1:12 AM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಬುಟ್ಟಿ ಮೀನು ಬದುಕು ಕಟ್ಟಿಕೊಟ್ಟಿತು!: ಇಂದು ಇಬ್ಬರು ಆಳುಗಳೊಂದಿಗೆ ಭರ್ಜರಿ ವ್ಯಾಪಾರ!!

24/06/2021, 21:10

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ಸುಮಾರು 200 ರೂಪಾಯಿ ಬಂಡವಾಳದಿಂದ ಆರಂಭಿಸಿದ ಆ ಮೀನಿನ ವ್ಯಾಪಾರ ಇಂದು ಸಣ್ಣ ಫಿಶ್ ಶಾಪ್ ಇಡುವವರೆಗೆ ಸಾಗಿದೆ. ಬುಟ್ಟಿಯನ್ನು ತಲೆಯಲ್ಲಿಟ್ಟು ಮೀನು ಮಾರಾಟ ಮಾಡುತ್ತಿದ್ದ. ಇಂದು ಟೆಂಪೋದಲ್ಲಿ ನಡೆಯುತ್ತಿದೆ. ಛಲವೊಂದಿದ್ದರೆ ಬದುಕುವ ಕಲೆ ತನ್ನಿಂದ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಮೀನಿನಂತಹ ತಾಜಾ ನಿದರ್ಶನ.

ಇದೇನು ಪರವೂರಿನ ಕತೆಯಲ್ಲ. ನಮ್ಮ ಕಡಲನಗರಿಯ ಮಡಿಲಿನಲ್ಲಿರುವ ಮೀನು ವ್ಯಾಪಾರಿಯ ರೋಚಕ ಕಥೆ. ಝಯಿನುದ್ದೀನ್ ಎಂ.ಬಿ. ಅವರ ಜೀವನ ಕಥೆ.

Click Here To Visit Our FB Page

ಝಯಿನುದ್ದೀನ್ ಅವರು ಕಲಿತದ್ದು ಬರೇ ನಾಲ್ಕನೆ ಕ್ಲಾಸ್. ನಂತರ ಜೀವನ ಪಯಣ ಕೆಲಸದತ್ತ ಸಾಗಿತು. ನಾಲ್ಕನೇ ತರಗತಿಯ ಹುಡ್ಗ ಏನು ಕೆಲಸ ಮಾಡಿಯಾನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಎಲ್ಲ ಮಕ್ಕಳು ಆಟವಾಡುತ್ತಾ ಶಾಲೆಗೆ ಹೋಗುತ್ತಿದ್ದರೆ ಬಾಲಕ ಝಯಿನುದ್ದೀನ್ ಮನೆ ಮನೆಗೆ ಹಾಲು ವಿತರಿಸುತ್ತಿದ್ದರು. ಬಾಲ್ಯದ ದಿನಗಳಲ್ಲಿ ಅವರ ಮನೆಯಲ್ಲಿ 15 ದನಗಳಿದ್ದವು. ಹಾಲು ಮಾರಿ ಜೀವನ ನಡೆಸಬೇಕಿತ್ತು. ದಿನಕ್ಕೆ 40 ಲೀಟರ್ ಹಾಲು ಬರುತ್ತಿತ್ತು. ಹಾಗೆ ಸ್ವಲ್ಪ ದೊಡ್ಡವನಾಗುತ್ತಿದ್ದಂತೆ ಝಯಿನುದ್ದೀನ್ ವೆಲ್ಡಿಂಗ್ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದ ಮೇಸ್ತ್ರಿಯಾಗಿ ಪರಿವರ್ತನೆಗೊಂಡರು. ಆದರೆ ಮೇಸ್ತ್ರಿ ಕೆಲಸ ಅವರ ಕೈಹಿಡಿಯಲಿಲ್ಲ. ಈ ನಡುವೆ ದುಬೈಯಿಂದ ಅವಕಾಶಗಳು ಬಂದವು. ಆದರೆ ಊರು ಬಿಟ್ಟು ಹೊರದೇಶಕ್ಕೆ ಹೋಗಲು ಇಚ್ಚಿಸದ ಅವರು ಊರಲ್ಲೇ ಇದ್ದುಕೊಂಡು ಸಾಧಿಸಬೇಕೆಂದು ತೀರ್ಮಾನಿಸಿದರು. ಇವೆಲ್ಲದರ ಫಲಶ್ರುತಿ ಎನ್ನುವಂತೆ ಮತ್ತೆ ವೃತ್ತಿ ಬದಲಾಯಿಸಿದ ಝಯಿನುದ್ದೀನ್ ಮೀನು ಮಾರುವ ವೃತ್ತಿಯನ್ನು ಆರಿಸಿಕೊಂಡರು.

ಆರಂಭದಲ್ಲಿ ದಿನಕ್ಕೆ 200 ರೂ. ಬಂಡವಾಳ ಹಾಕಿ ಬುಟ್ಟಿಯನ್ನು ತಲೆಯಲ್ಲಿಟ್ಟುಕೊಂಡು ಮನೆ ಮನೆ ಸುತ್ತಿ ಮೀನು ಮಾರುತ್ತಿದ್ದರು. ಇಡೀ ದಿನ ಮೀನು ಮಾರಿದರೆ ಬರೇ 30 ರೂ. ಲಾಭ ಬರುತ್ತಿತ್ತು.

ಮೊಯಿದಿನಬ್ಬ- ಖತೀಜಾ ದಂಪತಿಯ ಪುತ್ರನಾದ ಝಯಿನುದ್ದೀನ್ ಅವರಿಗೆ ಒಟ್ಟು 10 ಮಂದಿ ಸಹೋದರ ಹಾಗೂ ಸಹೋದರಿಯರಿದ್ದರು.


ಝಯಿನುದ್ದೀನ್ ಸುಮಾರು 10 ವರ್ಷಗಳ ಕಾಲ ಬುಟ್ಟಿಯನ್ನು ತಲೆಯಲ್ಲಿಟ್ಟು ಬೀದಿ ಬೀದಿ ಅಲೆದಾಡಿ ಮೀನು ಮಾರುತ್ತಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲ ಎಂಬಂತೆ ವ್ಯಾಪಾರದಲ್ಲಿ ವೃದ್ಧಿ ಕಾಣಲಾರಂಭಿಸಿತು. ಸಣ್ಣ ಟೆಂಪೊ ತೆಗೆದುಕೊಂಡು ಅದರಲ್ಲಿ ವ್ಯಾಪಾರ ಮಾಡಲು ಶುರು ಮಾಡಿದರು. ಜತೆಗೆ ಸಣ್ಣ ಮೀನಿನ ಅಂಗಡಿಯನ್ನೂ ನಗರದ ಬಜಾಲ್ ಪಕಲಡ್ಕ ದಲ್ಲಿ ತೆರೆದರು. ಈಗ ಇಬ್ಬರನ್ನು ಕೆಲಸಕ್ಕಿಟ್ಟುಕೊಂಡು ಝಯಿನುದ್ದೀನ್ ಮೀನಿನ ವ್ಯಾಪಾರ ಮಾಡುತ್ತಾರೆ. ಹೆಂಡತಿ ಅತಿಕಾ ಮತ್ತು ಐವರು ಪುತ್ರಿಯರು ಹಾಗೂ ಇಬ್ಬರು ಪುತ್ರರೊಂದಿಗೆ ತುಂಬು ಸಂಸಾರದ ಜೀವನ ನಡೆಸುತ್ತಿದ್ದಾರೆ.

ನಾನು ಶಿಕ್ಷಣದಿಂದ ವಂಚಿತನಾಗಿದ್ದೇನೆ. ನನ್ನಂತೆ ನನ್ನ ಮಕ್ಕಳು ಕಷ್ಟಪಡಬಾರದು. ನನ್ನ ಮಕ್ಕಳು ಎಷ್ಟು ಕಲಿಯಬೇಕು ಅಂತ ಇಷ್ಟಪಡುತ್ತಾರೋ ಅಷ್ಟು ಕಲಿಸಬೇಕೆಂಬ ಆಸೆ. ಒಳ್ಳೆಯ ಶಿಕ್ಷಣ ಜೋಡಿಸಬೇಕು.

-ಝಯಿನುದ್ದೀನ್ ಎಂ.ಬಿ. ಮೀನಿನ ವ್ಯಾಪಾರಿ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು