4:58 AM Thursday3 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಹೊನ್ನಾವರದ ಗೇರುಸೊಪ್ಪಾ: ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ 

23/04/2022, 11:04

ಕಾರವಾರ(reporterkarnataka.con):

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪಾದ ಕೃಷ್ಣ ಕೆರೆಯಲ್ಲಿರುವ ವಿದ್ಯೋದಯ ಶಾಲೆಯಲ್ಲಿ ಉಚಿತ ಬೇಸಿಗೆ ರಜಾ ಶಿಬಿರ ಪ್ರಾರಂಭಗೊಂಡಿತು. 

ಪ್ರಥಮ ದಿನವಾದ ಏಪ್ರಿಲ್ 21 ರಂದು ಇಂಗ್ಲಿಷ್ ಲರ್ನಿಂಗ್ ವಿತ್ ಫನ್, ಚಿತ್ರಕಲೆ, ಇಂಗ್ಲಿಷ್ ಗ್ರಾಮರ್, ಹಾಡು ಇನ್ನು ಮುಂತಾದ ಅನೇಕ ಚಟುವಿಕೆಗಳೊಂದಿಗೆ ಮಕ್ಕಳು ನಲಿಯುತ್ತ ಕಲಿಯುತ್ತಾ ಸಂಭ್ರಮಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಿ. ಟಿ. ನಾಯ್ಕ್ ರವರು ಮಕ್ಕಳೊಂದಿಗೆ ಸಂಭ್ರಮಿಸುತ್ತಾ ತಣ್ಣನೆಯ ಐಸ್ ಕ್ರೀಂ ಮತ್ತು ಬಿಸ್ಕೆಟ್ ಗಳನ್ನು ಹಂಚಿದರು. ಮುಖ್ಯಾಧ್ಯಾಪಕಿ ಭಾರತಿ ಕುಲಕರ್ಣಿ ಮಕ್ಕಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಮಾತನಾಡಿ ಬೇಸಿಗೆ ರಜಾ ಶಿಬಿರ ಉಚಿತವಾಗಿ ಏಪ್ರಿಲ್ 21 ರಿಂದ ಮೇ 1ರ ವರೆಗೆ ನಡೆಯುತ್ತಿರುವುದರಿಂದ ಇದರ ಪ್ರಯೋಜನವನ್ನು ಇನ್ನೂ ಹೆಚ್ಚಿನ ಬಡ ವಿದ್ಯಾರ್ಥಿಗಳು ಪಡೆದುಕೊಳ್ಳುವಂತಾಗಬೇಕು ಎಂದರು.

ಶಿಕ್ಷಕರಾದ ಮೇಟಿಲ್ದಾ ಮಿರಾಂದ, ಅನಿತಾ ನಾಯ್ಕ್,  ಸುಜಾತಾ ನಾಯ್ಕ್ ಶಿಬಿರದ ಮಾರ್ಗದರ್ಶಕರಾಗಿದ್ದರು. ಪಾಲಕರು ಮಕ್ಕಳ ಕಲಿಕೆಯ ಆಸಕ್ತಿಯನ್ನು ಕಂಡು ಸಂತಸಪಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು