7:47 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಪೊಲೀಸ್ ಗೆ ಆವಾಜ್: ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಲೀಕ್

06/05/2022, 08:39

ಚಿಕ್ಕಮಗಳೂರು(reporterkarnataka.com) : ಮೂಡಿಗೆರೆ  ಶಾಸಕ ಎಂ. ಪಿ. ಕುಮಾರಸ್ವಾಮಿ ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗಿದೆ. ಕುಮಾರಸ್ವಾಮಿ ಹಾಗೂ ಪೊಲೀಸರ ಮಧ್ಯೆ ನಡೆದ ಸಂಭಾಷಣೆಯ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ .

ಕಾಕತಾಳೀಯ ಎನ್ನುವಂತೆ ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಿರುವ ಬೆನ್ನ ಹಿಂದೆ ಈ ಆಡಿಯೋ ಲೀಕ್ ಆಗಿರುವುದು ವಿಶೇಷ .

ಈ ಹಿಂದೆಯೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕರು ಆಡಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಕೆಲ ವಿವಾದಗಳು ನಡೆದಿದ್ದವು .

ಆಡಿಯೋದಲ್ಲಿ ಏನಿದೆ ?

ಶಾಸಕ : ಹಲೋ ಯಾರಪ್ಪಾ ಇದು ನಂಬರು ?

ಪೋಲಿಸ್ : ನಾನು ರವೀಶ್ ಮಾತಾಡೋದು ಸಾರ್ 

ಶಾಸಕ :ಈಗ ಎಲ್ಲಿದ್ದೀಯಪ್ಪ ನೀನು 

ಪೊಲೀಸ್ :ಸ್ಟೇಷನ್ ನಲ್ಲಿ ಸಾರ್

ಶಾಸಕ :ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು 

ಪೊಲೀಸ್ :  ಐಜಿ ಸಾರ್ ತಗೋ ಅಂತ ಹೇಳಿದ್ರು ಸಾರ್ 

ಶಾಸಕ : ವಾಪಸ್ ಹೊಗಲೇ.. ಮರ್ಯಾದೆಯಿಂದ ವಾಪಸ್ ಹೋಗು

ಪೊಲೀಸ್ : ನಾಳೆ ಬಂದ್ ನಿಮ್ಮನ್ನಾ  ಕಾಣ್ತೀನಿ  

 ಶಾಸಕ : ನನಗೆ ವಾಪಸ್ ಕಳಿಸುವುದು ಗೊತ್ತು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೀಯಾ ಎಲ್ಲಾ ಗೊತ್ತು ,

ಪೊಲೀಸ್ : ಇಲ್ಲ ಸಾರ್ ಯಾರಿಗೂ ಏನೂ ಕೊಟ್ಟಿಲ್ಲ ಐಜಿ ಹೇಳಿದ್ರು ಅಷ್ಟೆ 

ಶಾಸಕ : ಯಾವನ್ ಐಜಿ ?  ಮೂಡಿಗೆರೆಗೆ ನಾನೇ ದೊಡ್ಡವನು .ಮರ್ಯಾದೆಯಿಂದ ವಾಪಸ್ ಹೋಗು.(ಇಲ್ಲ ಸಾರ್ ನಾಳೆ ಬಂದು ಕಾಣುತ್ತೇನೆ )ಬಂದ ದಾರಿಯಲ್ಲೇ ವಾಪಸ್ ಹೋಗು

ಇತ್ತೀಚಿನ ಸುದ್ದಿ

ಜಾಹೀರಾತು