5:29 AM Sunday30 - November 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ನಟನೆ, ಗಾಯನ, ನೃತ್ಯದಲ್ಲಿ ಎತ್ತಿದ ಕೈ: ತುಳು ಕುವರಿ 11ರ ಹರೆಯದ ತೀರ್ಥ ಪೊಳಲಿ ಹುಲಿ ಕುಣಿತಕ್ಕೂ ಸೈ!

24/06/2021, 07:24

ಲತಾ ಎ. ಕಲ್ಲಡ್ಕ ಮಂಗಳೂರು

info.reporterkarnataka@gmail.com

ಆಕೆಗಿನ್ನೂ ಬರೇ 11ರ ಹರೆಯ. ಅರಳು ಹುರಿದಂತೆ ಮಾತನಾಡುವ ವಾಕ್ಚತುರ್ಯ. ನಟನೆ, ನೃತ್ಯ, ಗಾಯನ, ಛದ್ಮವೇಷ, ಏಕಪಾತ್ರ ಅಭಿನಯ, ಇಷ್ಟೇ ಅಲ್ಲದೆ ತುಳುನಾಡಿನ ಹೆಮ್ಮೆಯ ಹುಲಿ ಕಣಿತ… ಹೀಗೆ ಎಲ್ಲದರಲ್ಲೂ ಆಕೆ ಸೈ.


ಇವಳು ಬೇರೆ ಯಾರೂ ಅಲ್ಲ, ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಹೊಂದಿಕೊಂಡಿರುವ ಪೊಳಲಿಯ ಅಡ್ಡೂರು ಗ್ರಾಮದ ಪೊನ್ನೆಲದ ಪುತ್ರಿ ತೀರ್ಥ ಪೊಳಲಿ. 

ಈಕೆ ಪೊನ್ನೆಲದ ಕೃಷ್ಣ ಅಮೀನ್ ಹಾಗೂ ಪ್ರೇಮಾ ದಂಪತಿಯ ಮುದ್ದಿನ ಮಗಳು. ಗಂಜಿಮಠದ ರಾಜ್ ಅಕಾಡೆಮಿ ಸ್ಕೂಲ್ ನ 6ನೇ ತರಗತಿ ವಿದ್ಯಾರ್ಥಿನಿ.

‘ಪನೋಡ ಬೊಡ್ಚ’ ತುಳು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಈ ಪುಟ್ಟ ತಾರೆ, ತನ್ನ ಅಭಿನಯದ ಮೂಲಕ ತುಳುವರ ಮನ ಗೆದ್ದಿದ್ದಾಳೆ. ಸರಕಾರಿ ಪ್ರಾಥಮಿಕ ಶಾಲೆ ಕರಂಬಾರ್ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾಳೆ. ಯಕ್ಷಗಾನ, ನಾಟಕ, ರೂಪಕ, ಗೀತಗಾಯನ ಎಲ್ಲದರಲ್ಲೂ ತೀರ್ಥ ತನ್ನ ಕೈಚಳಕ ಪ್ರದರ್ಶಿಸುತ್ತಾಳೆ. ಕಾರ್ಯಕ್ರಮಗಳಲ್ಲಿ ಒಳ್ಳೆಯ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾಳೆ. ಹೆಸರಿನ ಮುಂದೆ ವಿಜೆ ಅಂತ ಹಾಕಿಸಿಕೊಳ್ಳಬೇಕೆಂಬ ಆಕೆಯ ಕನಸು ಕೂಡ ನನಸಾಗಿದೆ. ಖಾಸಗಿ ವಾಹಿನಿಯೊಂದರಲ್ಲಿ ‘ವೀಕೆಂಡ್ ವಿತ್ ಮಿ’ ಎಂಬ ಕಾರ್ಯಕ್ರಮವನ್ನು ಕೂಡ ನಡೆಸಿಕೊಡುತ್ತಿದ್ದಳು. ತುಳು ಸಭೆ – ಸಮಾರಂಭವನ್ನು ಚೆನ್ನಾಗಿ ನಿರೂಪಣೆ ಮಾಡುವ ಅದ್ಭುತ ಶಕ್ತಿ ಆಕೆಯಲ್ಲಿದೆ. ಮುಂಬೈಯಲ್ಲಿ ತೀರ್ಥಳ ಕಾರ್ಯಕ್ರಮಕ್ಕೆ ಅಪಾರ ಜನಮನ್ನಣೆ ದೊರೆತಿದೆ.

ಪ್ರತಿಭೆಗೆ ತಕ್ಕಂತೆ ನಾನಾ ಪ್ರಶಸ್ತಿಗಳು ತೀರ್ಥಳನ್ನು ಅರಸಿ ಬಂದಿವೆ.
ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ, ತುಳು ಕುವರಿ, ಸೌರಭ ರತ್ನ, ಕೊಂಡಾಟದ ಬಾಲೆ ಮುಂತಾದ ಪ್ರಶಸ್ತಿಗಳು ಬಂದಿವೆ. ಮಂಗಳೂರು ಆಕಾಶವಾಣಿ, ಉಡುಪಿಯ ಸ್ಪಂದನಾ ಟಿವಿ, ನಮ್ಮ ಕುಡ್ಲ ವಾಹಿನಿಯಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿದ್ದಾಳೆ. ಬಹುಮುಖ ಪ್ರತಿಭೆಯ ತೀರ್ಥಳಿಗೆ ಈ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಭವಿಷ್ಯದಲ್ಲಿ ಪೈಲಟ್ ಆಗುವ ಕನಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು