ಇತ್ತೀಚಿನ ಸುದ್ದಿ
ಸ್ವಾತಂತ್ರ್ಯ ಅಮೃತ ಮಹೋತ್ಸವ; ಆ. 10ರಂದು ನೆಹರೂ ಪ್ರತಿಮೆಯಿಂದ ಗಾಂಧಿ ಪುತ್ಥಳಿ ವರೆಗೆ ಪಕ್ಷಾತೀತ ಪಾದಯಾತ್ರೆ: ಮಾಜಿ ಶಾಸಕ ಲೋಬೊ
06/08/2022, 20:54

ಮಂಗಳೂರು(reporterkarnataka.com): ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಆ. 10ರಂದು ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷಾತೀತವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡ ಜೆ.ಆರ್.ಲೋಬೊ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಪಾಂಡೇಶ್ವರದಲ್ಲಿರುವ ಜವಹರಲಾಲ್ ನೆಹರೂ ಅವರ ಪ್ರತಿಮೆಗೆ ಬೆಳಿಗ್ಗೆ 9.30ಕ್ಕೆ ಹೂವಿನ ಹಾರ ಹಾಕುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಪಾದಯಾತ್ರೆಯು ಎ.ಬಿ.ಶೆಟ್ಟಿ ವೃತ್ತ, ಗಡಿಯಾರ ಗೋಪುರ, ಕೊಡಿಯಾಲ್ ಬೈಲ್, ಪಿ.ವಿ.ಎಸ್ ವೃತ್ತ, ಬೆಸೆಂಟ್ ಕಾಲೇಜು ಮಾರ್ಗವಾಗಿ ಲಾಲ್ಬಾಗ್ ವೃತ್ತದವರೆಗೆ ಸಾಗಲಿದೆ. ಲಾಲ್ಬಾಗ್ನ ಗಾಂಧಿ ಪುತ್ಥಳಿಗೆ ಹಾರ ಹಾಕುವ ಮೂಲಕ ಪಾದಯಾತ್ರೆ ಸಂಪನ್ನಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಟಿ.ಕೆ.ಸುಧೀರ್, ಅಬ್ದುಲ್ ಸಲೀಂ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ಹೈದರಾಲಿ, ರಿತೇಶ್ ಇದ್ದರು.