4:02 PM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಮಂಗಳೂರಿಗೆ ಬಂದ ಪ್ರಧಾನಿ ಏರ್ ಫೋರ್ಟ್ ಗೆ ಕೋಟಿ- ಚೆನ್ನಯ ನಾಮಕರಣ ಮಾಡಲಿ: ಖಾದರ್

01/09/2022, 10:49

ಮಂಗಳೂರು(reporterkarnataka.com): ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವುದು ತುಂಬಾ ಸಂತೋಷದ ವಿಷಯ. ಪ್ರಧಾನಿ ಆಗಮನ ಹೆಮ್ಮೆಯ ಸಂಗತಿ. ಆದರೆ ಅದಕ್ಕಾಗಿ ಸರಕಾರಿ ಯಂತ್ರ ದುರುಪಯೋಗಪಡಿಸುವುದು ಸರಿಯಲ್ಲ ಎಂದು ಪ್ರತಿಪಕ್ಷದ ನಾಯಕ ಯು.ಟಿ. ಖಾದರ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿ ಗ್ರಾಮದಿಂದ 250 ಮಂದಿಯನ್ನು ಕರೆತರುವಂತೆ ಪಿಡಿಓಗಳಿಗೆ ಸೂಚಿಸಲಾಗಿದೆ. ಎರಡು ಜಿಲ್ಲೆಯ ಗ್ರಾಪಂಗಳಿಂದ ಇಷ್ಟೊಂದು ಜನ ಬಂದರೆ ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ ಎಂದು ಪ್ರಶ್ನಿಸಿದರು.

ಇವರಿಗೆ ಕಾರ್ಯಕ್ರಮ ಮಾಡಲು ಮೈದಾನಕ್ಕಿಂತ ದೊಡ್ಡ ಜಾಗಬೇಕು ಅಂತಾ ಕಾಣಿಸುತ್ತಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವರಿಗೂ ನೋಟಿಸ್ ಹೋಗಿದೆ.

ಮೋದಿ ಮಂಗಳೂರಿಗೆ ಬರುವುದು ಸಂತೋಷ. ಅದನ್ನು ಸ್ವಾಗತಿಸುತ್ತೇವೆ. ದೇಶದ ಪ್ರಧಾನ ಮಂತ್ರಿ ಜಿಲ್ಲೆಗೆ ಬಂದಾಗ ಜಿಲ್ಲೆಗೆ ಸಿಕ್ಕ ಕೊಡುಗೆ ಬಗ್ಗೆ ಜನರು ನಿರೀಕ್ಷಿತರಾಗಿದ್ದಾರೆ. ಬಿಜೆಪಿ ಪ್ರತಿನಿಧಿಗಳು ಸಾವಿರಾರು ಕೋಟಿ ಯೋಜನೆಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾವಿರಾರು ಕೋಟಿ ಯೋಜನೆ ಅರ್ಪಿಸುವುದು ಯಾವುದು. ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಪಾಲು ಎಷ್ಟಿದೆ? ಎಂಬುದು ಗೊತ್ತಾಗಬೇಕು ಎಂದರು.

ಎನ್ಎಂಪಿಟಿ ಹಿಂದೆ ಸರ್ಕಾರದಲ್ಲಿ ಇತ್ತು. ಇದನ್ನು ಈಗ ಕೆಲವು ಉದ್ದಿಮೆದಾರರಿಗೆ ನೀಡಿದ್ದಾರೆ. ಜಿಂದಾಲ್ ಪ್ಯಾಕ್ಟರಿಯ ಜೆ ಎಸ್ ಡಬ್ಲ್ಯು, ಬೇರೆ ಬೇರೆ ಖಾಸಗಿ ಕಂಪೆನಿಯ ದೊಡ್ಡ ದೊಡ್ಡ ಟ್ಯಾಂಕ್, ಪಾಮೋಲಿವ್ ಕಂಪೆನಿಯ ಯೋಜನೆಗೆ ಬರುತ್ತಿದ್ದಾರೆ. ಈ ಯೋಜನೆಗೆ ಸರ್ಕಾರ ದುಡ್ಡು ಹಾಕಿದೆಯೇ? ಎಂಬುದನ್ನು ತಿಳಿಸಬೇಕು. ಯಾರದೋ ಕೆಲಸ ಇವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಂಗಳೂರು ಏರ್‌ಪೋರ್ಟ್‌ಗೆ ಕೋಟಿ ಚೆನ್ನಯ್ಯ ಏರ್ ಪೋರ್ಟ್ ಎಂದು ಘೋಷಿಸಲಿ. ಇದು ಸರ್ಕಾರದ ದುಡ್ಡಿನಲ್ಲಿ ನಡೆಯುವ ಕಾರ್ಯಕ್ರಮ. ಎಲ್ಲರನ್ನು ಕರೆದರೂ ಶಾಸಕನಾಗಿರುವ ನನ್ನನ್ನು ಕರೆದಿಲ್ಲ. ಆಹ್ವಾನ ಬಂದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆಲೋಚಿಸುತ್ತೇನೆ ಎಂದರು.

ನಾನು ಕಾರ್ಯಕ್ರಮದಲ್ಲಿ ಇದ್ದರೆ ನಮ್ಮನ್ನು ಟೀಕಿಸಲು ಅವರಿಗೆ ಮುಜುಗರ ಆಗುವುದನ್ನು ತಪ್ಪಿಸಲು ಬಹುಷ ನಮ್ಮನ್ನು ಹೊರಗಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು