10:46 PM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಮಂಜು ಮುಚ್ಚಿದ ಕಾಫಿನಾಡ ಕೊಟ್ಟಿಗೆಹಾರ: ಕರ್ನಾಟಕದ ಕಾಶ್ಮೀರ ಅಂದ್ರು ಪ್ರವಾಸಿಗರು!!

05/05/2022, 07:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ರಸ್ತೆ ತುಂಬಾ ಭಾರೀ ಮಂಜು ಕವಿದಿರುವ ಪರಿಣಾಮ ವಾಹನ ಸವಾವರು ವಾಹನಗಳನ್ನ ಚಲಾಯಿಸೋದಕ್ಕೂ ಪರದಾಡುವಂತಹಾ ಸನ್ನಿವೇಶ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಎದುರಾಗಿದೆ. ಕೊಟ್ಟಿಗೆಹಾರ ಬೆಟ್ಟಗುಡ್ಡಗಳ ಮಧ್ಯೆ ಇರುವ ಪುಟ್ಟ ಹಾಗೂ ಸುಂದರ ಗ್ರಾಮ. ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸೋ ಚಾರ್ಮಾಡಿಘಾಟಿಗೆ ಅಂಟಿಕೊಂಡಂತೆಯೇ ಇರುವ ಊರು. ಚಾರ್ಮಾಡಿ ಘಾಟಿಯಲ್ಲಿ ಬೀಸುವ ಗಾಳಿ ಶಬ್ಧ ಕೂಡ ಈ ಊರಲ್ಲಿ ಕೇಳಿಸುತ್ತದೆ. ಜೊತೆಗೆ, ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಮಳೆ ಜೊತೆ ವರ್ಷಪೂರ್ತಿ ತಣ್ಣನೆಯ ಗಾಳಿ ಬೀಸುವ ಸ್ಥಳವಾಗಿದ್ದು, ವರ್ಷದ ಏಳೆಂಟು ತಿಂಗಳು ಮಂಜಿನಿಂದಲೇ ಕೂಡಿರುವ ಊರು. ಕರ್ನಾಟಕದ ಕಾಶ್ಮೀರ ಅಂದರೂ ತಪ್ಪಿಲ್ಲ. ಅದೇ ರೀತಿ, ಇಂದು ಕೂಡ ಕೊಟ್ಟಿಗೆಹಾರದಲ್ಲಿ ಭಾರೀ ಮಂಜು ಕವಿದಿದ್ದು ವಾಹನ ಸವಾರರು ಪರದಾಡುವಂತಾಗಿದೆ.


ಕೇವಲ ಕೊಟ್ಟಿಗೆಹಾರವಷ್ಟೆ ಅಲ್ಲದೆ ಧರ್ಮಸ್ಥಳ ಮಾರ್ಗದ ಚಾರ್ಮಾಡಿಘಾಟ್ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಬಾಳೂರು, ಕಳಸ ಮಾರ್ಗದಲ್ಲೂ ಕೂಡ ಯತೇಚ್ಛವಾಗಿ ಮಂಜು ಕವಿದಿರುವ ಪರಿಣಾಮ ವಾಹನ ಸವಾರರು ವಾಹನಗಳನ್ನ ಚಲಾಯಿಸಲು ಪರಿಪಾಟಲು ಅನುಭವಿಸಿದ್ದಾರೆ. ಧರ್ಮಸ್ಥಳ ಹಾಗೂ ಹೊರನಾಡಿಗೆ ಹೋಗುವ ಪ್ರವಾಸಿಗರು ಈ ಮಂಜಿನಲ್ಲಿ ವಾಹನ ಚಲಾಯಿಸೋದು ಸಹಾಸವೇ ಸರಿ ಎಂದು ವಾಹನಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿ ರಸ್ತೆ ಬದಿಯ ಕ್ಯಾಂಟೀನ್‍ಗಳಲ್ಲಿ ಬೋಂಡ, ಬಜ್ಜಿ, ಕಾಫಿ-ಟೀ ಜೊತೆ ನೀರ್ ದೋಸೆ ತಿಂದು ಮಿಸ್ಟ್ ಸ್ವಲ್ಪ ಕಡಿಮೆಯಾದ ಬಳಿಕ ಹೋಗುತ್ತಿದ್ದಾರೆ. ಫಾಗ್ ಲೈಟ್ ಹಾಗೂ ಹೆಡ್‍ಲೈಟ್ ಹಾಕಿಕೊಂಡೇ ಸಾಗುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಿಂದ ಧರ್ಮಸ್ಥಳ ಹಾಗೂ ಹೊರನಾಡಿನ ಎರಡು ಮಾರ್ಗಗಳೂ ಹಾವು-ಬಳುಕಿನ ಮೈಕಟ್ಟಿನ ತಿರುವುಗಳ ರಸ್ತೆಯಾಗಿದ್ದು ಈ ಮಂಜಿನ ಮಧ್ಯೆ ತಿರುವುಗಳಲ್ಲಿ ಹೆಡ್‍ಲೈಟ್-ಫಾಗ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸೋದಕ್ಕೂ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಲ್ಲಿ ಉರಿಯುವ ದೀಪದ ಬೆಳಕಿಗೆ ಮಂಜು ಸೇರಿ ಮತ್ತೊಂದು ಲೋಕವೇ ಸೃಷ್ಟಿಯಾಗಿದೆ. ಆದರೆ, ಪ್ರವಾಸಿಗರು ಈ ಕಷ್ಟ-ನಷ್ಟದ ಮಧ್ಯೆಯೂ ಮಂಜಿನಿಂದ ಮುಳುಗಿರೋ ಕೊಟ್ಟಿಗೆಹಾರ ಹಾಗೂ ಮರಗಿಡಗಳ ಮೇಲೆ ಹಾಲ್ನೊರೆಯಂತೆ ಕೂತಿರೋ ಈ ಸುಂದರ ವಾತಾವರಣವನ್ನ ಕಂಡು ಇದು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು