11:54 PM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಸಂಬಳದ ಹೆಂಡ್ತಿಯಾಗಲು ಪ್ರಶಸ್ತಿ ವಿಜೇತ ನಟಿಗೆ ಉದ್ಯಮಿ ಆಫರ್: ಆತ ಫಿಕ್ಸ್ ಮಾಡಿದ ತಿಂಗಳ ಸ್ಯಾಲರಿ ಎಷ್ಟು ಗೊತ್ತೆ?

15/07/2022, 08:22

ಮುಂಬೈ(reporterkarnataka.com):
ಉದ್ಯಮಿಯೊಬ್ಬರು ತಮ್ಮ ಸಂಬಳದ ಹೆಂಡತಿಯಾಗಲು ಖ್ಯಾತ ನಟಿಯೊಬ್ಬಳಿಗೆ ಆಫರ್ ನೀಡಿದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸಂದರ್ಶನವೊಂದರಲ್ಲಿ ನಟಿ ನೀತು ಚಂದ್ರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಿಂಗಳಿಗೆ 25 ಲಕ್ಷ ನೀಡುವುದಾಗಿ ಆಫರ್ ಮಾಡಿದ್ದರು ಎಂದು  ನೀತು ಚಂದ್ರ ಹೇಳಿದ್ದಾರೆ.

ನಟಿ ನೀತು ಚಂದ್ರ, ’13 ರಾಷ್ಟ್ರೀಯ ಪ್ರಶಸ್ತಿ ವಿಜೇತರ’ ಜೊತೆ ಕೆಲಸ ಮಾಡಿದರೂ, ಈಗ ನನ್ನತ್ರ ಹಣವೂ ಇಲ್ಲ, ಕೆಲಸವೂ ಇಲ್ಲ ಎಂದು ಹೇಳಿದ್ದಾರೆ. ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರೊಬ್ಬರು ಆಡಿಷನ್ ಮಾಡಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ ಒಂದು ಗಂಟೆಯೊಳಗೆ ತಿರಸ್ಕರಿಸಿದರು ಎಂದು ನೆನಪಿಸಿಕೊಂಡ ನೀತು. ತನ್ನ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ನೀತು ಚಂದ್ರ ಅವರು ಗರಂ ಮಸಾಲಾ (2005) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಗಗನಸಖಿಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದೀಚೆಗೆ ಅವರು ಟ್ರಾಫಿಕ್ ಸಿಗ್ನಲ್, ಒನ್ ಟೂ ತ್ರೀ, ಓಯ್ ಲಕ್ಕಿ ಲಕ್ಕಿ ಓಯೆ, ಅಪಾರ್ಟ್‌ಮೆಂಟ್, 13 ಬಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆಫಾಲಿ ಶಾ, ರಾಹುಲ್ ಬೋಸ್ ಮತ್ತು ಸುಮೀತ್ ರಾಘವನ್ ಜೊತೆಗಿನ ಕುಚ್ ಲವ್ ಜೈಸಾ ನಟಿ ನೀತು ಚಂದ್ರ ಅವರ ಕೊನೆಯ ಹಿಂದಿ ಚಿತ್ರವಾಗಿದೆ.

ಇನ್ನು, ಓಯೆ ಲಕ್ಕಿ ಲಕ್ಕಿ ಓಯೆ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ನೀತೂ ಅಭಿನಯದ ಮಿಥಿಲಾ ಮಖಾನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು