುಟುಂಬವು ಕೊಡುಗೈ ದಾನಿಗಳು ಹಾಗೂ ಸಹೃದಯಿಗಳ ನೆರವಿನ ನಿರೀಕ್ಷೆಯಲ್ಲಿದೆ.
ನೆರವು ನೀಡುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಹಣ ಜಮಾಯಿಸಿ ನೊಂದ ಈ ಕುಟುಂಬದೊಂದಿಗೆ ಕೈಜೋಡಿಸುವ ಅಗತ್ಯವಿದೆ.

KARNATAKA BANK, A/C 5062000100037101,
Account type: Current account
IFSC : KARB0000506, BRANCH : KADRI, MANGALURU

ಇತ್ತೀಚಿನ ಸುದ್ದಿ

ಜಾಹೀರಾತು