1:56 PM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಕೂಡ್ಲಗಿ: ಕಾಡು ಪ್ರಾಣಿಗಳ ಹಾವಳಿಯಿಂದ ಮೆಕ್ಕೆಜೋಳ, ಶೇಂಗಾ ಬೆಳೆ ಮೊಳಕೆಗೆ ಮುನ್ನವೇ ನಾಶ; ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತರು

24/07/2022, 15:02

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com  

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿ ಗ್ರಾಮದಲ್ಲಿ ಕಾಡು ಹಂದಿಗಳ ಹಿಂಡು ಕೃಷಿಕರ ಜಮೀನಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಗು ಶೇಂಗಾ ಬೆಳೆಗಳನ್ನು ನಾಶಮಾಡುತ್ತಿವೆ.


ಮೆಕ್ಕೆಜೋಳ ಬೆಳೆಯಲು 1 ಎಕರೆ ಜಮೀನಗೆ 2 ಪಾಕೇಟ್ ಬೀಜ,  2 ಚೀಲ ರಾಸಾಯನಿಕ ಗೊಬ್ಬರ, ಬಿತ್ತನೆ ಸೇರಿ ಸುಮಾರು 10 ಸಾವಿರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಆದೇರೀತಿ ಶೇಂಗಾ ಬೆಳೆಯಲು 1ಎಕರೆ ಜಮೀನಗೆ 50kg ಬೀಜ, 2 ಚೀಲ ರಾಸಾಯನಿಕ ಗೊಬ್ಬರ ಬಿತ್ತನೆ ಸೇರಿ ಸೂಮಾರು 12 ಸಾವಿರ ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡುತ್ತಾರೆ. ಬಿತ್ತನೆ ಮಾಡಿದ ಹೊಲದಲ್ಲಿ ಮೆಕ್ಕೆಜೋಳ ಹಾಗು ಶೇಂಗಾ ಬೀಜಗಳನ್ನು ಕಾಡುಹಂದಿಗಳು (ಮಿಕ) ನಾಶ (ಗೂರಿ) ಮಾಡಿ ರೈತರನ್ನು ಹೈರಾಣಗಿಸಿವೆ. ಬಹುತೇಕ ಕೃಷಿಕರ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೀಜಗಳನ್ನು ಕಾಡು ಹಂದಿಗಳು ನಾಶ ಮಾಡಿವೆ. ಬಿತ್ತನೆ ಮಾಡಿದ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಕಾಡು ಪ್ರಾಣಿಗಳಾದ ಕರಡಿ ಚಿರತೆ ದಾಳಿಗಳ ಆತಂಕ ನಡುವೆ ಕಾಡುಂದಿಗಳಿಂದ ಬಿತ್ತನೆ ಮಾಡಿದ ದಿನದಿಂದ ಮೊಳಕೆ ಹೊಡೆಯುವತನಕ ಬೀಜಗಳನ್ನು ರಕ್ಷಣೆ ಮಾಡಲು ರಾತ್ರಿಯಿಡೀ ಜಾಗರಣೆ ಮಾಡಿ, ಧ್ವನಿವರ್ಧಕ ಎಣ್ಣೆ ಡಬ್ಬಿಗಳ ಶಬ್ದಗಳ ಮೂಲಕ ಬೆದರಿಸಿ ಬೆಳೆಗಳನ್ನು ರಕ್ಷಣೆ  ಮಾಡಬೇಕಾಗಿದೆ.  ಮೊದಲೆಲ್ಲಾ ಅರಣ್ಯ ದಂಚಿನ ಕೃಷಿ ಜಮೀನುಗಳಲ್ಲಿ ಮಾತ್ರ ಕಾಡು ಪ್ರಾಣಿಗಳ ಬೆಳೆಗಳನ್ನು ನಾಶ ಮಾಡುತ್ತಿದ್ದವು. ಆದರೆ ಈಗ ಎಲ್ಲಾ ಪ್ರದೇಶದ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಕಂಡುಬರುತ್ತದೆ.  ಬಿತ್ತನೆ  ಬೀಜದಿಂದ ಆಧಿಯಾಗಿ ಬೆಳೆಗಳ ಸಂರಕ್ಷಸಲು ಪರಿ ಪರಿಯಾದ ಸಮಸ್ಯೆಗಳು ಕೃಷಿಕರಿಗೆ ತಂದೊಡ್ಧಿದೆ. ಇದು ಬಹಳ ತೆಲೆನೋವಾಗಿ ಕಾಡುತ್ತಿದೆ. ನಾಶವಾದ ಬೆಳೆಗಳಿಗೆ ಪರಿಹಾರ ಸಿಗುತ್ತಿಲ್ಲ. ಸರ್ಕಾರದ ಇನ್ನಿತರ ಸೌಲಭ್ಯ ಗಳು ಮಾಹಿತಿಗಳು ರೈತರಿಗೆ ಸರಿಯಾಗಿ ತಲುಪುತ್ತಿಲ್ಲ. ಕಾರಣ ಮಾಹಿತಿ ಕೊರತೆಯಿಂದ  ಸಂಕಷ್ಟಗಳು ತಪ್ಪಿದ್ದಲ್ಲ. ಅದ್ದರಿಂದ ಸಂಭಂದ ಪಟ್ಟ ಇಲಾಖಾಧಿಕರಿಗಳು, ರೈತರಿಗೆ ಮಾಹಿತಿ ತಿಳಿಸುವುದರ ಜೊತೆಗೆ  ರೈತರ ನೆರವುಗೆ ದಾವಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು