3:32 PM Thursday19 - March 2026
ಬ್ರೇಕಿಂಗ್ ನ್ಯೂಸ್
ಕುಶಾಲನಗರದಲ್ಲಿ ವೇಶ್ಯವಾಟಿಕೆ: ಇಬ್ಬರ ಬಂಧನ: ಇನ್ನಿಬ್ಬರು ಯುವತಿಯರು ಸಾಂತ್ವನ ಕೇಂದ್ರಕ್ಕೆ ರಾ.ಹೆ 275 ಬದಿಯ ಅನಧಿಕೃತ ಜಾಹೀರಾತು ಫಲಕ, ಹಣ್ಣಿನ/ಗೂಡಂಗಡಿ ತೆರವುಗೊಳಿಸಲು ಕೊಡಗು ಜಿಲ್ಲಾಡಳಿತ… ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆ: ಕಾಫಿ ತೋಟದಲ್ಲಿ ಮಲ್ಲಿಗೆ ಹೂವಿನ ಚಿತ್ತಾರ ಮಡಿಕೇರಿಯ ರಾಜಕಾಲುವೆಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ: ಸ್ಥಳೀಯರಿಂದ ರಕ್ಷಣೆ ಕೃಷಿ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಸದನದಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿ ಭರವಸೆ ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೊಂದು ಹುಲಿ ಬಲಿ: ಗುಂಡ್ಲುಪೇಟೆಯ ಪಡಗೂರಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಾವು Chikkamagaluru | ಕೈ ಮುಖಂಡನ ವಿರುದ್ಧ ನ್ಯಾಯಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ… ಸಚಿವರೇ ಇಲ್ಲ.. ಏನ್ ಮಾಡ್ಬೇಕು..?’ ಈಗ ಹೊರಟ್ಟಿ ಸರದಿ: ಸಚಿವರ ಗೈರು ಕುರಿತು… ಯುಗಾದಿ ಮತ್ತು ರಂಜಾನ್ ಹಬ್ಬಗಳ ಸರಣಿ ರಜೆ | ಪ್ರಯಾಣಿಕರಿಗೆ ಶಾಕ್‌: ಖಾಸಗಿ… Kodagu | ಅಕಾಲಿಕ ಮಳೆ: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಾನಿ

ಇತ್ತೀಚಿನ ಸುದ್ದಿ

‘ಮಿಸ್ಟರ್ ಹುಬ್ಬಳ್ಳಿ’ ಮಿಲನ್ ಗೆ ಕರ್ನಾಟಕ ವಿವಿ ಡಾಕ್ಟರೇಟ್ಪದವಿ ಪ್ರದಾನ

18/07/2022, 23:24

ಧಾರವಾಡ(reporterkarnataka.com): ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಹಾಗೂ ಸೂಕ್ಷ್ಮ ಜೀವಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಿಲನ ವಿ. ಕಾಂಬಳೆ ಅವರು ಮಂಡಿಸಿದ “ಐಡೆಂಟಿಫಿಕೇಶನ್ ಆ್ಯಂಡ್ ಕ್ಯಾರಕ್ಟರೈಜೇಶನ್ ಆಫ್ ಡೌನಿ ಮೆಲ್ಡಿವ್ ರೆಸ್ಪಾನ್ಸಿವ್ ಮೈಕ್ರೊಆರ್‌ಎನ್‌ಯೆಸ್ ಇನ್ ಇಂಡಿಯನ್ ವಿಟಿಸ್ ವಿನಿಫೆರಾ ಬೈ ಹಾಯ್- ಥ್ರೋಪುಟ್ ಸಿಕ್ವೆನ್ಸಿಂಗ್” ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ.

ಇವರಿಗೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧೀಶ ಜೋಗಯ್ಯ ಅವರು ಮಾರ್ಗದರ್ಶನದಲ್ಲಿ ಮಹಾ ಪ್ರಬಂಧ ಮಂಡಿಸಿದ್ದರು.ಬಹುಮುಖ ಪ್ರತಿಭೆ: ಸಾಮಾನ್ಯ ಕುಟುಂಬವೊಂದರಿಂದ ಬಂದ ಮಿಲನ್ ಕಾಂಬಳೆ  ಎಲ್ಲ ಕಷ್ಟಗಳ ಮಧ್ಯಯೂ ತಮ್ಮೆಲ್ಲ ಆಸಕ್ತಿಗಳನ್ನು ಪೋಷಿಸುತ್ತಲೆ ಬಂದ ಒಬ್ಬ ಬಹುಮುಖ ಪ್ರತಿಭೆ. ತಮ್ಮ ಕಾಲೇಜು ದಿನಗಳಿಂದಲೂ ನೃತ್ಯ, ಹಾಗೂ ಬಾಡಿ ಬಿಲ್ಡಿಂಗ್ ಕುರಿತು ಅಪಾರ ಆಸಕ್ತಿಯನ್ನು ಹೊಂದಿದ್ದರು. 

ಇವರು  ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದ್ದಾರೆ. 

ಮಿಸ್ಟರ್ ಹುಬ್ಬಳ್ಳಿ: ಧಾರವಾಡ ಬಾಡಿ ಬಿಲ್ಡಂಗ್ ಅಸೋಯೇಶನ್ ವತಿಯಿಂದ ಹುಬ್ಬಳ್ಳಿಯಲ್ಲಿ ಜರುಗಿದ ೧೯ನೇ ಮಿಸ್ಟರ್ ಹುಬ್ಬಳ್ಳಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಸಿ ಮಿಸ್ಟರ್ ಹುಬ್ಬಳ್ಳಿ ಎನಿಸಿದ್ದರು. 

ಈ ಮೂಲಕ ಸಂಶೋಧನೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಮಿಲನ್ ಸಾಧನೆ ಮಾಡಿದ್ದಾರೆ. 

ತಮ್ಮ ಸಂಶೋಧನಾ ಅವಧಿಯಲ್ಲಿ ಮಿಲನ್ ಚೀನಾ ಸೇರಿದಂತೆ ಇತರಡೆ ಪ್ರವಾಸ ಕೈಗೊಂಡು ಸಂಶೋಧನಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಒಟ್ಟಿನಲ್ಲಿ ಸಂಶೋಧಕರು ಎಂದ ತಕ್ಷಣ ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಲ್ಲ ದೇಹದಾರ್ಢ್ಯಕ್ಕೂ ಸೈ ಎಂದು ಮಿಲನ್ ತಮ್ಮ ಪ್ರತಿಭೆಯ ಮೂಲಕ ತೋರಿಸಿಕೊಟ್ಟಿದ್ದಾರೆ.

ಮಿಲನ್‌ನ ಈ ಸಾಧನೆಗೆ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಮತ್ತು ಸ್ಮೂಕ್ಷ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎ.ಬಿ. ವೇದಮೂರ್ತಿ ಮತ್ತು ಸಂಶೋಧನಾ ಮಾರ್ಗದರ್ಶಕರಾದ   ಡಾ. ಸುಧೀಶ ಜೋಗಯ್ಯ ಅವರು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು