5:19 PM Saturday14 - March 2026
ಬ್ರೇಕಿಂಗ್ ನ್ಯೂಸ್
ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ

ಇತ್ತೀಚಿನ ಸುದ್ದಿ

ಪೂಜಾರಳ್ಳಿ: “ಕೆರೆ ಉಳಿಸಿ-ರೈತರ ಹೊಲಗಳಿಗೆ ನೀರುಣುಸಿ” ಹೋರಾಟ, ಎಐಕೆಎಸ್ ನಿಂದ  ಡಿಸಿಗೆ ಒತ್ತಾಯ

12/06/2022, 23:00

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಪೂಜಾರಹಳ್ಳಿ ಕೆರೆಯಲ್ಲಿ, ” ಕೆರೆ ಉಳಿಸಿ ರೈತರ ಭೂಮಿಗಳಿಗೆ ನೀರುಣಿಸಿ” ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಕಿಸಾನ್ ಸಭಾ(AIKS) ಕೂಡ್ಲಿಗಿ ತಾಲೂಕು ಸಮಿತಿ, ಹಾಗೂ ಕನ್ನ ಬೋರಯ್ಯನ ಹಟ್ಟಿ  ಪೂಜಾರಹಳ್ಳಿ ತಾಂಡಾದ ಸಾವಿರಾರು ಜನಗಳ ನೇತೃತ್ವದಲ್ಲಿ ಹೋರಾಟದ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಮೂಲಕ ಕೆರೆಯ ಉಳಿಸುವ ಹೋರಾಟ ಮಾಡಲಾಯಿತು.

ವಿಜಯನಗರ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಲಾಯಿತು. ಇದರ ಫಲವಾಗಿ ಕೆರೆ ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿದರು.

ಕೆರೆಯ ಗಡಿ ಗುರುತಿಸಿ ಹದ್ದು ಬಸ್ತ್ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸೂಚನೆಯಂತೆ ಜೂನ್10ರಂದು ಪೂಜಾರಳ್ಳಿ  ಕೆರೆಗೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಕೆರೆಗೆ ಭೇಟಿ ನೀಡಿದರು. ಜಿಲ್ಲಾ ಅಪರ ಜಿಲ್ಲಾಧಿಕಾರಿ ಮಹೇಶಬಾಬು,ಜಿಲ್ಲಾ ಸರ್ವೆ ಇಲಾಖಾಧಿಕಾರಿ ಕುಸುಮಾ ಲತಾ, ತಹಶಿಲ್ದಾರರಾದ ಟಿ.ಜಗದೀಶ, ಕೂಡ್ಲಿಗಿ ತಾಲೂಕು ಸರ್ವೆ ಅಧಿಕಾರಿ ಕರಿಯಣ್ಣ ಹಾಗೂ ಸಿಬ್ಬಂದಿ, ಉಪ ತಹಶಿಲ್ದಾರರು ಹಾಗೂ ಕಂದಾಯ ಇಲಾಖಾ ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗ್ರ‍ಾಮ ಪಂಚಾತಿತಿ ಅಧ್ಯಕ್ಷೆ ಶಿಲ್ಪ ಬಸಪ್ಪ,ಸದಸ್ಯರಾದ ನಾಗೇಶ ಸೆರಿದಂತೆ ಬಹುತೇಕ ಗ್ರಾಪಂ ಸದಸ್ಯರು. ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಹೆಚ್.ವೀರಣ್ಣ ಅವರು ಮಾತನಾಡಿ, ಇದು ಅಖಿಲ ಭಾರತ ಕಿಸಾನ್ ಸಭಾ ದ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಗೆಲುವಿನ ಪ್ರಥಮ ಹೆಜ್ಜೆಯಾಗಿದೆ ಅಂತಿಮವರೆಗೂ ಹೋರಾಟ ನಿಲ್ಲದು,ಸುಮಾರು 50ಎಕರೆ ಗೂ ಹೆಚ್ಚು ಕೆರೆಯ ಭೂಮಿ ಒತ್ತುವರಿಯಾಗಿರುವುದು ಸಾಬೀತಾಗಿದೆ. ಮನೆಗಳನ್ನು ನಿರ್ಮಿಸಲಾಗಿದೆ ಹಾಗೂ ಕೆಲವರು ಬಿತ್ತನೆ ಮಾಡಿಕೊಂಡಿದ್ದಾರೆ. ಅಕ್ರಮ ವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು, ಶೀಘ್ರವೇ ತೆರವುಗೊಳೊಸಬೇಕಿದೆ. ಇಲ್ಲವಾದಲ್ಲಿ ಹೋರಾಟ ನಿರಂತರ ನಡೆಯಲಿದೆ. ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ಕಂದಾಯ ಇಲಾಖೆ ಹಾಗೂ ಕೆಲ ಇಲಾಖೆಗಳ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗಲಿದೆ  ಎಂದು ಅವರು ಎಚ್ಚರಿಸಿದ್ದಾರೆ. 


ಕಾರ್ಮಿಕ ಮುಖಂಡರಾದ ದಾಸಣ್ಣ ಮಹೇಶ್,ಗೆದ್ದಯ್ಯ,ಸಿದ್ದಲಿಂಗಸ್ವಾಮಿ, ಜಿ.ಎಚ್.ಅಂಜನಿ, ಅಜ್ಜನ ಬೋರಣ್ಣ,ಕೋಟಗಿ ತಿಪ್ಪೇಸ್ವಾಮಿ, ಓಬಣ್ಣ,ಬೋರಯ್ಯ, ನಾಗರಾಜಪ್ಪ, ಎನ್.ಪಿ.ವೆಂಕಟೇಶ್ ಸೇರಿದಂತೆ ಪೂಜಾರಿಹಳ್ಳಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ತಕರ್ತರು, ಗ್ರಾಮಸ್ಥರು ಹಾಗೂ ಕಾರ್ಮಿಕರು ಇದರು.

ಇತ್ತೀಚಿನ ಸುದ್ದಿ

ಜಾಹೀರಾತು