1:38 PM Saturday25 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಐನಾಪುರ: ಕೃಷ್ಣಾ ಕಿತ್ತೂರ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಕಳಸಾರೋಹಣ ಸಂಪನ್ನ

14/05/2022, 22:22

ಬೆಳಗಾವಿ(reporterkarnataka.com):
ಒಳ್ಳೆಯದನ್ನು ನೋಡಬೇಕು, ಕೇಳಬೇಕು, ಉಣ್ಣಬೇಕು, ತಿನ್ನಬೇಕು,l. ಅಷ್ಟೇಯಲ್ಲದೆ.ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ  ಸಿದೇಶ್ವರ ಮಹಾಸ್ವಾಮಿಜಿ ಹೇಳಿದರು.

ಅವರು ಐನಾಪುರ ಸಮೀಪದ ಕೃಷ್ಣಾ ಕಿತ್ತೂರ ಗ್ರಾಮದ ಮಹಾಲಕ್ಷ್ಮಿ ದೇವಿ ಕಮಿಟಿ ಮತ್ತು ಸಮಸ್ತ ನಾಗರಿಕರು ಆಯೋಜಿಸಿದ  ಶ್ರೀ ಮಹಾಲಕ್ಷ್ಮೀ ದೇವಿಯ ದೇವಸ್ಥಾನದ  ಕಳಸಾರೋಹಣವನ್ನು ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.

ಈ ಶರೀರಕ್ಕೆ ಪ್ರಾಸಾದ ಭಾವ ಬರಲ್ಲಿ ಅಂತಾ ಗುಡಿಗಳನ್ನು ಕಟ್ಟುತ್ತಾರೆ. ಗುಡಿಗಳು ನಮ್ಮಗೆ ಪಾಠಯಲಿಕ್ಕೆ ಇರುತ್ತವೆ. ಗುಡಿಗಳನ್ನು ಸುಂದರವಾಗಿ ಕಟ್ಟಿದಿರಿ. ಅವುಗಳು ಪಾವಿತ್ರತೆ ಪಡೆದಿವೆ. ಅದೇ ರೀತಿ ದೇವರು ಕಟ್ಟಿದ ಗುಡಿಗಳು ಅಂದರೆ ನಿಮ್ಮ ದೇಹಗಳು ಎಷ್ಟು ಪಾವಿತ್ರ್ಯ ಪಡೆದಿವೆ. ದೇವರು ಕಟ್ಟಿದ ಗುಡಿಗಳು ನೀವೆಲ್ಲ ಎಷ್ಟು ಭಾಗ್ಯಶಾಲಿಗಳು ಎಂದು ಹೇಳಿದರು.

ಸಾನಿಧ್ಯ ವಹಿಸಿದ ಗದಗ ಬ್ರಹನ್ಮಠದ ಸದಾಶಿವಾನಂದ ಸ್ವಾಮಿಜಿ ಆರ್ಶಿವಚನ  ನೀಡಿ ಶ್ರೀ ಮಹಾಲಕ್ಷ್ಮಿ ದೇವಿ ಗುಡಿಗೆ ಅತ್ಯಂತ ಸುಂದರವಾದ ಗೋಪುರ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಇದು ದಕ್ಷಿಣ ಭಾರತದಲ್ಲಿ ವೈಶಿಷ್ಟ್ಯ ಪೂರ್ಣ ವಾದದು. ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟುವುದು ರಾಜಗೋಪುರ ನಿರ್ಮಾಣ ಮಾಡುವದು  ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು. 


ಸಾನಿದ್ಯವನ್ನು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮಿಜಿ ವಹಿಸಿದರು. ನೇತ್ರತ್ವವನ್ನು ಐನಾಪುರ ಕೃಷ್ಣಾಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ವಹಿಸಿದರು. ಅಥಣಿ ಶುರ್ಗಸನ ವ್ಯವಸ್ಥಾಪಕ ನಿದೇರ್ಶಕ ಯೋಗೇಶ ಪಾಟೀಲ, ತಹಸೀಲ್ದಾರ ಆರ್ ಆರ್ ಬುರ್ಲಿ, ಕಾಗವಾಡ ಪಿ ಎಸ್ ಐ ಭೀಮಪ್ಪಾ ರಬಕವಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು