9:24 AM Saturday4 - May 2024
ಬ್ರೇಕಿಂಗ್ ನ್ಯೂಸ್
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ… ಮನೆಯ ಮೇಲೆ ಸಿಸಿಬಿ ದಾಳಿ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ; 16… ಈಶ್ವರಪ್ಪ ಪುತ್ರನಿಗೂ ಅಶ್ಲೀಲ ವೀಡಿಯೊ, ಫೋಟೋ, ವರದಿ ಭೀತಿ: ನ್ಯಾಯಾಲಯದಿಂದ ತಡೆಯಾಜ್ಞೆ ತಂದ… ತಾತನಿಂದಲೇ ಮೊಮ್ಮಗನ ಮೇಲೆ ಕ್ರಮ: ಜೆಡಿಎಸ್ ನಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ… ಸಂಸದ, ಕೇಂದ್ರ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿಧನ: ಪ್ರಧಾನಿ ಮೋದಿ ಸಹಿತ…

ಇತ್ತೀಚಿನ ಸುದ್ದಿ

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ: ಖಾಸಗಿ ಶಾಲೆಗಳ ಫೀಸ್ ಮಾಫಿಯಾಕ್ಕೆ ಕುಮ್ಮಕ್ಕು?

22/06/2021, 17:57

ರಾಜೀವಿಸುತ ಬೆಂಗಳೂರು

info.reporterkarnataka@gmail.com

ಮಾನ್ಯ ಶಿಕ್ಷಣ ಸಚಿವರೇ, ನಿಮ್ಮ ಮೇಲೆ‌ ಇರುವ ಗೌರವದಿಂದಲೇ ಈ ಮಾತುಗಳನ್ನು ಬರೆಯುತ್ತಿದ್ದೇನೆ. 

ಕಳೆದ ಎರಡು ವರ್ಷಗಳಿಂದ ಸಂಬಳವನ್ನೇ ಪಡೆಯದೆ ಅಥವಾ 3-4 ಸಾವಿರ ರೂಗಳ ಅರ್ಧ ಸಂಬಳ ತೆಗದುಕೊಳ್ಳುತ್ತಿರುವ ಶಿಕ್ಷಕರು ಒಂದು ಕಡೆಯಾದರೆ , ಇನ್ನೊಂದು ಕಡೆ ಫೀಸ್ ಕಟ್ಟಲು ಪರದಾಡುತ್ತಿರುವ ಪೋಷಕರು ನಿಮ್ಮ ಕಣ್ಣ ಎದುರೇ ಇದ್ದಾರೆ. ಇಬ್ಬರಿಗೂ ಆ ನಿಮ್ಮ‌ ‘ಅಡ್ಡಗೋಡೆಯ ಮೇಲಿನ ದೀಪದ’ ಮಾತುಗಳು‌ ಪರಿಹಾರ ಅಥವಾ ಭವಿಷ್ಯದ ಭಯವನ್ನು ಹೋಗಲಾಡಿಸಲಾರವು.  ಸದ್ಯದ ಪರಿಸ್ಥಿತಿಯನ್ನು ನೀವು  ಈ “ಅಸಹಾಯಕತೆಯ ದೃಷ್ಟಿ”ಯಲ್ಲಿ ನೋಡುವ ಬಗೆಯೇ ನಿಜಕ್ಕೂ‌ ದುರಂತ. ನಿಮ್ಮ ಈ ಸೌಜನ್ಯದ ಮಾತುಗಳು ಹೆಚ್ಚು ಖಾಸಗಿ ಶಾಲೆಗಳ‌ ಕಡೆಗೆ ವಾಲಿರುವಂತೆ ಕಾಣಿಸುತ್ತಿವೆ. ಅಧಿಕಾರದಲ್ಲಿರುವವರು ಅಸಹಾಯಕತೆಯ ಮಾತುಗಳನ್ನಾಡಿದರೆ ಸಾಮಾನ್ಯ ಜನರು ಕಂಗಾಲಾಗುತ್ತಾರೆ. ಜೊತೆಗೆ ಖಾಸಗಿ ಶಾಲೆಗಳ‌ ಫೀಸ್ ಮಾಫಿಯಾಗೆ ಸರ್ಕಾರವೇ ಕುಮ್ಮಕ್ಕು ನೀಡಿದಂತಾಗುತ್ತದೆ.

ಇನ್ನು ನಿಮ್ಮ ಇಡೀ ಬರಹದಲ್ಲಿ ನೀವು ಶುಲ್ಕದ‌ ಬಗ್ಗೆ ಮಾತನಾಡುವಾಗ “ಆರ್ಥಿಕವಾಗಿ ತುಂಬಾ ತೊಂದರೆ ಇರುವವರಿಗೆ ನಮ್ಮ ಸರ್ಕಾರಿ ಶಾಲೆಗಳಿವೆ, ನಾನು ನಿಮಗೆ ಅತ್ಯುತ್ತಮ ಶಿಕ್ಷಣದ ಭರವಸೆ ಕೊಡುವೆ” ಎಂದು ಹೇಳಲೇ ಇಲ್ಲ ಎಂಬುದು ಮತ್ತೂ ಖೇದದ ವಿಷಯ. ಸರ್ಕಾರಿ ಶಾಲೆಗಳ ಮೇಲೆ ಸ್ವತಃ ನಿಮಗೇ ನಂಬಿಕೆ ಇಲ್ಲವೇ?. 

ಈಗಲಾದರೂ ಸರಕಾರಿ ಶಾಲೆಯಲ್ಲಿ ಬರೀ ಬಿಸಿಯೂಟ, ಉಚಿತ ಸೈಕಲ್, ಹಾಲು ಮೊಟ್ಟೆ , ಯೂನಿಫಾರಂ , ಶೂ ಮಾತ್ರವಲ್ಲದೇ ಸ್ವಲ್ಪ ಗುಣಮಟ್ಟದ ಶಿಕ್ಷಣವನ್ನು ಕೊಡುವತ್ತ ಗಮನಹರಿಸಿ ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ‌ ಕೊಡುವ ವಾತಾವರಣ ನಿರ್ಮಿಸಿ.‌ ಎಲ್ಲೆಲ್ಲಿಯೋ ಕೋಟಿಗಟ್ಟಲೆ ಹಣವನ್ನು ವ್ಯರ್ಥ ಮಾಡುವ ಸರ್ಕಾರ , ಕನಿಷ್ಟ ಸರ್ಕಾರಿ‌ ಶಾಲೆಗಳ ಕಟ್ಟಡಗಳನ್ನು ಉದ್ದದ ರೈಲ್ವೆಬೋಗಿಯಂತೆ‌ ಇರುವ ತರಗತಿಗಳನ್ನು ಸುಂದರವಾಗಿ ಅಚ್ಚುಕಟ್ಟಾಗಿ ಕಾಣುವಂತೆ ನಿರ್ಮಾಣ ಮಾಡುವತ್ತ ಗಮನಹರಿಸಲಿ. ಆಗ ಪೋಷಕರೇ ಸರ್ಕಾರದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ.

ಇನ್ನಾದರೂ ದ್ವಂದ್ವ ನಿಲುವುಗಳನ್ನು ತೆಗೆದುಕೊಳ್ಳದೆ ನಿಮ್ಮ ನಿಲುವುಗಳು ಸೃಷ್ಟವಾಗಿರಲಿ. “ಹಾವು ಸಾಯಬಾರದು ಕೋಲು ಮುರಿಯಬಾರದು” ಎಂಬ ನೀತಿ ಬಹಳ ದಿನ ಫಲ‌ ನೀಡದು ಮತ್ತು ತಮ್ಮಂಥ ಸಜ್ಜನರಿಗೆ ಅದು ಶೋಭೆಯೂ ಅಲ್ಲ.

(ಇದು ನೊಂದ ಸಾರ್ವಜನಿಕರೊಬ್ಬರು ರಿಪೋರ್ಟರ್ ಕರ್ನಾಟಕಕ್ಕೆ ಬರೆದ ಪತ್ರ)

ಇತ್ತೀಚಿನ ಸುದ್ದಿ

ಜಾಹೀರಾತು